ಶನಿವಾರ, ನವೆಂಬರ್ 19, 2016

ನಮೋ ನಮ:! ದೇಶ ಕಂಡ ಅದ್ಬುತ ಪ್ರಧಾನಿ : ನರೇಂದ್ರ ಮೋದಿ

ಮೂರುವರೆ ವರ್ಷಗಳಲ್ಲಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ ಭಾರತದ ಪ್ರಥಮ ಪ್ರಧಾನ ಮಂತ್ರಿ....
ಮೂರು ವರ್ಷಗಳ ಕೆಳಗಿನ ಮಾತು ಆದಾಗಲೇ ಗುಜರಾತ್ ರಾಜ್ಯವನ್ನು ಅಭಿವೃದ್ದಿ ಪಡಿಸಿ ಉತ್ತುಂಗಕ್ಕೆ ಕೊಂಡು ಒಯ್ದಿದ್ದ ,ಸತತ ಮೂರನೇ ಬಾರಿಯೂ ಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದ ಸರೆಂದ್ರ ಮೊದಿಯೆಂಬ ಎಂಬ ಸಾಮಾನ್ಯ ವ್ಯಕ್ತಿಯ ಹೆಸರು ಭವಿಷ್ಯದ ಬಾರತದ ಪ್ರಧಾನಿಯಾದರೆ ಹೇಗೆ ? ಎಂಬ ವಿಚಾರ ಗುನುಗಿತ್ತಿತ್ತು ಹೆಚ್ಚಿನ ಸಮಯ ಬೇಕಾಗಿರಲಿಲ್ಲ ಪ್ರಧಾನಿ ಕುರ್ಚಿ ಚಾಯಿವಾಲಾ ಮೋದಿಯನ್ನು ಅರಸಿ ಕೊಂಡು ಬರುವುದಕ್ಕೆ.. ತತ್ಸಮಯದ ಪ್ರಜ್ಞಾವಂತರಲ್ಲಿ ಸಾಕಷ್ಟು ಉತ್ತರ ವಿಲ್ಲದ ಪ್ರಶ್ನೆಗಳೇ ಹರಿದಾಡಿದ್ದವು ಕೇವಲ ಗುಜರಾತ್ ರಾಜ್ಯವನ್ನು ಅಭಿವುದ್ಧಿ ಪಡಿಸಿದಂತೆ ಅರ್ಥಾತ್ ಒಂದೇ ರಾಜ್ಯವನ್ನು ಆಳಿದಂತೆ ತಮ್ಮ ಕೈಯಲ್ಲಿ ಈಗ ಮೂವತ್ತು ರಾಜ್ಯದ ವಸ್ತುವಾರಿಯನ್ನು ನಿಭಾಯಿಸಲು ಸಾಧ್ಯವೇ ? ಎಂಬಿತ್ಯಾದಿ ವ್ಯಂಗ್ಯ ರೀತಿಯ ಪ್ರಶ್ನಾವಳಿ, ಆಲೋಚನೆಗಳು ಓಡಾಡಿದ್ದಮ್ತೂ ಸತ್ಯ .
ಆದರೆ ಮೋದಿ ಎಲ್ಲವನ್ನೂ ಸುಳ್ಳು ಮಾಡಿ ಕೇವಲ ಮೂರುವರೆ ವರ್ಷಗಳಲ್ಲಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ. ಮೋದಿ ಮೊದಲು ಮಾಡಿದ ಕಾರ್ಯವೇ ದೇಶ ಪರ್ಯಟನೆ . ಹೌದು!, ಮೋದಿಗೇನು ದೇಶ ತಿರುಗಾಡ ಬೇಕೆಂಬ ಹಂಬಲ ,ವಾಂಛೆ ಇತ್ತೇ ? ಯಾಕೆ ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ದೇಶವನ್ನು ಸುತ್ತುತ್ತಿದ್ದರಲ್ಲ ಎಂಬಂತ ವ್ಯಂಗ್ಯ ನುಡಿ ಇದ್ದರೂ ಒಂದೇ ದಿನದಲ್ಲಿ ಮೂರು ದೇಶವನ್ನು ಸುತ್ತಿ ಬಂದದ್ದೂ ಎಲ್ಲವೂ ದಾಖಲೆ ಯಾದರೂ ಇದರ ಹಿಂದಿನ ಮರ್ಮ ಮೋದಿ ಗಲ್ಲದೇ ಬೇರೆ ಯಾರಿಗೂ ತಿಳಿಯದು . ಮೋದಿ ಆಲೋಚನೆಯೇ ಬೇರೆ ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಾರ್ಯಕ್ಕೆ ಕೈಂಕರ್ಯ ತೊಟ್ಟಿದ್ದು ಶತ್ರು ದೇಶವನ್ನೂ ಬಿಡದೇ ಸ್ನೇಹ ಸಂಪಾದಿಸಿ ಅಲ್ಲಿನವರ ಅಭಿಮಾನದ ಜೊತೆಗೆ ಅಭಿರುದ್ಧಿಗೆ ಬೇಕಾದ ಟಿಪ್ಸ್ ಗಳನ್ನೂ ಆಯ್ದು ಕೊಂಡು ಬಂದ ಮೊದಲಿಗ ಮೋದಿ ಎಂದರೂ ತಪ್ಪಾಗಲಾರದು .
ಸ್ವಚ್ಹ ಬಾರತ ಎಂದು ಪೊರಕೆ ಹಿಡಿದಾಗ ಸೆಲೆಬ್ರೇಟಿ ಗಳಿಂದ ಹಿಡಿದು ಸಾಮನ್ಯ ನಾಗರಿಕನೂ ,ರಾಜಕೀಯ ಪಂಡಿತರೂ ಎ.ಸಿ ರೂಂ ಕಾರ್ಮಿಕರೂ ಅಲ್ಲದೇ , ಇನ್ನೂ ಪೊರಕೆಯನ್ನು ಕಾಣದ ಮಹಾನುಭಾವರು ಕೂಡ ಹಿಡಿ ಕಟ್ಟನ್ನು ಹಿಡಿಯುವಂತೆ ಮಾಡಿದ ಛಾತಿ ಕ್ರತು ಶಕ್ತಿ ಕೆವಲ ಮೋದಿಗಲ್ಲದೇ ಬೇರಾರಿ೦ದಲೂ ಸಾಧ್ಯವೇ ? ಮೋದಿಯ ಯೋಗ ದಿನದ ಆಚರಣೆಗೆ ಭಾರತ ಮಾತ್ರ ವಲ್ಲದೇ ಮೋದಿಯನ್ನು ದೂಷಿಸುವವ್ರಲ್ಲದೇ ಐಟಿ -ಬೀಟಿ ಕಂಪನಿಗಳೂ ಸೇರಿದಂತೆ ಜಗತ್ತಿನ 192 ದೇಶಗಳು ಪಾಲ್ಗೊಳ್ಳುವಂತೆ ಮಾಡಿದ್ದೂ ಪ್ರಶಂಸೆಯ ಮಹಾ ಪೂರವನ್ನು ಹರಿಯುವಂತೆ ಮಾಡಿದ ಡಿ ಗ್ರೇಟ್ ಮೋದಿ ಬುದ್ದಿಮತ್ತೆ ಅಲ್ಲದೇ ಮತ್ತಿನೇನು ?.
ಒಟ್ಟಾರೆ ವಿವರಿಸುತ್ತಾ ಹೋದರೆ ಅದೊಂದು ಧಾರಾವಾಹಿಯೇ ಆಗಬಹುದು ಸಿಂಪಲ್ ಆಗಿ ಮೂರುವರೆ ವರ್ಷಗಳಲ್ಲಿ ಭಾರತ ಕಂಡ ಅದ್ಬುತ ಜನ ಸೇವಕ ಮೋದಿ ತಂದ ಜನೋಪಯೋಗಿ ಯೋಜನೆಯ ಹೈಲೈಡ್ಸ್ ಗಮನಿಸುವುದಾದರೆ . ಕ್ಲೀನ್ ಇಂಡಿಯಾ , ಸಿಲ್ಕ್ ಇಂಡಿಯಾ , ಮೆಕ್ ಇಂಡಿಯಾ , ಜನಧನ ಯೋಜನೆ , ಡಿಜಿಟಲ್ ಇಂಡಿಯಾ , ಆದರ್ಶ ಗ್ರಾಮ ಯೋಜನೆ. ಒನ್ ಬ್ಯಾಂಕ್ , ಒನ್ ಪೆನ್ಶನ್ , ಫಸಲ್ ಬೀಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆ, ದೀನ್ ದಯಾಳ್ ಯೋಜನೆ, ಸ್ಮಾರ್ಟ್ ಅಪ್ಹ್ ಇಂಡಿಯಾ, ಬೇಟಿ ಬಚಾವೋ , ಬೇಟಿ ಪಡಾವೋ ಯೋಜನೆ, ಬುಲೆಟ್ ಟ್ರೈನ್ ಎಲ್ಪಜಿ , ಮನೆ ಮನೆಗಳಲ್ಲೂ ಗ್ಯಾಸ್ ಒಲೆಯನ್ನು ಉಚಿತವಾಗಿ ಪರಿಚಯಿಸಿದ ಪುಣ್ಯಾತ್ಮ .ಇಷ್ಟೆಲ್ಲಾದ ನಡುವೆಯೂ ಏಟಿಗೆ ಎದುರೇಟು ನೀಡಿದ ಕ್ರಾಂತಿಕಾರಿ , ಬಾರತದ ಸಿಪಾಯಿಗಳ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ ಘೋರ ಹತ್ಯಾ ಕಾಂಡಕ್ಕೆ , ಬಂದೂಕಿಂದಲೇ ಉತ್ತರ ಕೊಟ್ಟದ್ದೂ ನಿಜಕ್ಕೂ ದಾಖಲೆಯೇ ಸರಿ ಕೇವಲ ರಾತ್ರಿ ಬೆಳಗು ಆಗುವಷ್ಟರಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಪಾಕಿ ಸ್ತಾನಿ ನೆಲದಲ್ಲೇ ನಮ್ಮ ಸಿಪಾಯಿಗಳಿಂದ ಸುಮಾರು ಹದಿನೆಂಟಕ್ಕೂ ಅಧಿಕ ಉಗ್ರರ ಮಾರಣ ಹೋಮ ನಡೆಸಿ ಬಿಟ್ಟಿ ಎದೆಗಾರಿಕೆ ಈ ಹಿಂದಿನ ಯಾವ ಪ್ರಧಾನಿಯಲ್ಲಿತ್ತು ?
ಯಾವೊಬ್ಬ ಮಾಡದ ಊಹಿಸಲಾರದ ದೇಶವನ್ನೇ ಗಡ ಗಡ ನಡುಗಿಸಿದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅoದ್ರೆ ಅದು ಬ್ಲಾಕ್ ಮನಿ ಉಳ್ಳವರ ನಿದ್ದೆ ಗೆಡಿಸಿದ್ದ, ಜಗತ್ತಿನಾದ್ಯಂತಸಂಚನ ಮೂಡಿಸಿದ ಮಹ್ಹಾನ್ ಕಾರ್ಯ .. ಕಾಳಾ ಧನ್ ವಾಪಸಾತಿ ! 500 1000 ಮುಖ ಬೆಲೆಯ ನೋಟುಗಳನ್ನು ತುರ್ತಾಗಿ ನಿಲ್ಲಿಸಿ ಹೊಸ ಬಗೆಯ ನೋಟುಗಳನ್ನೂ ಬಿಡುಗಡೆ ಯೋಚಿಸಿದ ರೀತಿ ನಿಜಕ್ಕೂ ಪ್ರಶಂಸನೀಯ ! ಇದು ಎಂದೂ ಆಗಬೇಕಿತ್ತು , ಭಾರತಾಂಬೆಯ ಮಡಿಲಿನಲ್ಲಿ ಇಂತಹ ದಿಟ್ಟ ಶೂರ ವೀರಾಧಿವೀರ ಒಬ್ಬ ಪ್ರಧಾನಿ ಇದ್ದನೇಯೇ ? ಈತ ಸಾಕಾಷ್ಟು ವರ್ಷಗಳ ಮೊದಲೇ ಪಟ್ಟವನ್ನು ಅಲಂಕರಿಸಬೇಕಿತ್ತು ,ಬಾರತ ಎಲ್ಲೋ ಹೋಗುತ್ತಿತ್ತು
ಇದೂವರೆಗೂ ಯಾವೊಬ್ಬ ಪ್ರಧಾನ ಮಂತ್ರಿ ಮಾಡದ ಕಾರ್ಯಕ್ಕೆ ಕೈ ಹಾಕಿ ಸಕ್ಸಸ್ ಹಾದಿಯಲ್ಲಿ ಮಿನುಗುತ್ತಿರುವ ನರೇಂದ್ರ ಮೋದಿ ಯ ಮಕುಟಕ್ಕೆ ಮತ್ತೊಂದು ಗರಿಬಂದಂತಾಗಿದೆ . ಒಂದೆರಡು ವಾರ ಸಾಮಾನ್ಯ ನಾಗರಿಕರಿಗೆ ಕೊಂಚ ಸಂಕಷ್ಟ ತಂದರೂ ಮುಂದಿನ ದಿನಗಳಲ್ಲಿ ಶ್ರೀಮಂತರೆನಿಸಿ ಕೊಂಡಿರುವವರಿಂದ ಜೀತ ಪದ್ಧತಿ ರಕ್ತ ಹೀರುವ ಬುದ್ದಿಗೆ ಕಡಿವಾಣ ಬೀಳುವುದು ವಿಪರ್ಯಾಸ ವಾದರೂ ವಾಸ್ತವ ! ಒಂದೆರಡು ವಾರ ಇದರಿಂದ ಸಾಮಾನ್ಯ ನಾಗರಿಕನಿಗೆ ನಿಜವಾಗಿಯೂ ಕಷ್ಟ ಇದ್ದೇ ಇರುತ್ತದೆ . ದೇಶದ ಮುಂದಿನ ಬವಿಷ್ಯಕಾಗಿ ನಾವು ಇದನ್ನು ಅರಗಿಸಿ ಕೊಳ್ಳಲೆ ಬೇಕು ..
ದಿನವೀಡಿ ಕೆಲಸ ಕಾರ್ಯವನ್ನು ಬಿಟ್ಟು ನೋಟ್ ಚೇಂಜ್ ಗೆ ಕಾಯಬೇಕಾ ದಾರೂ ಇದೊಂದು ನಮ್ಮಿಂದ ದೇಶಕ್ಕೆ ಸಲ್ಲುತ್ತಿರುವ ಸೇವೆ ಎಂದು ಆಲೋಚಿಸಿ ಈ ಒಂದು ಯೋಜನೆಯ ಜೊತೆಗೆ ಕೈ ಜೋಡಿಸ ಬೇಕಾಗಿದೆ . ಸಮಾಜ ಸೇವೆ ದೇಶ ಸೇವಕರೆದು ಹಣೆ ಪಟ್ಟಿಯಲ್ಲಿರುವವರು ಈಗ ಸಿಕ್ಕ ಅವಕಾಶವನ್ನು ಉಪಯೋಗಿಸಿ ಕೊಂಡು ,ವಯಸ್ಸುಆದವರಿಗೆ, ಮಹಿಳೆಯರಿಗೆ ,ಮಕ್ಕಳಿಗೆ ತಮ್ಮಿಂದ ಆದಷ್ಟು ಸಹಾಯವನ್ನು ನೀಡಬಹುದು ಇದು ನನ್ನ ದೇಶ ಸಲ್ಲಿಸುತ್ತಿರುವ ಕಿಂಚಿತ್ ಸೇವೆ ಎಂದು ಮನಗಾಣ ಬೇಕು .ಇಂತಹ ಅವಕಾಶ ಮುಂದೆಂದೂ ದೊರಕದು .ಹತ್ತುಹೆಗಲುಗಳು, ಹತ್ತುಮನಸುಗಳುಒಂದಾಗಬೇಕಷ್ಟೆ.

ಕೊನೆಯ ಮಾತು
ಮೋದಿ ನಿಮಗಿದೋ ಕೋಟಿ ಕೋಟಿ ನಮಸ್ಕಾರ

ಬೆಚ್ಚಿ ಬೀಳಿಸಿತ್ತು ಜಗತ್ತನ್ನು ಏಳರ ರಾತ್ರಿಯ ಆ ಸುದ್ದಿ
ಭಾರತಾ೦ಬೆಯ ಮಡಿಲಿನಲ್ಲಿತ್ತು ಮೋದಿ ಎಂಬ ಪ್ರಧಾನಿಯಲ್ಲಿ ಮಾತ್ರ ಆ ಬುದ್ದಿ!
ಜನಸೇವಕ ಭಾರತದ ಕುಲ ಪುತ್ರ ಒನ್ ಅಂಡ್ ಓನ್ಲಿ ಈ ಮ್ಯಾನ್
ಮಾಡಿಯೇ ಬಿಟ್ಟರು ಐತಿಹಾಸಿಕ ದಾಖಲೆ , ಕ್ಷಣಮಾತ್ರದಲ್ಲೇ ನೋಟ್ ಬ್ಯಾನ್ !
ದೇಶದಾದ್ಯಂತ ಕೇಳಿಬರುತ್ತಿತ್ತು ಶತಮಾನಗಳಿಂದ ಕಳಾಧನದ ಸದ್ದು
ಎದೆ ಗುಂದದೇ ನಿರ್ಬೀತಿಯಿಂದ ಕೊಟ್ಟೇಬಿಟ್ಟರು ದೊಡ್ಡವರ ಎದೆಗೆ ನೇರ ಗುದ್ದು !
ಪ್ರಸ್ತುತ ಪರಿಸ್ತಿತಿಯಲ್ಲಿ ಅರ್ಥವಾಗುತ್ತಿದೆ ಜನ ಸಾಮಾನ್ಯರೇ ನಿಮ್ಮ ಸಂಕಷ್ಟ ನಮಗಿಂದು
ಭವ್ಯ ಬಾರತದ ಕನಸ್ಸಿಗೆ ,ಅಭಿರುದ್ಧಿ ಪಥಕ್ಕೆ ಸಾಕು ಈ ಸೇವೆ ಮುಂದೆಂದೂ !
ಉಳ್ಳವರಿಂದ ಇಲ್ಲದವರಿಗೆ ಕಳಚಿ ಕೊಂಡಿತು ತಿರಸ್ಕಾರ ಭಾವ , ಧನಿಕರಿಂದ ಒದಗಿಸಿದ ಈ ಪುರಸ್ಕಾರ
ದೇಶ ಕಂಡ ಅದ್ಬುತ ಪ್ರಧಾನಿ ,ಯುಗಪುರುಷ ಮೋದಿ ನಿಮಗೆ ಕೋಟಿ ಕೋಟಿ ನಮಸ್ಕಾರ !
ಕೋಪ ಬಿಡಿ ಕ್ಯೂ ನಲ್ಲಿ ನಿಲ್ಲಿ ಇದು ನನ್ನ ದೇಶ ಸೇವೆ ಎಂದು ಸಹಿಸಿ
ಇದು ನಿಮ್ಮಿಂದ ಸಾಧ್ಯ ,ನೋಟು ದೊರೆಗಳನ್ನು ಅಳಿಸಿ ದೇಶವನ್ನು ಉಳಿಸಿ !

ಬುಧವಾರ, ನವೆಂಬರ್ 9, 2016

ಆಧುನಿಕ ತಂತ್ರಜ್ಞಾನಗಳ ನಡುವೆಯೂ ನಡೆಯಿತು ನಡೆಯಬಾರದ ಘಟನೆ : ಯೇ ವಿಧಿ ನೀನೆಷ್ಟು ಕ್ರೂರಿ

ಮಾಸ್ತಿಗುಡಿ ದುರಂತ : ಯಾರು ಹೊಣೆ ?
ಭಂಡ ದೈರ್ಯ ಪ್ರಾಣಕ್ಕೆ ಎರವಾಯಿತೆ ?
ನಿಮ್ಮ ಭಾರವನ್ನು ಸಹಿಸದಾದನೇ ವಿಧಿ ?
ಕಲಾವಿದರನ್ನು ದೂಡಿ ಆಳ ನೋಡುವ ನಿರ್ದೇಶಕರುಗಳೇ ನಿಮ್ಮ ಜನ್ಮಕ್ಕೆ ಇಷ್ಟು ಬೆಂಕಿ ಹಾಕ ! ಪ್ರಸ್ತುತ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆಯೂ ಹೀಗೊಂದು ಘಟನೆ ನಡೆದಿರುವುದು ನಾಚಿಕೆ ಗೇಡು !ಹಾಸ್ಯಾಸ್ಪದ ! ನಿರ್ಲಕ್ಷವಲ್ಲದೆ ಮತ್ತಿನ್ನೇನು ? ಯಾರೂ ಮಾಡದ ಕಾರ್ಯಕ್ಕೆ ಕೈ ಹಾಕಿ ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ನೊಂದಾಯಿಸಿ ದಾಖಲೆ ಮಾಡಬೇಕೆಂಬ ಹುಚ್ಚು ಹಂಬಲ ನಿರ್ದೇಶಕರದ್ದು ! ಪಾಪ ಏನೂ ಅರಿಯದ ಅಮಾಯಕ ನತದೃಷ್ಟ ಕಲಾವಿದರುಗಳ ಜೀವ ಮಾತ್ರ ತೂಗು ಗತ್ತಿ ಮೇಲೆ ತೇಲುತ್ತಿರುರುವುದು ಅಕ್ಷರಸ:ನಿಜ .
ಅದೃಷ್ಟ ಇದ್ದರೆ ಬದುಕಿ ಉಳಿಯಬಹುದು ಇಲ್ಲದಿದ್ದರೆ ಕುಟುಂಬದಲ್ಲಿ ಸೂತಕ ವೇ ಗತಿ ! ಯಾರೂ ಬರಲಾರರು ನಮ್ಮ ರಕ್ಷಣೆಗೆ ಇವನ್ ಭಗವಂತನೂ ಕೂಡಾ ! ಹೌದು ನಿಮ್ಮಿಂದ ನೋಡ ನೋಡುತ್ತಲೇ ದೂರವಾದ ಉದಯೋನ್ಮುಖ ಬಡ ಕಲಾವಿದರಾದ ಉದಯ್ ಹಾಗು ಅನಿಲ್ ರ ಚಿತ್ರಣ ಕಣ್ಣ ಮುಂದೆ ಹಾಯುತ್ತಿದೆ .. ಎಂತಾ ಕಲ್ಲು ಮನಸ್ಸಿನವರಿಗೂ ಕೂಡಾ ತಮಗೆ ಅರಿವಿಲ್ಲ ದಂತೆ ಕಂಬನಿ ಜಾರದೇ ಇರಲಾರದು ನಿನಿಮಾ ಅವಕಾಶಕ್ಕಾಗಿ ಅದೆಷ್ಟೋ ವರ್ಷ ವ್ರತ ಮಾಡ್ಬೇಕು ತಮ್ಮಲ್ಲಿ ಕಲೆಯ ಆಳ –ಅಂತರಾಳ ಕರಗತವಾಗಿದ್ದರೂ ಕಲಾ ವಿದನೆನಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ . ತೆರೆಯಲ್ಲಿ ಮೀನುಗ ಬೇಕಾದರೆ ತೆರೆಯ ಹಿಂದೆ ಅದೆಷ್ಟೋ ಕಷ್ಟ ಕಾರ್ಪಣ್ಯ ವನ್ನು ಉಂಡಿರುತ್ತಾರೆ , ಅವಕಾಶಕ್ಕಾಗಿ ಅದೆಷ್ಟೋ ನಿರ್ದೇಶಕ ಮನೆ ಬಾಗಿಲು ಬಡಿದು, ಸಿಕ್ಕ ಅವಕಾಶ ಹೇಗೆ ಇರಲಿ ದ್ರತಿ ಗೆಡದೆ ಮಾಡಿ ಮುಗಿಸಿ ನಾಳೆ ಭವ್ಯ ಭವಿಷ್ಯಕ್ಕೆ ಬೆಳಕು ಆಗಬೇಕೆಂಬ ಮಹತ್ವಕಾ೦ಕ್ಷೆ ಯಿಂದ ಕ್ಷಣದಲ್ಲಿ ಎಷ್ಟೇ ಕಠಿಣ ಪರಿಸ್ತಿತಿ ಇದ್ದರೂ ,ತಮ್ಮ ವಯಕ್ತಿಕವಾದ ತೊಂದರೆ ತಾಪತ್ರೆ ಗಳಿದ್ದರೂ , ದಿಡೀರ್ ನಿರ್ಧಾರಕ್ಕೆ ಕೈ ಹಾಕಿ , ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಪ್ರಮೇಯವನ್ನೂ ಕೂಡ ಮೆಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ . ಅದನ್ನೇ ಬಂಡವಾಳ ಮಾಡಿ ಕೊಂಡು ಕಲಾವಿದರುಗಳ ಪ್ರಾಣದ ಜೊತೆ ಚೆಲ್ಲಾಟ ವಾಡುವ ಕೆಲ ನಿರ್ದೇಶಕರುಗಳ ಮನಸ್ಸಿಗೆ ಕೊಳ್ಳಿ ಇಡಬೇಕಾಗಿದೆ . ತಂತ್ರಜ್ಞಾನ ಮುಂದುವರಿದಂತೆ ಇಂಥಹ ಹುಚ್ಚು ಸಾಹಸಗಳು ಬೇಕೇ ? ಅವಶ್ಯಕತೆ ಇದ್ದರೇ ಮುಂದಾಗುವ ಅನಾಹುತಗಳನ್ನು ಅರಿತು ಸುರಕ್ಷತೆ ಕಡೆ ಗಮನ ಹರಿಸುವಲ್ಲಿ ಆಗುವ ಅಡ್ಡಿಯಾದರೂ ಏನು ? ಮೂರು ಅಮೂಲ್ಯ ಜೀವಗಳ ರಕ್ಷಣೆಗೆ ಕೇವಲ ಒಂದೇ ಒಂದು ಬೋಟು ..! ಅದೂ ಕೊಡಾ ಕೆರೆಯ ದಡದಲ್ಲಿ! ಅಪಘಾತ ಸಂಬವಿಸಿದ ಬಳಿಕ ನೀರಿಗಿಳಿಯುವ ಪ್ಲಾನ್ ! ಸ್ಪಾಟ್ ಟು ಬೊಟ್ ಹತ್ತು ನಿಮಿಷ ದಾರಿ , ಹತ್ತು ಸೆಕೆಂಡ್ ನೀರಲ್ಲಿ ಈಜು ಬಾರದವರಿಗೆ ಉಸಿರುಬಿಗಿಹಿಡಿಯುವುದು ಕಷ್ಟ ಅಂತದ್ರಲ್ಲಿ ಹತ್ತು ನಿಮಿಷ ಪ್ರಯಾಣ ಮಾಡಿ ಬೋಟು ಅವರನ್ನು ಕಾಪಾಡಬೇಕು ಎಂಥಾ ಮುಟ್ಟಳ ಐಡಿಯಾ ಇದು ?!
“ ನನಗೆ ಆರೋಗ್ಯ ಸರಿ ಇಲ್ಲ ಎರಡು ದಿನಗಳಿಂದ ಜ್ವರದಲ್ಲಿ ಬಳಲುತ್ತಿದ್ದೇನೆ ಕೊನೆಯ ಚಿತ್ರೀಕರಣ ಕ್ಲೈ ಮೇಕ್ಸ್ ಉತ್ತಮವಾಗಿ ಬರಬೇಕು ನನ್ನಿಂದ ಇದು ನಿಲ್ಲಬಾರದು ಎಂಬ ಉದ್ದೇಶ ದಿಂದ ಪಾಲ್ಗೊಳ್ಳುತ್ತಾ ಇದ್ದೇವೆ 60 ಅಡಿ ಎಂದು ಇದೀಗ 100 ಅಡಿಗೆ ಡಿಕ್ಲೇರ್ ಮಾಡಿದ್ದಾರೆ ನಮ್ಮ ಪೈಟ್ ಮಾಸ್ತರ್ . ನಿಜಕ್ಕೂ ಭಯವಾಗುತ್ತದೆ . ಇದೆ ಪ್ರಥಮ ಬಾರಿಗೆ ಹೆಲಿಕಾಪ್ಟರ್ ನ್ನು ಏರುತ್ತಿರುವುದು . ಈಜು ಗೊತ್ತಿಲ್ಲ “ ಎಂದು ಉಭಯ ಕಲಾವಿದರು ಸಾಹಸಕ್ಕೆ ಮುನ್ನ ಮಾಧ್ಯಮಗಳ ಜೊತೆ ಹೇಳಿದ ಪರಿ ನೋಡಿದ್ದರೆ ನಿಜಕ್ಕೂ ಕರುಳು ಹಿಂಡಿ ಬರುತ್ತದೆ . ಇಷ್ಟಿದ್ದರೂ ಇದ್ಯಾವುದನ್ನೂ ಕಂಡೂ ,ಕೇಳದಂತೆ ಚಿತ್ರ ತಂಡ ಯಾವುದೇ ದೂಪ್ ಬಳಸದೇ ನೀರಿಗೆ ಧುಮುಕಿಸಿ ಪ್ರಾಣವನ್ನು ಕಸಿದು ಕೊಂಡು ಬಿಟ್ಟರಲ್ಲ ! ಛೆ .. ದಿಕ್ಕಾರ ವಿರಲಿ ! ಕೇಸು ಕಾನೂನು ಕಾಯ್ದೆ ಎಲ್ಲವೂ ಇದೆ ಎರಡು ದಿನ ತಪ್ಪಿತಸ್ತರು ಜೈಲ್ ಗೆ ಹೋಗಿ ಬರಬಹುದು ಆದರೆ ಆ ಅಮೂಲ್ಯವಾದ ಎರಡು ಜೀವಗಳು ಮರಳಿ ಬರಲು ಸಾದ್ಯವೇ ? ದೇವರ ಮೇಲೆ ಭಾರ ಹಾಕಿ ಅಪ್ಪ ಅಮ್ಮನ ನೆನೆದು ಕೊಂಡು ಹೆಲಿಪ್ಯಾಡ್ ಹತ್ತಿದ್ದ ಉದಯ ,ಅನಿಲ್ ರನ್ನು ಕೊನೆ ಪಕ್ಷ ಆ ಭಗವಂತನೂ ಕೂಡಾ ಕಾಪಾಡುವಲ್ಲಿ ವಿಫಲ ನಾದನೆ ? ವಿಧಿ ನೀನೆಷ್ಟು ಕ್ರೂರಿ ? ಇಷ್ಟೆಲ್ಲಾ ರಿಸ್ಕ್ ಅಂತ ಗೊತ್ತಿದ್ದರೂ , ಯಾಕೆ ಬೇಕಿತ್ತು ಆ ಭಂಡ ದೈರ್ಯ ? ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದರೇನು ? ದುಡಿದು ತಿನ್ನುವುದಕ್ಕೆ ಸಾಕಷ್ಟು ಹಾದಿಗಳಿವೆ .. ತಮ್ಮನ್ನೇ ನಂಬಿ ಕೊಂಡಿರುವ ಕುಟುಂಬಸ್ತರ ಮನಸ್ಥಿತಿ ಅರ್ಥೈಸಿ ಕೊಳ್ಳುವವರು ಯಾರು ? ತಮ್ಮ ಪ್ರಾಣ ಕಾಪಾಡುವುದಕ್ಕೆ ಇತ್ತ ಗುರುವೂ ಇಲ್ಲ ಅತ್ತ ಸಾಹಸ ನಿರ್ದೇಶಕರೂ ಇಲ್ಲ ಇವರನ್ನೆಲ್ಲಾ ನಂಬಿ ಅಪಾಯಕಾರಿ ಯಾಗಿ ಸ್ಟಂಟ್ ಪ್ರದರ್ಶಿಸುವ ದರ್ದು ಏನಿತ್ತು ?
ಹಾಗೆ ನೋಡಿದರೆ ನಿನಿಮಾ ಗಳಲ್ಲಿ ಸಾಹಸ ದ್ರಷ್ಯವನ್ನು ಮಾಡುವಾಗ ಅಪಘಾತ ,ಅಪಾಯ ಕಟ್ಟಿಟ್ಟ ಬುತ್ತಿಯೇ ಆದರೆ ಅದಕ್ಕೂ ಮೊದಲು ಸುರಕ್ಷತೆ ದ್ರಷ್ಟಿ ಇದ್ದೆ ಇರುತ್ತದೆ . 1996 ಲಾಕಪ್ ಡೆತ್ ಸಿನಿಮಾದ ಚೇಸಿಂಗ್ ಚಿತ್ರೀಕರಣದ ವೇಳೆ ಬೈಕ್ ಹಾರಿಸುವಾಗ ಇಬ್ಬರು ಸಾಹಸ ಕಲಾವಿದರುಗಳು ಸಾವನ್ನು ಅಪ್ಪಿತ್ತದ್ದರು ಅದನ್ನೊಂದು ಬಿಟ್ಟರೆ ಇನ್ಯಾಂದೂ ಇಂತಹ ಘಟನೆಗಳು ನಡೆದಿರಲಿಲ್ಲ ಕೂದಲೆಳೆಯ ಅಂತರದಲ್ಲಿ ಸಾವನ್ನು ಗೆದ್ದ ಬಂದದ್ದೂ ನೋವನ್ನೂ ಉಂಡದ್ದೂ ಉದಾಹರಣೆಯಾಗಿ ಸಿಕ್ಕರೂ ನಿಯಮಿತವಾಗ ರಕ್ಷಣಾ ಸರಕು ತಂತ್ರಗಳಿಂದ ಇಂತಹ ಘಟನೆ ನಡೆದಿರಲಿಲ್ಲ. ನಿನ್ನೆಯ ಘಟನೆಯಲ್ಲಿ ಪೂರ್ಣ ಪ್ರಮಾಣದ ನಿರ್ಲಕ್ಷತನ ಎದ್ದು ಕಾಣುತ್ತಿದೆ . ರೋಪ್ ,ಲೈಫ್ ಜಾಕೆಟ್, ಟ್ಯೂಬ್ ,ಬೊಟ್ ಗಳಿದ್ದಿದ್ದರೆ ಖಂಡಿತವಾಗಿಯೂ ಈ ಎರಡು ಜೀವಗಳನ್ನು ಮುಂದಿನ ಸಿನಿಮಾಗಳಲ್ಲಿ ನಾವು ಜೀವಂತವಾಗಿ ಕಣ್ತುಂಬಿಸಿ ಕೊಳ್ಳ ಬಹುದಿತ್ತು .. ಚಿತ್ರ ರಂಗದಲ್ಲಿ ಇನ್ನೆಂದೂ ಈ ತರಹದ ಘಟನೆಗಳು ಮರುಕಳಿಸದೇ ಇರಲಿ ,ಕಲಾವಿದರುಗಳೇ ತಮ್ಮ ಜೀವ ತಮ್ಮ ಕೈ ಯಲ್ಲಿ ! ಯಾರ ಮಾತಿಗೂ ಬಗ್ಗದೇ ರಿಸ್ಕ್ ಗೆ ಮುನ್ನುಗದಿರಿ ! ನಿರ್ದೇಶಕರುಗಳಿಗೆ ಎಕ್ಷ್ಕ್ಲೋಸಿವ್ ಫಿಲಂ ಮಾತ್ರ ಮುಖ್ಯ , ಕಲಾವಿದರುಗಳಲ್ಲ !! ಅಗಲಿದ ಕಲಾವಿದರುಗಳ ಆತ್ಮಕ್ಕೆ ಶಾಂತಿ ದೊರಕಲಿ , ಇನ್ನೊಮ್ಮೆ ಹುಟ್ಟಿ ಬನ್ನಿ ಎಂದೆಷ್ಟೇ ಕೇಳಬೇಕು !