ಪತ್ರಕರ್ತರಿಗೆ ಕರಾಳ ದಿನ ಮಾರ್ಚ್ 2 ,2012
ಆಂಧ್ರ ಜೈಲಿನಲ್ಲಿರುವ ಜನಾರ್ಧನ ರೆಡ್ಡಿಯನ್ನು ಸಿಬಿಇ ಬೆಂಗಳೂರಿಗೆ ಕರೆತಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ತನಿಖೆಗೆ ಒಳಪಡಿಸಿತ್ತು .ಅಂದು ಎಲ್ಲ ಮಾದ್ಯಮದವರು ಬಂದೆ ಬರುತ್ತಾರೆ ಅನ್ನುದು ದಾಳಿ ಕೊರ ವಕೀಲರ ಗುಂಪಿಗೆ ತಿಳಿದಿತ್ತು .ದಾಳಿಗಾಗಿ ಮೊದಲೇ ಪೂರ್ವ ಸಿದ್ದತೆ ಮಾಡಿಕೊಂಡಿದ್ದರು .ಸಂಕ ಮುರಿದಲ್ಲೇ ಸ್ನ್ಹಾನ ಎನ್ನುವಂತೆ ,ಕನಿಷ್ಠ ಬುದ್ದಿ ಇರುವ ನಾಗರಿಕನೂ ಕೂಡ ತಲೆತಗ್ಗಿಸುವಂತೆ ,ವಕೀಲರು ಮದ್ಯಮದವರ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದರು .ಅಟ್ಟಾ ಡಿಸಿಕೊಂಡು ಹೊಡೆದರು .ಕೈ ಗೆ ಸಿಕ್ಕ ಆಯುದಗಳಿಂದ ಚಚ್ಚಿದರು .ಕೋರ್ಟ್ ಆವರಣ ದಲ್ಲಿ ರಕ್ತದೋಕುಳಿ ಹರಿತು.ವೃತ್ತಿಪರ ವಕೀಲರು ನಾಚಿಸುವಷ್ಟು ಮಟ್ಟಿಗೆ ವಕೀಲರ ದಾಂದಲೆ ನಡೆಯಿತು.
ಗುಂಪು -ಗುಂಪು ಪೊಲೀಸರು ಇರುವಾಗಲೇ ಅವರ ಎದುರೇ ಪತ್ರಕರ್ತರ ಮೇಲೆ ವಕೀಲರ ಮೇಲೆ ದಾಳಿ ನಡೆಯಿತು .ಪೊಲೀಸರು ಕೈಲಾಗದವರಂತೆ ಯಾರದ್ದೋ ಆಜ್ಞೆಗೆ ಕಡು ದಾಳಿ ಕೋರರನ್ನು,ಮೌನವಾಗಿಯೇ ನೋಡುತ್ತಿದ್ದರು .ಆರಂಭದಲ್ಲೇ ದಾಳಿಯನ್ನು ನಿಲ್ಲಿಸುವ ಅವಕಾಶ ಪೊಲೀಸರಿಗೆ ಇತ್ತಾದರೂ ,ಅದನ್ನು ಅವರು ಪಾಲಿಸಲಿಲ್ಲ.ಯಾವಾಗ ವಕೀಲರು ಪೊಲೀಸರ ಮೇಲೆ ದಾಳಿಗೆ ಮುಂದಾದರೂ ,ಅಲ್ಲಿಗೆ ಪೊಲೀಸರಿಗೆ ಬಿಸಿ ಮುಟ್ಟಿತು .ಆದ್ರೆ ಉನ್ನತ ಅಧಿಕಾರಿಗಳು ಆಜನೆ ಇಲ್ಲದೇ ಪೊಲೀಸರಿಗೆ ಕೈ ಕಟ್ಟಿ ಹಾಕಿದನ0ತಿತ್ತು .. ನೋಡಿ ಇದು ನಮ್ಮಲ್ಲಿಯ ಭದ್ರತಾ ವ್ಯವಸ್ತೆ ಯಾದರೆ,ಮೇಲಿನದ್ದು ಕಾನೂನು ಹೇಳುವವರೇ ಕಾನೂನನ್ನು ತಾವೇ ತಿದ್ದಿರುದು ...ಬೇಲಿಯೇ ಎದ್ದು ಹೊಲ ಮೆಯದ್ರೆ ? ಸಮಾಜ ಕಾಪಾಡುವ ಒಂದು ಅಂಗವಾಗಿರುವ ಮದ್ಯಮ ,ಪೊಲೀಸರಿಗೆ ಈ ಗತಿ ಬಂದರೆ, ಇನ್ನು ಸಾಮಾನ್ಯ ಜನರ ದಿಕ್ಕು ಎತ್ತ ಏನು ?


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ