ಶುಕ್ರವಾರ, ಜೂನ್ 23, 2023

ಎಲ್ಲಿಗೆ ಬಂತು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು?

ಹೌದು ! ಬಿಟ್ಟಿ ಭಾಗ್ಯ ಎಂದೇ ಹೇಳಲಾಗುತ್ತಿದ್ದ ಕಾಂಗ್ರೇಸ್ ನ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಐದು ಆಶ್ವಾನೆಗಳ ಗ್ಯಾರಂಟಿ ಭಾಗ್ಯಗಳಲ್ಲಿ ಶಕ್ತಿ ಭಾಗ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒಂದು ಸಧ್ಯಕ್ಕೆ ಜಾರಿಯಾಗಿದ್ದು ಬಿಟ್ಟರೇ ಮತ್ತುಳಿದ ಭಾಗ್ಯಗಳು ನಾಳೆ ,ನಾಳೆ ಎಂಬಂತೆ ಸಾಗುತ್ತಿದೆ.,ಯಾವುದೇ ಮುಂಚಿತ ಪ್ಲಾನ್ ಇಲ್ಲದೇ ,ಎಲೆಕ್ಷೆನ್ ಟೈಮ್ ನಲ್ಲಿ ಗಲ್ಲಿ- ಗಲ್ಲಿಗಳಲ್ಲಿ ಬೀಷಣದ ಭಾಷಣ ಬೀಗುತ್ತಾ ಬಂದ ಕಾಂಗ್ರೆಸ್ ಮುಖಂಡರುಗಳು ಅಂತೂ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಚಾಲಾವಣೆಗೊಳಿಸಿ ಯಾರೂ ಊಹಿಸಿದ ರೀತಿಯಲ್ಲಿ ಅತ್ಯಧಿಕ ಸೀಟುಗಳನ್ನು ಪಡೆದು ಸರಕಾರ ರೂಪಿಸಿತು.ಕರ್ನಾಟಕದಲ್ಲಿ ನೂತನ ಸರ್ಕಾರ ರೂಪು ಗೊಂಡು ಒಂದೂವರೆ ತಿಂಗಳು ಕಳೆದರೂ,ಗ್ಯಾರಂಟಿ ಯೋಜನೆಯ ಯೋಚನೆ ಸಧ್ಯಕ್ಕೆ ಸಹಕಾರವಾಗುವ ಲಕ್ಷಣ ಕಾಣುತ್ತಿಲ್ಲ ,ನಾಟಕ ದಿನೇ ದಿನೇ ನಾಗಾಲೋಟದಲ್ಲಿ ವಿಹರಿಸುತ್ತಿದೆ.ಸರ್ಕಾರ ಬಂದ ಮೊದಲನೇ ದಿನವೇ ನಾವು ಎಲ್ಲಾ ಗ್ಯಾರಂಟಿಗಳನ್ನೂ ಜಾರಿಗೊಳಿಸುತ್ತೇವೆ ಎಂದು ಹೇಳುತ್ತಿದ್ದ ಕೈ ಪಕ್ಷ ಜಾರಿಗೆ ತರುವಲ್ಲಿ ಶತಾಯಗತಾಯ ಶ್ರಮಿಸುತ್ತಿದೆ. ಬೇರೆ ವಿಧಿ ಇಲ್ಲ ಲೋಕಸಭಾ ಚುನಾವಣಾ ಸನಿಹದಲ್ಲಿದೆ ಇತ್ತ ಪ್ರತಿಪಕ್ಷಗಳ ದಾಳಿ,ಜನರ ಪ್ರತಿಭಟನೆಗೆ ಬೆದರಿ ಏನೋ ಒಂದು ರೂಪುರೇಷೆ ರೂಪಿಸಲೇ ಬೇಕಾಗಿದೆ. ಇಷ್ಟೆಲ್ಲಾ ಬಿಟ್ಟಿ ಭಾಗ್ಯ ದಯಪಾಲಿಸಲು ಖಂಡಿತವಾಗಿಯೂ ಆರ್ಥಿಕ ಪರಿಸ್ಥಿತಿ ನೆಟ್ಟಗಿರಲೇ ಬೇಕು . ಈ ಸಂಬಂಧ ಆರ್ಥಿಕ ತಜ್ಞರು ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳ ಬಗ್ಗೆ ಎಷ್ಟೇ ಅಭಿಪ್ರಾಯ ಪಟ್ಟರೂ, ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದ ಕಾಂಗ್ರೆಸ್ ಗೆದ್ದ ಮೇಲೆ ನೋಡಿದರಾಯ್ತು ಎಂಬಂತೆ ವರ್ತಿಸಿದವು, ಮೈಕ್ ಹಿಡಿದು ಘರ್ಜಿಸಿದ್ದೇ ಘರ್ಜರಿಸಿದ್ದು !
ಗೆದ್ದ ಮೇಲೆ ಕೊಡಲೇ ಬೇಕಾದ ಅನಿವಾರ್ಯತೆ ,ಪ್ರತಿಪಕ್ಷಗಳ ಹಾರಾಟ ,ಜನತೆಯ ಹೋರಾಟ ಇದಕ್ಕೆಲ್ಲಾ ಸಮಾಧಾನ ದಿಂದ ಪರಿಹರಿಸಲು ಕಂಡು ಕೊಂಡ ಮಾರ್ಗಗಲು ವಿಚಿತ್ರವೆನ್ನಿಸುತ್ತಿದೆ ಕೊಡುವುದು ಹೇಗೆ ?: ಹೌದು ! ಕೊಡದೇ ಇದ್ದರೇ ಜನ ದಂಗೆಗೆ ಏಳುವುದು ಖಚಿತ.ಇದಕ್ಕಾಗಿ ಹೊಸ ಪ್ಲಾನ್ ! ಗ್ಯಾರಂಟಿ ಕಾರ್ಡ್ ಹಿಡಿದು ಪ್ರಚಾರ ಮಾಡುವಾಗ ಇಲ್ಲದಿದ್ದ ಷರತ್ತುಗಳು ಈಗ ಒಮ್ಮೆಲೇ ಜೀವ ಪಡೆದುಕೊಳ್ಳುತ್ತಿದೆ ಎಲ್ಲದಕ್ಕೂ ಕಂಡೀಷನ್ ಅಪ್ಲೇ ! ಅದೂ ದಿನ-ದಿನವೂ ಬದಲಾವಣೆ ಒಬೊಬ್ಬ ಮುಖಂಡರದ್ದು ಒಂದೊಂದು ಷರತ್ತುಗಳ ನಿಯಮ,ಅಂತೂ ಇಂತೂ ಮೊನ್ನೆ ಮೊನ್ನೆ ಹೆಗಲ್ಲಾ, ಎಷ್ಟೆಲ್ಲಾ ಕಷ್ಟ ಪಟ್ಟು ಶಕ್ತಿ ಯೋಜನೆ ಯನ್ನು ಜಾರಿಗೆ ತಂದೆ ಬಿಟ್ಟಿತು ಸಿದ್ದರಾಮಯ್ಯನ ಸರ್ಕಾರ. ಮಹಿಳೆಯರಿಗೆ ಸರ್ಕಾರಿ ಸಾಮನ್ಯ ಬಸ್ ಗಳಲ್ಲಿ ಉಚಿತ ಪ್ರಯಾಣ ರಾಜ್ಯದೊಳಗೆ ರಾಜ್ಯದವರಿಗೆ ಮಾತ್ರ .ಅಬ್ಬಬ್ಬಾ ! ಬಸ್ಸು ಕಡಿಮೆ, ಪ್ರಯಾಣಿಕರು ಸಂಖ್ಯೆ ಅಧಿಕ ,ಬಸ್ಸು ರಶೋ ರಷ್ಹು ! ಜಗಳ, ಗಲಾಟೆ ,ಬಸ್ಸಿನ ಬಾಗಿಲು ಕಿತ್ತು ಬರುವುದು,ಬಸ್ಸಿನ ಕಿಟಕಿಗಳ ಮೂಲಕವೂ ಏರುವುದು ಒಂದೇ ಎರಡೇ ಇಷ್ಟಕ್ಕೆ ನಿಲ್ಲುತ್ತಿಲ್ಲ ಇದು ಕಂಟಿನ್ಯೂ ಆಗ್ತಾನೆ ಇದೆ ,ಎಷ್ಟೇ ಆಘಾತ ,ಅಪಘಾತವಾದರೂ,ಸರ್ಕಾರದ ಬೊಕ್ಕಸಕ್ಕೆ ಲಾಸ್ ಆದರೂ ಚಿಂತೆ ಇಲ್ಲ ಒಟ್ಟಾರೆ ಒಂದು ಗ್ಯಾರಂಟಿ ಜಾರಿ ಗೊಂಡು ಸಧ್ಯ ನಡಿತಾ ಇದೆ. ಎರಡನೇ ಗ್ಯಾರಂಟಿ ಗ್ರಹಲಕ್ಷ್ಮಿ ಉಚಿತ ೨೦೦ ಯೂನಿಟ್ ವಿದ್ಯುತ್ ಫ್ರೀ ಎಂಬ ಯೋಜನೆ ಇದಾಗಿತ್ತು . ಕಲ್ಲುಬಿದ್ದಿದೆ ಇದಕ್ಕೂ ಅಷ್ಟೇ ಸಾಕಷ್ಟು ಕಂಡೀಷನ್ !ಚುನಾವಣೆಗೆ ಮೊದಲು ನಂಗೂ ಫ್ರೀ ,ನಿಂಗೂ ಫ್ರೀ ಎನ್ನುತಿದ್ದ ಮಾತಿಗಿಲ್ಲದ ಷರತ್ತು ಈಗ ಬಂತು ಯಾರು ಎಷ್ಟು ಎಲೆಕ್ಟ್ರಿಸಿಟಿ ಖರ್ಚು ಮಾಡುತ್ತಾರೋ ಒಂದು ವರ್ಷದ ಅವರೇಜ್ ನ್ನು ಲೆಕ್ಕ ಹಾಕಿ ೧೦% ಅಷ್ಟು ಹೆಚ್ಚಿಗೆ ಸಬ್ಸಿಡಿ ಕೊಟ್ಟು ಅವರಿಗೆ ಉಚಿತವಾಗಿ ನೀಡುವುದು ಎಂಬ ನಿಯಮ.ಅಂದರೆ ಒಂದು ಮನೆಯಲ್ಲಿ ತಿಂಗಳಿಗೆ ೫೦ ಯೂನಿಟ್ ವ್ಯಯಿಸಿದ್ದರೇ ಅದನ್ನೇ ಸರಾಸರಿಯಲ್ಲಿಎಕ್ಕ ಹಾಕಿ ೬೦ ಯುನಿಟ್ ವರೆಗೆ ಮಾತ್ರ ಸರ್ಕಾರ ಭರಿಸುವುದು ಅದಕ್ಕಿಂತ ಒಂದು ಯೂನಿಟ್ ಹೆಚ್ಚಿಗೆ ಬಂದರೂ ಅದಕ್ಕೆ ಮನೆಯವರೇ ಜವಾಬ್ದಾರರು., ಸರ್ಕಾರ ಹೊಣೆ ಅಲ್ಲ. ೨೦೦ ಯೂನಿಟ್ ಫ್ರೀ, ಫ್ರೀ ಎನ್ನುತ್ತಿದ್ದ ಅತಿರಥರದ್ದು ಈಗಿನ ಷರತ್ತು. ಜುನ್ ತಿಂಗಳಿಂದ ಬಿಲ್ ಕಟ್ಟಬೇಕಾಗಿಲ್ಲ ಎನ್ನುತ್ತಿದ್ದವರು ಈಗ ಒಂದು ತಿಂಗಳು ಮುಂದಕ್ಕೆ ದೂಡಿ ಜುಲೈ ಆಗಿದೆ ,ಸಧ್ಯಕ್ಕೆ ಅದೂ ಕೂಡ ಫೈನಲ್ ಆಗಿಲ್ಲ ,ಅದಕ್ಕೂ ಸಹಾ ಅರ್ಜಿ ಗುಜರಾಯಿಸಲು ಒದ್ದಾಡ ಬೇಕಿದೆ ಓಡಾಡ ಬೇಕಿದೆ , ಸೇವಾ ಸಿಂಧೂ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಜೂನ್೧೮ ರಿಂದ ಜಾರಿಗೆ ಬಂದರೂ ,ಪೋರ್ಟಲ್ ಮಾತ್ರ ಫುಲ್ ಸರ್ವರ್ ಡೌನ್ ! ಜನ ದಿನ ನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಾದು -ಕಾದು ಸುಸ್ತಾಗಿ ಮನೆಕಡೆ ಹೆಜ್ಜೆ ಹಾಕದೇ ವಿಧಿ ಇಲ್ಲ. ಆಫ್ ಲೈನ್ ಮೂಲಕ ಅಥವಾ ಸರಳವಾಗಿ ,ಪಂಚಾಯತ್ ,ಬೂತ್ ಮಟ್ಟದಲ್ಲಿ ಇದನ್ನು ಕೈ ಕೊಂಡಿದ್ದರೆ ,ಹೇಗೂ ಕೈ ಪಕ್ಷ ಮಾಡಿದ ತಲೆ ಬುಡ ಇಲ್ಲದ ಗ್ಯಾರಂಟಿ ಯೋಜನೆಗೆ ಗೌರವ ವಾದರೂ ಸಿಗುತ್ತಿತ್ತು , ಇನ್ನು ಸೈಬರ್ ಕೆಫೆ ಗಳಲ್ಲಿ ೧೦೦,೨೦೦ ರೂಪಾಯಿಗಳನ್ನು ನೀಡಬೇಕಾದ ಪರಿಸ್ಥಿತಿ ಅದೂ ಕೂಡಾ ದಿನವೀಡೀ ಕಾದೂ ಬಸವಳಿದು ! ಇನ್ನು ಅನ್ನ ಭಾಗ್ಯದ ಸರದಿ ,ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದವರು ,ಈಗ ಅಕ್ಕಿ ಸ್ಟಾಕ್ ಇಲ್ಲದೇ ಅಕ್ಕಿಗಾಗಿ ಜಟಾಪಟಿ ನಡೆಸುತ್ತಿದ್ದಾರೆ . ಐದು ಕೆಜಿ ಅಂತೂ ಕೇಂದ್ರ ಸರ್ಕಾರ ನೀಡುತ್ತಿದೆ ಇನ್ನೈದು ಕೆಜಿ ಸಿದ್ದರಾಮಯ್ಯ ಸರ್ಕಾರದ್ದೂ.ಇದನ್ನು ಹೊಂದಿಸಿಕೊಂಡು ಹಂಚಿಕೆ ಮಾಡಿ ತಮ್ಮ ಜವಾಬ್ದಾರಿಯನ್ನು ಮರೆಯಬೇಕಿದ್ದ ,ಸಿದ್ದರಾಮಯ್ಯ ಅಂಡ್ ಗ್ಯಾಂಗ್ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದೆ. ನುಡಿದಂತೆ ನಡೆಯಲು ಆಗದವರು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ .ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅವರ ಬಳಿ ತುಂಬಾ ಸ್ಟಾಕ್ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನೂ ಮಾಡಿ ಬಿಟ್ಟದ್ದಾರೆ . ಕೇಂದ್ರ ಸರ್ಕಾರ ನೀಡುವ ಐದು ಕೆಜಿಯನ್ನು ಅವರು ಕೊಡುತ್ತಿದ್ದಾರೆ ,ಹೆಚ್ಚುವರಿಯಾಗಿ ಐದು ಕೆಜಿ ಕೊಡಲು ಬಿಜೆಪಿ ಪ್ರಣಾಳಿಕೆಯಲ್ಲಿತ್ತೆ ?ಕಾಂಗ್ರೆಸ್ ಅಲ್ಲವೇ ೧೦ ಕೆಜಿ ನೀಡುತ್ತೇವೆ ಎಂದು ಡಂಗುರ ಸಾರಿದ್ದು, ಹತ್ತು ಕೆಜಿ ಎಂದು ಗ್ಯಾರಂಟಿ ಕಾರ್ಡ್ ನಲ್ಲಿ ಹೇಳಿದ್ದರು ಐದು ಕೆಜಿ ಕೇಂದ್ರ ಸರ್ಕಾರ ಕೊಡುತ್ತಿದೆ ಅದನ್ನು ಬಿಟ್ಟು ಕಾಂಗ್ರೆಸ್ ೧೦ ಕೆಜಿ ಕೊಡುತ್ತದೆಯೋ ಉತ್ತರವಿಲ್ಲ ಅದು ಸೇರಿದರೇ ಒಟ್ಟು ೧೫ ಕೆಜಿ ಪಡಿತರ ಆಗುತ್ತದೆ. ಅಕ್ಕಿ ಕೊಡಿ ನಾವು ಪ್ರತಿಯಾಗಿ ಹಣ ನೀಡುತ್ತೇವೆ ನಮಗೆ ಪುಕ್ಕಟೆ ಬೇಡ ಎನ್ನುವ ಕೇಂದ್ರ ಸರಕಾರಕ್ಕೆ ಇವರುಗಳು ಬೇರೆ ಎಲ್ಲಿಯಾದರೂ ಆರೆಂಜ್ ಮಾಡಿ ಕೊಳ್ಳಬಾರದೇಕೇ ?ನಮ್ಮ ರಾಜ್ಯದಲ್ಲಿ ಅದೆಷ್ಟೋ ರೈತರಿದ್ದಾರೆ ಅವರಿಂದ ಪಡೆದು ಕೊಳ್ಳಲಿ ಅವರಿಗೂ ಸಹಾ ಅದರಿಂದ ಸಹಾಯವಾಗಬಲ್ಲದು ,ಅದಿಲ್ಲದಿದ್ದರೇ ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಿ , ಅದ್ಯಾವುದೂ ಆಗದೇ ಹೋದಲ್ಲಿ ಆ ಐದು ಕೆಜಿಯ ಹಣವನ್ನು ಫಲಾನುಭಿಗಳ ಖಾತೆಗೆ ಹಾಕಲಿ ,ಒಟ್ಟಾರೆ ಕುಂಟು ನೆಪ ಹೇಳಿ ಜಾರಿ ಕೊಳ್ಳುವ ಉಪಾಯ ಬೇಡ. ದಿನ, ತಿಂಗಳುಗಳು ಹೀಗೆ ಸಾಗಲಿ ಎಂಬ ವಿಚಾರ ಇರಬಹುದೇ ,ಜುಲೈ ನಿಂದ ಕೊಡುತ್ತೇವೆ ಅಂದವರು ಈದೀಗ ಆಹಾರ ಸಚಿವರ ವರಸೆ ಬದಲಾಗಿದೆ ಆಗಷ್ಟ್ ಗೆ ಎಂಬ ಉತ್ತರ ಬರುತ್ತಿದೆ.,ಗೊತ್ತಿಲ್ಲ ಮುಂದಿನ ಕಥೆ ಏನೋ ? ಕೇಂದ್ರ ಸರ್ಕಾರ ನೀಡುತ್ತದೆ ಎಂದು ಎಲ್ಲಿಯೂ ಹೇಳಿಲ್ಲ ಕೇಂದ್ರದ ಬಳಿ ಒಂದಿಷ್ಟು ಸ್ಟಾಕ್ ಇದ್ದರೂ ಸುಮಾರು ೩೦ ರಾಜ್ಯಗಳ ಹೊಣೆ ಕೇಂದ್ರ ಸರ್ಕಾರದ ಮೇಲೆ ಇದೆ,ಪ್ರತಿ ರಾಜ್ಯಕ್ಕೂ ತಲಾ ಐದು ಕೆಜಿ ಯಂತೆ ನೀಡಬೇಕು ,ಮುಂಗಾರು ಹಿನ್ನಡೆ ಮತ್ತಿತರ ಕಾರಣಗಳಿಂದ ಭವಿಷ್ಯದ ವಿಚಾರಕ್ಕೆ ಸ್ಟಾಕ್ ಮಾಡಿ ಕೊಂಡಿರಬಹದು ಅದನ್ನು ತಮಗೆ ನೀಡಿ ಎಂದು ಬೆನ್ನು ಬೀಳುವುದು ,ಹೋರಾಟ ನೆಡೆಸುವುದು ಎಷ್ಟು ಸರಿ? ಗ್ರಹ ಲಕ್ಷ್ಮೀ ಗ್ಯಾರಂಟಿಗೂ ಷರತ್ತು ಅನ್ವಯವಾಗಿದೆ ರಾಜ್ಯದ ಎಲ್ಲಾ ಮನೆ ಯಜಮಾನಿಯೂ ಫಲಾನುಭವಿ ಅಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಅದರಲ್ಲೂ ಮನೆಯಲ್ಲಿ ಯಾರಾದರೂ ಟ್ಯಾಕ್ಸ್ ಪೇಯರ್ ಆಗಿದ್ದರೆ ಅವರಿಗೆ ಇಲ್ಲವೇ ಇಲ್ಲ. ಇನ್ನೂ ಜಾರಿ ಗೊಂಡಿಲ್ಲ ,ಅದಿನ್ನೂ ಇಮ್ಲಿಮೆಂಟ್ ನಲ್ಲೇ ಇದೆ., ಎಂದು ಅರ್ಜಿಗೆ ಅವಕಾಶ ಪಡೆದು ಕೊಳ್ಳುತ್ತೋ ಕಾದುನೋಡಬೇಕಾಗಿದೆ . ಒಟ್ಟಾರೆ ನಾಲ್ಕು ಗ್ಯಾರಂಟಿಗಳ ಬಗೆಗೆ ದಿನ ನಿತ್ಯ ಒಂದೊಂದು ಷರತ್ತು ನಿಯಮಾವಳಿ ಕೇಳಿ ಬರುತ್ತಿದ್ದರೇ, ಐದನೇ ಗ್ಯಾರಂಟಿ ಯುವ ನಿಧಿ ಪದವಿದರರಿಗೆ ೩೦೦೦ ಹಾಗೂ ಡಿಪ್ಲೋಮ ಹೊಂದಿದವರಿಗೆ ೧೫೦೦ರೂ. ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು, ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೋಮಾ, ಇನ್ನಿತರ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಹಗಲಿರಳು ಶ್ರಮಿಸುತ್ತ, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೇ..? ಸದ್ಯಕ್ಕೆ ಈ ಯೋಜನೆಯ ಆಸೆ ಬದಿಗಿರಿಸೋಣ! ಇನ್ನೊಂದು ವರ್ಷದೊಳಗೆ ಎಂಪಿ ಎಲೆಕ್ಷನ್ ಬರುತ್ತಿದೆ ಅದರ ಒಳಗೆ ಈ ಐದು ಗ್ಯಾರಂಟಿಗಳು ಫಲಪ್ರಧವಾದರೇ ಕಾಂಗ್ರೆಸ್ ಗೆ ಒಂದೆರಡು ಹೆಚ್ಚಿಗೆ ಓಟ್ ಬೀಳಬಹುದು . ಎಲ್ಲಿಂದ ಬರಲಿದೆ ಗ್ಯಾರಂಟಿ ಯೋಜನೆಗೆ ಬಜೆಟ್ ? ನುಡಿದಂತೆ ನಡೆದಿದ್ದೇವೆ ಎಂದು ಬೀಗುವ ಕಾಂಗ್ರೆಸ್ ,ಹೇಳಿದ್ದು ಬೇರೆ ಮಾಡುತ್ತಿರುವುದೇ ಬೇರೆ ,ಎಲ್ಲಾ ಗ್ಯಾರಂಟಿ ಗಳಿಗೆ ಕಂಡೀಷನ್ ಆಪ್ಲ್ಯೆ ! ,ಇಷ್ಟಾದರೂ ಇದಕ್ಕೆ ಸಾವಿರಾರು ಕೋಟಿ ಬಜೆಟ್ ಬೇಕೇ ಬೇಕು ! ಎಲ್ಲಿಂದ ಬರುತ್ತದೆ ಬಜೆಟ್ ? ಒಂದೋ ಸಾಲ ಮಾಡಬೇಕು ಇಲ್ಲ ಬೆಲೆ ಏರಿಕೆ ಮಾಡಲೇಬೇಕು ಇದಲ್ಲದೆ ಬೇರೆ ವಿಧಿ ,ಯಾವೋಬ್ಬ ಜನ ಪ್ರತಿನಿಧಿಯೂ ತಮ್ಮ ಮನೆಯಿಂದ ಬಂಡವಾಳ ಹಾಕುವುದಿಲ್ಲ ಎಲ್ಲವೂ ನಮ್ಮ ಸಾಮಾನ್ಯ ಪ್ರತಿಯೊಬ್ಬ ನಾಗರಿಕನ ಬೆವರಿನ ಹಣವೇ . , ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ ,ವಿದ್ಯುತ್ತು ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದೆ ,ಅಬಕಾರಿ ವಸ್ತುಗಳ ಬೆಲೆ ೨೦% ಕೂ ಅಧಿಕ ಏರಿಕೆ ,ಹಾಲಿನ ದರ ಲೀ ೫ ರೂ ಏರಿಕೆ ಕಾಣಲಿದೆಯಂತೆ , ಪೆಟ್ರೋಲ್ ,ಡೀಸೆಲ್ ಬೆಲೆ ಕೆಲವೇ ದಿನಗಳಲ್ಲಿ ಏರಿಕೆ ಕಾಣಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೆಚ್ಚಿನ ವಸ್ತುಗಳೆಲ್ಲವೂ ದುಪ್ಪಟ್ಟು ,ಇದೇ ಉಚಿತ ಭಾಗ್ಯಕ್ಕೆ ಹೆಲ್ಪ್ .ಅಂತೂ ಎಲ್ಲರ ನಿರೀಕ್ಷೆಯಂತೆ ೧೦ರೂ ಕೊಟ್ಟು ೨೦ರೂ ವಸೂಲಿ ಮಾಡುವ ತಂತ್ರಗಾರಿಕೆ ಎನ್ನುವುದು ಗಾತ್ರಿ ಆಗಿದೆ. ಜೊತೆಗೆ ಇದೆ ಸಾಲದ ಶೂಲ ,ಒಟ್ಟಾರೆ ದಿವಾಳಿ ಭಾಗ್ಯ . ಏನೆ ಇರಲಿ ಇದೀಗ ಮುಖ್ಯ ಐದು ಗ್ಯಾರಂಟಿಗಳ ವಿಚಾರಗಳಷ್ಟೇ ಪ್ರಚಾರಕ್ಕೆ ಬಂದಿರುವಂತದ್ದು ,ಮುಂದೆ ಪ್ರಣಾಳಿಕೆಯಲ್ಲಿ ಭರ್ತಿ ಭರವಸೆಗಳ ಪೂರ ,ಭಾಗ್ಯಗಳ ಲಿಸ್ಟ್ ಇದೆ ಅದು ಎಂದು ಮುನ್ನೆಲೆಗೆ ಬರುತ್ತೋ ಗೊತ್ತಿಲ್ಲ. ಮುಂದಿನ ಚುನಾವಣೆಯನ್ನು ದ್ರಷ್ಟಿಯಲ್ಲಿ ಇಟ್ಟುಕೊಂಡು ಹೇಗಾದ್ರೂ ಷರತ್ತು ನಿಯಮಗಳನ್ನು ಸೇರಿಸಿ ,ಬೆರೆಯಿಸಿ ಚಲಾಯಿಸಬಹುದು ,ಐದು ವರ್ಷ ಈ ಗ್ಯಾರಂಟಿಗಳ ಜೊತೆ ಪ್ರಣಾಳಿಕೆಯನ್ನ ಆಶ್ವಾಸನೆಗಾಲ ಮಹಾಪೂರ ಜಾರಿ ಯಾವುದು ಕಷ್ಟ ಸಾಧ್ಯ ,ಅದು ಜಾರಿಯಾದರೇ ರಾಜ್ಯ ಇನ್ನೊಂದು ಶ್ರೀಲಂಕಾ ಆಗುವದು ಶತ ಸಿದ್ದ , ಎಂಪಿ ಚುನಾವಣೆಯಲ್ಲಿ ,ಮತದಾರರು ಸರಿಯಾದ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ ,ಯಾವುದಕ್ಕೂ ಮೊದಲು ಪ್ರತಿಪಕ್ಷಗಳು ಸ್ಟ್ರಾಂಗ್ ಆಗಬೇಕಿದೆ ,ಕೇವಲ ಒಂದೆರಡು ಮುಖಗಳು ಮುನ್ನೆಲೆಗೆ ಬಂದು ಮಾಧ್ಯಮದ ಮುಂದೆ ಅರಚಿದರೇ ಪ್ರಯೋಜನವಾಗದು ಗಟ್ಟಿ ಧ್ವನಿ ಮೊಳಗಿಸುವ ಗುಂಡಿಗೆ ಇರಬೇಕು ,ಬರಬೇಕು ,ರಾಜ್ಯ ಅಭಿವೃದ್ಧಿ ಗೊಳ್ಳಬೇಕು ,ಬಿಟ್ಟಿ ಭಾಗ್ಯಗಳನ್ನ ಕೊಟ್ಟು ಜನರನ್ನು ಸೋಮಾರಿಯನ್ನಾಗಿಸುವ ಚಾಳಿ ದೂರವಾಗ್ಬೇಕು ,ಉಚಿತ ಕೊಡಲೇಬೇಕು ಎನ್ನುವ ಮನಸ್ಥಿತಿ ಇದ್ದರೇ ಮೂಲಭೂತ ವಿಚಾರಕ್ಕೆ ನೀಡಲಿ ,ಆರೋಗ್ಯ,ಶಿಕ್ಷಣ ,ಇನ್ನಿತರಕ್ಕೆ ವಿನಿಯೋಗವಾಗಲಿ ಎಂಬ ಸದಾಶಯದೊಂದಿಗೆ .