ಗುರುವಾರ, ಡಿಸೆಂಬರ್ 31, 2020
ಎಲ್ಲಿಗೆ ಬಂತು ಡ್ರಗ್ಸ್ ಡ್ರಿಲ್ ?
ಹೌದು ! ಇತ್ತೀಚಿಗೆ ಡ್ರಗ್ಸ್ ಬಗೆಗಿನ ವಿಶ್ಲೇಷಣೆ ಕೇಳಿ ಬರುತ್ತಿಲ್ಲ. ಒಂದು ಹಂತದಲ್ಲಿ ಗಾಂಧೀನಗರವನ್ನು ನಡುಗಿಸಿದ್ದ ಸುದ್ದಿ. ಬೆಚ್ಚಿ ಬೀಳಿಸುತ್ತಿತ್ತು ದಿನಾ -ಕ್ಷಣ . ದೊಡ್ಡ ಪ್ರಚಾರದ ಕೇಂದ್ರ ಬಿಂದುವಾಗಿತ್ತು. ದಿನ ದಿಂದ ದಿನಕ್ಕೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರುತ್ತಿತ್ತು . ಪ್ರಸ್ತುತ, ಪ್ರಕರಣದಲ್ಲಿನ ವೈವಿಧ್ಯತೆಯ ಕಳೆ ಕುಂದಿದೆ. ಅಷ್ಟಕ್ಕೂ, ಡ್ರಗ್ಸ್ ವಿಚಾರಣೆ ಎಲ್ಲಿಗೆ ಬಂತು ?ಹಳ್ಳ ಹಿಡಿಯಿತೇ ಎಂಬ ಪ್ರಶ್ನೆ ಮೂಡದೇ ಇರದು . ರೆಡ್ ಹ್ಯಾಂಡ್ ಆಗಿ ಡ್ರಗ್ಸ್ ಸಪ್ಲೆಯರ್ ಅನಿಕಾ ಸಿಕ್ಕಿ ಬಿದ್ದ ಬಳಿಕ ಮಾದಕ ಜಾಲವನ್ನು ಬಯಲಿಗೆ ತಂದ ಕೀರ್ತಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಯವರಿಗೆ ಸಲ್ಲಬೇಕು . ಮುನ್ನೆಲೆಗೆ ಬಂದು ಬಹಿರಂಗವಾಗಿ ಹೇಳಿಗೆ ಕೊಡಲು ಪ್ರಾರಂಭಿಸಿದ್ದರು .ಈರ್ವರ ಕೃಪಾಕಟಾಕ್ಷ ದಿಂದ ಸ್ಯಾಂಡಲ್ ವುಡ್ ನ ಕೆಲವು ತಾರೆಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು . ಇಬ್ಬರು ಹೀರೋಯಿನ್ ಹಾಗೂ ಕೆಲವು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಯಿತು . ಇನ್ನಷ್ಟು ಮತ್ತಷ್ಟು ಮಿಕಗಳು ಬಲೆಗೆ ಬೀಳಲಿದೆ ಎಂದೇ ಭಾವಿಸಲಾಗಿತ್ತು. ಸಿಸಿಬಿ ಕೂಡಾ ಫುಲ್ ಪವರ್ ನೊಂದಿಗೆ ನೋಟಿಸ್ ಜಾರಿ ಮಾಡುವುದು ಹಾಗೂ ಮನೆ ಮೇಲೆ ರೈಡ್ ಮಾಡುವ ಕಾಯಕ ,ಕಾರ್ಯಕ್ರಮಗಳನ್ನು ರೂಪಿಸಿ ಬಿಟ್ಟಿದ್ದವು .ಹೊಸ ಮನ್ವಂತರ ಸ್ರಷ್ಟಿಯಾಗಿ ಬಿಡುತ್ತದೆ . ಕೆಲವು ಫೇಮಸ್ ಸಿನಿಮಾ ಮಂದಿ ಸೇರಿದಂತೆ ಕೆಲವು ರಾಜಕಾರಣಿಗೆ ಹಾಗೂ ಅವರ ಮಕ್ಕಳು,ಉದ್ಯಮಿಗಳು ಇನ್ನೇನು ಅರೆಸ್ಟ್ ಆಗ್ತಾರೆ ಎಂದೇ ನಂಬಲಾಗಿತ್ತು .ಹಾಗಾಗಲಿಲ್ಲ., ಕಾದ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ .,ಸಿಗುತ್ತಿಲ್ಲ. ಡ್ರಗ್ಸ್ ಜಾಲದ ಬಗ್ಗೆ ಸಿನಿಮಾ ಕಲಾವಿದರರುಗಳ ಬಗ್ಗೆ ಬಾಂಬ್ ಸಿಡಿಸಿದ್ದ ಇಂದ್ರಜಿತ್ ಲಂಕೇಶ್ ಮುಖ್ಯವಾಹಿನಿಗೆ ಬಂದು ಒಂದೊಳ್ಳೆ ಹೇಳಿಕೆಯನ್ನು ಕೊಟ್ಟಿದ್ದರು."ಸಿಸಿಬಿ ತನಿಖೆ ಪಾರದರ್ಶಕ ವಾಗಿರುತ್ತದೆ ಎಂದೇ ಭಾವಿಸಿದ್ದೆ ನನ್ನಲ್ಲಿ ಇದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೆ. ಆದರೆ ನಾನು ಕೊಟ್ಟ ಲಿಸ್ಟ್ ನಲ್ಲಿರುವ ವ್ಯಕ್ತಿಗಳನ್ನ ಇದುವರೆಗೂ ತನಿಖೆ ನಡೆಸಿಲ್ಲ ,ಬಂಧಿಸಿಲ್ಲ" ಎಂದು ನಿರಾಶೆ ವ್ಯಕ್ತಪಡಿಸಿದ್ದರು , ನಿಜ ! ಇದಕ್ಕಿಂತ ಸರಳ ಉದಾಹರಣೆ ಬೇಕಿಲ್ಲ .ಕಾನೂನಾತ್ಮಕವಾಗಿ ಅದೆಷ್ಟು ಉತ್ತಮ ರೀತಿಯಲ್ಲಿ ತನಿಖೆ ನೆಡೆಯುತಿದೆ ಎಂಬುದನ್ನು ಇದು ರುಜುವಾತು ಗೊಳಿಸುತ್ತಿದೆ.
ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೈಯನ್ನು ವಿಚಾರಣೆ ಒಳಪಡಿಸಿ ಕಳಿಸಲಾಗಿತ್ತು . ಶೂಟಿಂಗ್ ಸಂದರ್ಭ ಕಣ್ಣು ಗಾಯಕ್ಕೊಳಕ್ಕಾಗಿ ಅದರ ನೋವು ನಿವಾರಣೆಗೆ ತುಸು ಡ್ರಗ್ಸ್ ಮೊರೆ ಹೋಗಿದ್ದು ಸತ್ಯ ಎಂದು ದಿಗಂತ್ ಹೇಳಿದ್ದರಂತೆ . ತಗೆದು ಕೊಂಡಿದ್ದನ್ನು ಒಪ್ಪಿಕೊಂಡ ನಂತರ ಅವರನ್ನು ಮನೆಗೆ ಕಳುಹಿಸಿ ಮತ್ತೆ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಮುಚ್ಚಳಿಕೆ ಬರೆಯಿಸಿ ಕೊಂಡು ಕಳುಹಿಸಿ ಕೊಟ್ಟಿದ್ದರಂತೆ ಸಿಸಿಬಿ . ಮತ್ತೆ ಆ ಗೌಜಿಗೆ ಹೋಗಿಲ್ಲ ತನಿಖಾಧಿಕಾರಿಗಳು !
ತನ್ಮಧ್ಯೆ ಡ್ಯಾನ್ಸ್ ಮಾಸ್ಟರ್ ಕಿಶೋರ್ ನ ಬಂಧನ ವಾಗುತ್ತದೆ . ವಿಚಾರಣೆ ವೇಳೆ ಸ್ಟಾರ್ ಆಂಕರ್ ಕಮ್ ನಟಿ ಮಂಗಳೂರು ಬೆಡಗಿ ಅನುಶ್ರೀ ಹೆಸರು ಹೇಳುತ್ತಾನೆ. ಅನುಶ್ರೀ ವಿಚಾರಣೆ ಕೂಡಾ ಆಗುತ್ತದೆ ವಿಚಾರಣೆ ಬಳಿಕ ದೊಡ್ಡ ಸುದ್ದಿ ಹರಡಲಾರಂಭಿಸುತ್ತದೆ . ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಅನುಶ್ರೀ ರಕ್ಷಣೆಗೆ ಶುಗರ್ ಡ್ಯಾಡಿ ಪಾತ್ರವಿದೆ ಎಂದು ಹೇಳಿಕೆ ಕೊಡುತ್ತಾರೆ. ಅನುಶ್ರೀಯನ್ನು ವಿಚಾರಣೆ ಮಾಡಿದ್ದ ಸಿಸಿಬಿ ಪೊಲೀಸ್ ಒಬ್ಬರನ್ನು ಎತ್ತಂಗಡಿ ಮಾಡಲಾಗಿತ್ತಂತೆ . ವಿಚಾರಣೆಗೆ ತೆರಳುವ ಮುನ್ನ ದಿನ ಅನುಶ್ರೀ ದೊಡ್ಡ ದೊಡ್ಡ ರಾಜಕಾರಣಿಗಳಿಗೆ ಫೋನ್ ಮಾಡಿದರಂತೆ ಕಾರಣ ಸಿಸಿಬಿ ಯವರ ಬಂಧನದಿಂದ ಬಚಾವಾಗಲು . ಇತ್ಯಾದಿ ಇತ್ಯಾದಿ ಸುದ್ದಿಗಳೆಲ್ಲಾ ಸುದ್ದಿ ಮನೆಯಲ್ಲಿ ಹರಿದಾಡಿದ್ದವು . ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ! ಏನೇ ಇರಲಿ ಇತ್ತೀಚಿಗೆಗಂತೂ ಯಾರೊಬ್ಬರ ವಿಚಾರಣೆ ನಡೆಯಲಿಲ್ಲ ಎಂಬುದಂತೂ ದಿಟ . ಎಲ್ಲಿಗೆ ಬಂತು ವಿಚಾರಣೆ ಎಂಬ ಪ್ರಶ್ನೆಯನ್ನು ಇರಿಸಿಕೊಳ್ಳದೇ ವಿಧಿ ಇಲ್ಲ
ಕೊನೆಯದಾಗಿ ,ಜೈಲಿನಲ್ಲಿರುವ ರಾಗಿಣಿ ,ಸಂಜನಾಗೆ ಇನ್ನೂ ಬಿಡುಗಡೆ ಭಾಗ್ಯ ಮಾತ್ರ ಕಂಡು ಬಂದಿಲ್ಲ . ಇದೀಗ ಸಂಜನಾ ಆರೋಗ್ಯ ಸಮಸ್ಯೆ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಅವರ ಬೆನ್ನಿಗೆ ನಟಿ ರಾಗಿಣಿ ಕೂಡಾ ಆಸ್ಪತ್ರೆಗೆ ಸೇರಿದ್ದಾರೆ ಎಂಬ ಸುದ್ದಿ ಬಂದಿದೆ. ಇದೊಂದು ಹೊಸ ನಮೂನೆಯ ನಾಟಕವು ಗೊತ್ತಿಲ್ಲ ಒಟ್ಟಾರೆ ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ದೊಡ್ಡ ನಟ -ನಟಿಯರು ಸಿಲುಕಿದ್ದಾರೆ ಎಂಬಂತಿದ್ದ ಸ್ಥಿತಿ ಕೇವಲ ಇಬ್ಬರು ಹೀರೋಯಿನ್ ಗೆ ಮುಕ್ತಾಯ ಕಾಣತ್ತೋ ಗೊತ್ತಿಲ್ಲ . ಪಟ್ಟಭಧ್ರ ಹಿತಾಸಕ್ತಿಗಳು ಮುಚ್ಚಿ ಹಾಕಿದವೋ ಅದಕ್ಕೂ ಉತ್ತರ ಇಲ್ಲ .
ಗುರುವಾರ, ಡಿಸೆಂಬರ್ 17, 2020
ಕೊಡಚಾದ್ರಿಗೆ ಕೊಡಲಿ ?
ದೈವೀ ನಿಷ್ಠ ಪ್ರಕ್ರತಿ ಸೌಂದರ್ಯದ ಪಶ್ಚಿಮ ಘಟ್ಟದ ಕೊಡಚಾದ್ರಿಗೆ ಸದ್ದಿಲ್ಲದೇ ಕೊಡಲಿಯೇಟು ಹಾಕುವ ಹುನ್ನಾರ ರೂಪುಗೊಂಡಿದೆ . ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆಯ ಮೂಲ ಸ್ಥಾನ . ಆಧ್ಯಾತ್ಮಿಕ ಕ್ಷೇತ್ರ ಕೊಡಚಾದ್ರಿ ಶಿಖರಕ್ಕೆ ಇತ್ತೀಚಿಗೆ ಘನ ಸರ್ಕಾರ ಪ್ರವಾಸೋದ್ಯಮದ ಅಡಿಯಲ್ಲಿ ರೋಪ್ ವೇ (ಕೇಬಲ್ ಕಾರ್ ) ನಿರ್ಮಿಸುವ ಯೋಜನೆಯನ್ನು ಜಾರಿಗೆ ತಂದಿದ್ದೂ,ತೀವ್ರ ಆಕ್ಷೇಪ ,ಆಕ್ರೋಶಕ್ಕೆ ಗುರಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಂತಿರುವ ಸರ್ಕಾರವು ಈ ಅನೀತಿ ಯಿಂದ ಹೊರಬರಬೇಕಾಗಿದೆ ಪ್ರಕ್ರತಿ ಸಂಪತ್ತಿನ ನೈಜ ಸೌಂದರ್ಯದಿಂದ ಕಂಗೊಳಿಸುವ ಕೊಡಚಾದ್ರಿ ಪರ್ವತವನ್ನು ಕೇವಲ ಟ್ರಕ್ಕಿಂಗ್ ಗಾಗಿ ಅವಲಂಬಿಸದೇ ಚಾರಣಿಗರಿಗಿಂತ ಅಧಿಕ ಪ್ರಮಾಣದಲ್ಲಿ ಆಸ್ತಿಕರು ಅಪ್ಪಿಕೊಂಡಿದ್ದಾರೆ,ಒಪ್ಪಿಕೊಂಡಿದ್ದಾರೆ . ಕೊಡಚಾದ್ರಿ ಕರ್ನಾಟಕದ ಎರಡನೇ ಅತೀ ದೊಡ್ಡ ಪರ್ವತವಾಗಿದೆ. ಚಿಕ್ಕ ಮಗಳೂರಿನ ಮುಳ್ಳೆಯನಗಿರಿಯನ್ನು ಹೊರತು ಪಡಿಸಿದರೇ ಕೊಡಚಾದ್ರಿಗೆ ಎರಡನೇ ಸ್ಥಾನ .ಕೊಡಚಾದ್ರಿ ಪ್ರವಾಸಿ ತಾಣವಲ್ಲ ಧಾರ್ಮಿಕ ನೆಲೆಬೀಡು .ಪ್ರವಾಸಿಗರಿಗಿಂತ ಧಾರ್ಮಿಕತೆಯನ್ನು ಮೇಳೈಸಿ ಕೊಂಡು ಬರುವ ಭಕ್ತ ಮಹಾಶಯರ ಸಂಖ್ಯೆಯೇ ಅಧಿಕ. ಕೊಡಚಾದ್ರಿ ಕೊಲ್ಲೂರಿನಿಂದ ೨೧ ಕೀಮಿ ದೂರದಲ್ಲಿದೆ ಸಮುದ್ರ ಮಟ್ಟದಿಂದ ಸುಮಾರು ೧೪೦೦ ಮೀ ಎತ್ತರವನ್ನು ಹೊಂದಿದೆ. ದೇವಿ ಮೂಕಾಂಬಿಕೆಯ ಆದಿ ಕ್ಷೇತ್ರ . ಶ್ರೀ ದೇವಿ ಕ್ರೂರ ರಾಕ್ಷಸ ಮೂಕಾಸುರನನ್ನು ವಧಿಸಿದ ಸ್ಥಳ . ಸೌಪರ್ಣಿಕಾ ನದಿಯ ಉಗಮ ಸ್ಥಾನ. ಆದಿ ಶಂಕರಾಚಾರ್ಯರು ತಪೋಗೈದ ಪುಣ್ಯ ಭೂಮಿ . ಸರ್ವಜ್ಞ ಪೀಠ ,ಗಣೇಶ ಗುಹಾಲಯವನ್ನು ಹೊಂದಿರುವ ದಿವ್ಯ ನೆಲೆ. ಎಲ್ಲಾಕ್ಕಿಂತ ಹೆಚ್ಚಾಗಿ ನಿಸರ್ಗ ಸುಂದರ ಭೂ ಲೋಕದ ಅಪ್ಸರೆ ಈ ಕೊಡಚಾದ್ರಿ !ಉಡುಪಿ ಜಿಲ್ಲೆಗೆ ಪ್ರಥಮ ರೋಪ್ ವೇ ಹಾಗೂ ಪ್ರವಾಸೋದ್ಯಮಕ್ಕೆ ಇಲ್ಲಿಗೆ ಹೆಚ್ಚಿನ ಬಲ ಬಂದರೂ, ಪಶ್ಚಿಮ ಘಟ್ಟದ ಕಣಜ ಕೊಡಚಾದ್ರಿ ಪರಿಸರಕ್ಕೆ ಹಾಗೂ ಶ್ರದ್ಧಾಭಕ್ತಿಯ ಕೇಂದ್ರ ವಾಗಿರುವ ಇಲ್ಲಿಗೆ ಇದು ಪೂರಕವಾಗಿಲ್ಲ . ಇಲ್ಲಿ ರೂಪ್ ವೇ ಪ್ರಾರಂಭ ಮಾಡಿದ್ದೇಯಾದರೇ ಇದು ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ಕೇಂದ್ರವಾಗಿ ರೂಪು ಗೊಳ್ಳುತ್ತದೆ. ಮೋಜು -ಮಸ್ತಿಗೆ ದಾರಿ ಮಾಡಿಕೊಡುವುದರೊಂದಿಗೆ ಧಾರ್ಮಿಕ ಕ್ಷೇತ್ರವನ್ನು ಹಾಳುಗೆಡುವಂತಾಗುತ್ತದೆ . ಸರ್ಕಾರಕ್ಕೆ ಅಭಿವೃದ್ಧಿಪಡಿಸುವ ಆಲೋಚನೆ ಇದ್ದರೇ, ಕಡಿದಾದ ರಸ್ತೆ ದುರ್ಗಮ ಹಾದಿಯನ್ನು ದುರಸ್ತಿ ಗೊಳಿಸಲಿ ಕೊಲ್ಲೂರು ಕ್ಷೇತ್ರಕ್ಕೆ ಆಗಬಹುದಾದ ಸಾಕಷ್ಟು ಕಾಮಗಾರಿಗೆ ದ್ರಷ್ಟಿ ನೆಟ್ಟಬಹುದು ಅದನ್ನೆಲ್ಲವನ್ನು ಬದಿಗಿರಿಸಿ ,ಈ ರೋಪ್ ವೇ ಯೋಚನೆಗೆ ಮುಂದಾಗಿರುವುದು ನಿಜಕ್ಕೂ ಆಸಮಂಜಸ. ಪ್ರಕೃತಿಗೆ ಮಾರಕವಾಗಿರುವ ಈ ವ್ಯವಸ್ಥೆಯಲ್ಲಿ ಪ್ರಕ್ರತಿ ಮಾತೆಯೇ ಧರೆಗೆ ಇಳಿದಿರುವ ಕೊಡಚಾದ್ರಿಯಲ್ಲಿರುವ ಅರಣ್ಯ ನಾಶವಾಗುತ್ತದೆ., ಪ್ರಾಣಿ- ಪಕ್ಷಿ ಸಂಕುಲ ,ಕಣ್ಮರೆಯಾಗುತ್ತದೆ . ಅಪಾರ ಅಪರೂಪದ ಔಷಧೀಯ ಸಸ್ಯ ಸಂಪತ್ತು ಬರಿದಾಗುತ್ತದೆ . ಆಧ್ಯಾತ್ಮಿಕ ಕ್ಷೇತ್ರಕ್ಕೆ ದಕ್ಕೆ ಉಂಟಾಗುತ್ತದೆ . ಇವೆಲ್ಲವೂ ಒತ್ತಿಟ್ಟಿಗಿರಲಿ ,ಮಡಿಕೇರಿಯ ಘಟನೆಯನ್ನು ಒಮ್ಮೆ ಮನದಲ್ಲಿ ಇಳಿಸಿಕೊಂಡರೆ ಸಾಕು ಇತ್ತೀಚಿಗೆ ನಡೆದ ಅಂತಹ ಅಪಾಯಕಾರಿ ಘಟನೆ ಮರುಕಳಿಸಬಾರದು ಎಂದಾದರೇ ಈ ಯೋಜನೆಯಿಂದ ಹಿಂದೆ ಸರಿಯಬೇಕಾಗಿದೆ . ರಕ್ಷಿತಾರಣ್ಯದಲ್ಲಿರುವ ಪ್ರಾಚೀನ ವೃಕ್ಷಗಳು, ಜೀವ ವೈವಿಧ್ಯತೆ ಉಳಿಸಲು ಈ ಯೋಜನೆ ವಿರುದ್ಧ ಸಾಕಷ್ಟು ಮನಸ್ಸುಗಳು ವಿರೋಧ ವ್ಯಕ್ತ ಪಡಿಸುತ್ತಿದೆ ಸುತ್ತರ್ಯವೂ ಹೌದು. ಬ್ರಹತ್ ಗಾತ್ರದ ಟವರ್ ,ಪಿಲ್ಲರ್ ,ಬೀಮ್ ನಿರ್ಮಿಸಲು ಸಾಕಷ್ಟು ಪ್ರಮಾಣದ ಅರಣ್ಯ ನಾಶ ವಾಗುವುದರ ಜೊತೆಗೆ ಪುಣ್ಯ ದಿವ್ಯ ಕ್ಷೇತ್ರದ ಘನತೆಗೆ ಕುಂದು ಉಂಟಾಗುತ್ತದೆ . ಕೊಡಚಾದ್ರಿಯನ್ನು ಉಳಿಸಬೇಕು ,ಉಳಿಸಿಕೊಳ್ಳಲು ಹೋರಾಡಬೇಕಿದೆ. ಬೇಡಿಕೆಗೆ ಬೆದರದೇ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದೆಯಾದರೇ ಮೂಕಾಂಬಿಕೆ ಮುನಿಯದೇ ಇರಲಾರಳು ಅನಾಹುತ ನಡೆಯುದಕ್ಕಿಂತ ಮೊದಲು ಈ ಯೋಜನೆ ಯಿಂದ ಹಿಂದೆ ಸರಿಯುವುದೇ ಲೇಸು !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)


