ಕರ್ನಾಟಕದಲ್ಲಿ ಇವತ್ತಿನವರೆಗೆ ಸುಮಾರು 13 ಸ್ಯಾಟ್ ಲೈಟ್ ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ .ಇನ್ನೂ ಕೇಬಲ್ ಟಿವಿ ನೆಟ್ವರ್ಕ್ಗಳಿಗೆ ಲೆಕ್ಕವಿಲ್ಲ.. ! ಹೌದು ಇದು ಸರಿ ಸುಮಾರು ಹತ್ತು ವರ್ಷಗಳಿಂದ ಈಚೇಗಿನ ಬೆಳವಣಿಗೆ . ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಪತ್ರಿಕೋದ್ಯಮ ,ಮಾಧ್ಯಮಗಳು ಸಮಾಜ ಮುಖಿ ಕಾರ್ಯಚರಿಸುವುದಕ್ಕಿಂತ ಒಂದು ರೀತಿಯಲ್ಲಿ ಬಿಜಿನೆಸ್ ಆಗಿ ರೂಪು ಗೊಂಡಿದೆ ಏನೋ ಎಂಬಂತೆ ಬಾಸವಾಗುತ್ತಿವೆ ಪ್ರಸ್ತುತ ಪರಿಸ್ತಿತಿಯನ್ನು ಅವಲೋಕಿಸಿದರೆ ಈ ಮಾತನ್ನು ತಳ್ಳಿ ಹಾಕುವಂತೆಯೂ ಇಲ್ಲ ., ಹಾಗಂತ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳುವನ೦ತೆಯೂ ಇಲ್ಲ .ಇದರಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವುದು ಎಲೆಕ್ಟ್ರಾನಿಕ್ ಮಾಧ್ಯಮ . ಟಿವಿಯ ಮುಂದೆ ನಿದಿಷ್ಟ ಡಿಶ್ ನೆಟ್ವರ್ಕ್ ಗಳ ಮೂಲಕ ಆಸ್ಪಾದಿಸಬೇಕಾದ ಕಾಲವಿತ್ತು .ಈಗ ಹಾಗಿಲ್ಲ ಅಂಗೈ ಅಗಲದ ಮೊಬೈಲ್ ನಲ್ಲಿ ನೇರವಾಗಿ ವಿಕ್ಷಿಸುವಂತ ಜಮಾನಕ್ಕೆ ಬಂದಿದ್ದೇವೆ.ಈ ನಡುವೆ ತಾಂತ್ರಿಕತೆಯೂ ಸಹಾ ಅಷ್ಟೇ ಮುಂದುವರಿದಿದೆ. ಗಂಟೆಗಟ್ಟಲೇ ಕಾಯಬೇಕಾದ ಅಗತ್ಯವೂ ಇಲ್ಲ ಎಲ್ಲಾ ಪಾಸ್ಟ್! ..ಪಾಸ್ಟ್ ಆಗಿ ಸಿಗುತ್ತಿವೆ ಲೈವ್ ಆಗಿ ಆಯಾ ಸ್ಥಳ ದಿಂದಲೇ ಕಾರ್ಯಕ್ರಮ ಸುದ್ದಿಗಳು ಬಿತ್ತಾರವಾಗುತ್ತಿವೆ . ಏನೇ ಇರಲಿ ಪಾಸ್ಟ್ ಜನರೇಶನ್ ನಲ್ಲಿ ಟಿವಿ ಮುಂದೆ ಕೂತು ಸುದ್ದಿ ನೋಡವುದು ,ಪೇಪರ್ ಪುಟ ತಿರುವಿ ಹಾಕುವಷ್ಟು ಸಮಯವ್ಯಯ ಮಾಡುವುದಕ್ಕೆ ಪುರಸೋತ್ತೆ ಇಲ್ಲ ..ಇಂತಹ ಕಾರಣ ಗಳಿಂದ ಸ್ಪರ್ದಾತ್ಮಕವಾಗಿ ಸುದ್ದಿ ನೀಡುವಲ್ಲಿ ಕೊಂಚ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಬಲು ದೊಡ್ಡದು.ಆದರೆ ಬ್ರೇಕಿಂಗ್ ನ ನ್ಯೂಸ್ ನೀಡುವ ಸುದ್ದಿ ವಾಹಿನಿಗಳೇ ಕೆಲವೊಮ್ಮೆ ಬ್ರೇಕಿಂಗ್ ನ್ಯೂಸ್ ಆಹಾರಕ್ಕೆ ಒಳಗಾಗಿ ನಗೆ ಪಾಟಲಿಗೆ ಈಡಾಗುವುತ್ತಿರುವುದೇ ವಿಪರ್ಯಾಸ !!
ಕರ್ನಾಟಕದಲ್ಲಿ ಟಿವಿ 9 ವಾಹಿನಿ ಕ್ರಪಾಕಟಾಕ್ಷದಿಂದ ಸಾಕಷ್ಟು ಚಾನೆಲ್ ಗಳು ಅರಳಿವಿವೆ ಹಾಗೂ ಅಳಿದಿವೆ ಹಾಗೂ ಅಳಿವಿನ ಅಂಚಿನಲ್ಲಿದೆ ಇನ್ನೂ ಕೆಲವು ಮೊಗ್ಗಾಗಿ ಅರಳುವ ಸನಿಹದಲ್ಲಿದೇವೆ .
ಸುಮಾರು ಹತ್ತು ವರ್ಷಗಳ ಹಿಂದೆ ನಮಗೆ ಸುದ್ದಿ ,ದ್ರಶ್ಯ ಮಾದ್ಯಮದಲ್ಲಿ ಕಾಣಲು ದಿನದಲ್ಲಿ ಕೆಲವು ಗಂಟೆಗಳು ಮಾತ್ರ ಈ ಟಿವಿ ಹಾಗೂ ಉದಯ ಟಿವಿ ಮುಖಾ೦ತರ ಸಿಗುತ್ತಿತ್ತು. ತದ ನಂತರ ಕರ್ನಾಟಕದ ಬಾಗಿಲು ಬಡಿದಿದ್ದು ಅಂದ್ರ ಮೂಲದ ಟಿವಿ 9 ಎಂಬ ಜನಪ್ರೀಯ ಪ್ರಾದೇಶಿಕ ಸುದ್ದಿ ವಾಹಿನಿ .24 ಗಂಟೆಗಳ ಕಾಲ ನ್ಯೂಸ್ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಇಡೀ ರಾಜ್ಯದಲ್ಲಿ ಅಭಿಮಾನಿ ಬಳಗವನ್ನು, ಕಾಲಿಟ್ಟ ಸ್ವಲ್ಪ ಸಮಯದಲ್ಲಿ ಸಂಪಾದೀಸಿ ಬಿಟ್ಟಿತು .ಹಾಗೂ ಹಲವಾರು ಪತ್ರಕರ್ತರಿಗೆ,ತಂತ್ರಜ್ಞರಿಗೆ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅವರನ್ನು ಸ್ಟಾರ್ ಮಾಡಿ ಅವರುಗಳೇ ಮುಂದೆ ಟಿವಿ 9 ಗೆ ಪೈಪೋಟಿ ನೀಡುವ ಚಾನೆಲ್ ಒಡೆತನವನ್ನು ದಕ್ಕಿಸಿ ಕೊಟ್ಟಿತು .
ಹೌದು .!ಈ ಹಿಂದೆ ಈ ಟಿವಿ ಹಾಗೂ ಕೆಲವು ಪತ್ರಿಕೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರಿಗೆ ರತ್ನ ಕಂಬಳಿ ಹಾಸಿತ್ತು .ಹಾಗೆ ಅಲ್ಲಿಂದ ದ್ರಶ್ಯ ಮಾದ್ಯಮದಲ್ಲಿ ABCD ಕಲಿತ ಕೆಲವರು ಬೇರೆ ನ್ಯೂಸ್ ಚಾನೆಲ್ ಒಡೆಯರಾದ್ರೆ ಇನ್ನೂ ಕೆಲವರು ಮಂದಿ ಕೆಲವು ಚಾನೆಲ್ ಗಳಲ್ಲಿ ಮುಖ್ಯ ಬೂಮಿಕೆಯಲ್ಲಿ ಕಂಡು ಬಂದರು . ಒಟ್ಟಾರೆ ಈದೀಗ 13 ಚಾನಲ್ ಗಳಿದ್ದರೂ ಟಿವಿ 9 ಗೆ ಪೈಪೋಟಿ ನೀಡುವವಂತಿದ್ದರೂ , ಒಂದಿಂಚೂ ಕದಲದೇ ತನ್ನಯಾದ ಟಿಆರ್ಪಿಯನ್ನು ಇಂದಿಗೂ ಕೂಡಾ ಹಾಗೆ ಇಟ್ಟು ಕೊಂಡು ಬಂದಿದೆ ಎಂದರೆ ಸೋಜಿಗವೇ ಸರಿ ! ಮೊನ್ನೆ ಮೊನ್ನೆಯ ಒಂದು ವಿಚಾರ ಮಾತ್ರ ಟಿವಿ9 ಗೆ ಶಾಕ್ ತಂದಿದಂತೂ ಸತ್ಯ .
ಇತ್ತಿಚೆಗಷ್ಟೇ ಕೆಲವು ಟಾಪ್ ತಂತ್ರಜ್ಞರು ಹಾಗೂ ಅಯಂಕರ್ ಗಳು ವಾಹಿನಿಗೆ ಗುಡ್ ಬೈ ಹೇಳಿ ಬೇರೆ ಚಾನಲ್ ಸೇರಿ ಕೊಂಡರೆ ,,ಟಿವಿ 9 ಆಧಾರ ಸ್ತಂಭವಾಗಿದ್ದ ಹಿರಿಯ ನಿರ್ಮಾಪಕ ಎಸ್ ರವಿಕುಮಾರ್ ಹಾಗೂ ಇನ್ನೋರ್ವ ನಿರ್ಮಾಪಕ ಮಾರುತಿ ರಾಜಿನಾಮೆ ಸಲ್ಲಿಸಿರುವುದು . ! ಹೌದು ಟಿವಿ 9 ಉನ್ನತ ಸ್ಥಾನಕ್ಕೆ ಏರಲು ಅಂದಿನಿಂದ ಇಂದಿನವರೆಗೆ ಇವರುಗಳ ಶ್ರಮ ಬುದ್ದಿ ಕೌಶ್ಯಲತೆ ಹೇಳತೀರದು . ಒಂದು ಸಮಯದಲ್ಲಿ ಬೇಡಿಕೆಯ ತಂತ್ರಜ್ಞರು ಹಾಗೂ ನಿರೂಪಕರು ಬಿಟ್ಟು ಹೋದರೂ , ಈ ಎರಡು ಹೆಸರುಗಳೇ ಟಿವಿ 9 ಉಸಿರು ಅಂತರಾತ್ಮ ಆಗಿದ್ದರು ಎಂದು ತುಂಬಾ ಹತ್ತಿರ ದಿಂದ ಕಂಡವರ ಹೇಳುತ್ತಾರೆ . ಏನೇ ಇರಲಿ ಇದು ಟಿವಿ 9 ಗೆ ಬಹಳ ದೊಡ್ಡ ನಷ್ಟ ಹಾಗೂ ಟಿವಿ 9 ಬಾಳು ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ . ಇನ್ನೂ ಉದಯವಾರ್ತೆ ವಾಹಿನಿ ಬಾಗಿಲು ಹಾಕಿ ಕೊಂಡಿದೆ ಅಂತೆ .ಇನ್ನೂ ಗಣಿ -ದಣಿ ಮಾಲೀಕತ್ವದ ಜನಶ್ರಿ ಟಿವಿ ತನ್ನ ಉದ್ಯೋಗಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಸಂಭಾವನೆಯನ್ನು ಕೊಟ್ಟಿಲ್ಲವಂತೆ .ಸಂತ್ರಸ್ತರು ಸೋಶಿಯಲ್ ಮೇಡಿಯಾ ಮೂಲಕ ಕಿಡಿ ಕಾರುತ್ತಿದ್ದಾರೆ . ಹಾಗೆ ಟಿವಿ 9 ಹಾಗೂ ಸುವರ್ಣ ವಾಹಿನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ,ಹಿರಿಯ ಪತ್ರಕರ್ತ ವಾಗ್ಮಿ ಮುದ್ರಣ ಮಧ್ಯಮದ ಘೋಟ್ಗಜ ರಂಗನಾಥ್ ೨೦೧೨ ರಲ್ಲಿ ಪಬ್ಲಿಕ್ ಟಿವಿಯನ್ನು ಸ್ತಾಪಿಸಿದ್ದು ಪಬ್ಲಿಕ್ ಗೆ ಗೊತ್ತಿರುವಂತ ಅಂಶವೇ . ಅವರ ರೈಟ್ ಹ್ಯಾಂಡ್ ಆಗಿದ್ದ ರಾಧಾ ಹಿರೇಗೌಡರು ಪಬ್ಲಿಕ್ ಟಿವಿಯನ್ನು ತೊರೆದಿದ್ದಾರೆ ಎಂಬ ಅದಿಕ್ರತ ಘೋಷಣೆ ಕೇಳಿ ಬರುತ್ತಿವೆ . ಈ ಹಿಂದೆ ಇದೇ ತರಹನಾದ ಸುದ್ದಿ ಹಬ್ಬಿತ್ತಾದರೂ, “ಇದೆಲ್ಲಾ ಅಪ್ಪಟ ಸುಳ್ಳು ,ನಾನು ಪಬ್ಲಿಕ್ ಟಿವಿ ಬಿಟ್ಟಿಲ್ಲ,ಬಿಡುವುದಿಲ್ಲ , ನಾನು ಯಾವುದೇ ಚಾನೆಲ್ ಸೇರಿ ಕೊಳ್ಳುತ್ತಿಲ್ಲ “.ಎಂದು ತನ್ನ ಎಂದಿನ ಏರು ದ್ವನಿಯಲ್ಲಿ ಫೇಸ್ಬುಕ್ ಲೈವ್ ನಲ್ಲಿ ಹೇಳಿದ್ದರು . ಆದರೆ ಈಗಿನ ಬ್ರೇಕಿಂಗ್ ನ್ಯೂಸ್ ಪ್ರಕಾರ ರಾಧಾ ಮೇಡಂ ನೂತನ ಚಾನೆಲ್ ಗೆ ಲೀಡ್ ಆಗಿ ಸೇರಿದ್ದಾರೆ .ಇನ್ನೂ ಕೆಲವು ದಿನಗಳಲ್ಲಿ ಟಿವಿ ಪರದೆ ಮೇಲೆ ಇವರ ನೋಡಬಹುದು ಹಾಗೆ ಪಬ್ಲಿಕ್ ಟೀವಿ ಕಿಂತ ಮೂರು ಪಟ್ಟು ಹೆಚ್ಚಿನ ಸಂಬಾವನೆಯನ್ನು ಕೊಡುತ್ತಾರೆ ಎಂಬಿತ್ಯಾದಿ ಮಾತುಗಳು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವೈರಲ್ ಆಗಿದೆ .ಯಾವುದು ಸತ್ಯವೋ ಯಾವುದು ಮಿಥ್ಯವೋ ಗೊತ್ತಿಲ್ಲ ಆದರೆ ರಾಧಾ ಮೇಡಂ ಕಳೆದ ಕೆಲವು ದಿನಗಳಿಂದ ಪಬ್ಲಿಕ್ ಟಿವಿಯಲ್ಲಿ ನಾಪತ್ತೆಯಾಗಿದ್ದಾರೆ ಇದು ಬ್ರೇಕಿಂಗ್ ನ್ಯೂಸ್ ಹೇಳುವುತ್ತಿರ್ವುದು ಸತ್ಯ .! ಗೌರಿ ಲಂಕೇಶ್ ಹತ್ಯೆ ನಂತರ ಲಂಕೇಶ್ ಪತ್ರಿಕೆಗೆ ದಿಕ್ಕಿಲ್ಲ ! ಯಾರು ಮುಂದುವರಿಸಿ ಕೊಂಡು ಹೋಗುತ್ತಾರೋ ಎಂಬ ಜಿಜ್ಞಾಸೆಯಲ್ಲಿ ತಿಂಗಳುಗಳು ಕಳೆದೇ ಹೋಗಿದೆ ..ಈಗಿನ ಮತ್ತೊಂದು ಬ್ರೇಕಿಂಗ್ ನ್ಯೂಸ್ ಪ್ರಕಾರ ರಾಜ್ಯದಲ್ಲಿ ಗಲ್ಲೆಬ್ಬಿಸಿದ ರವಿ ಬೆಳೆಗೆರೆ ನೇತೃತ್ವದ ಹಾಯ್ ಬೆಂಗಳೂರು ಪತ್ರಿಕೆಯನ್ನು ನಿಲ್ಲಿಸುವ ಇಂಗಿತವನ್ನು ವ್ಯಕ್ತಪಡೀದ್ದಾರಂತೆ . ಒಟ್ಟಾರೆ 22 ವರ್ಷಗಳಿಂದ ಅದೆಸ್ಟೋ ಜನರನ್ನು ಎದುರು ಹಾಕಿಕೊಂಡು ,ಅದೆಷ್ಟೋ ಜನರನ್ನು ಬೆತ್ತಲೆ ಮಾಡಿದ ಇನ್ನೊಂದು ಟ್ಯಾಬ್ಲೆಟ್ ಪತ್ರಿಕೆ ಮುಚ್ಚುತ್ತಿದೆ . ಇನ್ನೂ ದಸರಾ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಕೆಲವೊಂದು ಚಾನೆಲ್ ಗಳು ಗ್ರ್ಯಾಂಡ್ ಓಪನಿಂಗ್ ಕಾಣಲಿದೆಯಂತೆ ಒಟ್ಟಾರೆ ಇತ್ತೀಚೆಗಿನ ದಿನಗಳಲ್ಲಿ ಸುದ್ದಿಮಾದ್ಯಮಗಳೇ ಬ್ರೇಕಿಂಗ್ ನ್ಯೂಸ್ ಆಗ್ತಾ ಇರೋದು ಮಾತ್ರ ಸುಳ್ಳಲ್ಲ !!!
ಗುರುವಾರ, ಸೆಪ್ಟೆಂಬರ್ 28, 2017
ಭಾನುವಾರ, ಸೆಪ್ಟೆಂಬರ್ 10, 2017
ಅಂದು ಹಿತೇಂದ್ರ ಪ್ರಸಾದ್ . ಇಂದು ಗೌರಿ ಲಂಕೇಶ್!
ನನಗೆ ಒಮ್ಮೆಲೇ ಉಸಿರು ಬಿಗಿ ಹಿಡಿಸಿದ್ದು ಅಂದರೆ ಇದು ! ಅಂದು ಹಾಯ್ ಮಾರುತ ಪತ್ರಿಕೆಯ ಹಿತೇಂದ್ರ ಪ್ರಸಾದ್ ಹಾಗೂ ಇಂದು ಲಂಕೇಶ್ ಪತ್ರಿಕೆಯ ಗೌರಿ ಲಂಕೇಶ್ ಮರ್ಡರ್ ! ನನಗೆ ಕೆಲವೇ ಕೆಲವು ಪತ್ರ ಕರ್ತರ ಪೈಕಿ ಇವರಿಬ್ಬರ ಬರವಣಿಗೆ ಅಚ್ಚುಮೆಚ್ಚು ! ವಾರ -ದಿಂದ ವಾರಕ್ಕೆ ಕೂತೂಹಲ ದಿಂದ ಇವರ ಲೇಖನಕ್ಕಾಗಿ ಕಣ್ಣು ಕಾದು ಕುಳಿತಿರುತ್ತಿತ್ತು . ಹಿತೇಂದ್ರ ಪ್ರಸಾದ್ ರ ಹಾಯ್ ಮಾರುತ ಉಡುಪಿಯಿಂದ ಪ್ರಕಟಕೊಳ್ಳುತ್ತಿದ್ದೂ ಕರಾವಳಿಯಾದ್ಯಂತ ಜನಪ್ರೀಯ ಗೊಂಡಿತ್ತು ,ಸಂಚಲನವನ್ನೂ ಮೂಡಿಸಿತ್ತು .ಹಲವಾರು ದೊಡ್ಡ -ದೊಡ್ಡ ಕುಳಗಳನ್ನೇ ಎದುರಿಗೆ ಹಾಕಿ ಕೊಂಡು ತಮ್ಮ ತೀಕ್ಷ್ಣ ಬರಹದ ಮೂಲಕ ಚಾಟಿ ಬೀಸುತ್ತಿದ್ದರು ,ಇವರ ದುಷ್ಮನ್ ಸಂಖ್ಯೆ ಎಶ್ಟಿತೆಂದರೆ ಸ್ವತ: ಕೆಲವು ಪತ್ರಕರ್ತರ ಕೆಂಗಣ್ಣಿಗೂ ಗುರಿಯಾಗಿ ವಿರೋಧವನ್ನು ಕಟ್ಟಿ ಕೊಂಡ್ಡಿದ್ದರು ಯಾವ ಬೆದರಿಕೆಗೂ ಹೆದರದೆ ರಾಜಾರೋಷವಾಗಿ ಬೆರೆಯುತ್ತಿದ್ದರು ಹಾಗೂ ಲೇಖನಿ ಮೊನಚು ಗೊಳಿಸುತ್ತಿದ್ದರು ಹಾಗೂ ಒಬ್ಬಂಟಿಯಾಗಿಯೇ ತಿರುಗಾಡುತ್ತಾ ತನಿಖಾ ಕ್ರೈಮ್ ವರದಿಗಳನ್ನ ಸಿದ್ದ ಪಡಿಸುತ್ತಿದ್ದರು . ಅಂದು ರಾತ್ರಿ (22/08/2006 )ವರದಿಗೆ ತೆರಳಿದ್ದ ಮಣಿಪಾಲನ ತಲ್ಲೂರು ಬಾರ್ ನಲ್ಲಿ ಪಬ್ಲಿಕ್ ಳ ಎದುರೇ ತಲವಾರು ಕಾಳಗದಲ್ಲಿ ಅಲ್ಲೇ ಕೊನೆ ಉಸಿರು ಎಳೆದಿದ್ದರು . ಮರುದಿನ ಪತ್ರಕರ್ತ ಹಿತೇಂದ್ರ ಪ್ರಸಾದ್ ಮರ್ಡರ್ ಎಂದು ಬಿಂಬಿತ ಕೊಂಡಿತ್ತು . ಯಾವೊಬ್ಬ ಪತ್ರಕರ್ತನೂ ಕೂಡಾ ಬೀದಿಗೆ ಬಂದು ಪ್ರತಿಭಟನೆಗೆ ಮುಂದಾಗಲಿಲ್ಲ .ಇಂತವರೇ ಹತ್ಯೆ ಮಾಡಿದ್ದಾರೆ ಎಂದು ಗೊತ್ತಿದ್ದರೂ ಸಹಾ ಕಾನೂನು ಕೂಡಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು ಇದು ಆದಿನದ ಮಾತು ಬಿಡಿ. ಇಂದು ಗೌರಿ ಲಂಕೇಶ್ ಮರ್ಡರ್ ..!!! ಇವರ ಹೆಸರು ಕೆಳದಿರುವವರು ಯಾರೂ ಇಲ್ಲ ಅಷ್ಟೊಂದು ಕಾಂಟ್ರವರ್ಸಿ, ಗಾಸಿಪ್ ಗಳ ಮೂಲಕ ಕರ್ನಾಟಕ ಬಿಡಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದವರು . ಇಂಗ್ಲಿಷ್ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ್ದ ಇವರು ಪ್ರಗತಿಪರರ ಗುಂಪು ಎಡಪಂತೀಯದಲ್ಲಿ ಗುರುತಿಸಿಕೊಂಡಿದ್ದವರು . ೫೫ ವರ್ಷದ ಗೌರಿ ಲಂಕೇಶ್ ,ತನ್ನ ತಂದೆ ಪಿ ಲಂಕೇಶ್ ನಿಧನದ ನಂತರ ಅವರು ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಚುಕ್ಕಾಣಿ ಹಿಡಿದು "ಗೌರಿ ಲಂಕೇಶ್ "ಎಂದು ಟೈಟಲ್ ಚೇಂಜ್ ಮಾಡಿ ಖಾರವಾಗಿ ಲೇಖನಿ ಓಡಾಡಿಸುತ್ತಿದ್ದ ಪರಿ ಹಾಗೂ ಪ್ರತಿಕ್ರೀಯಿಸುತ್ತಿದ್ದ ಚಾತುರ್ಯತೆ ಜನಜನಿತ . ಅವರ ಬರವಣಿಗೆಯ ಶೈಲಿ ಲೇಖನಿಯನ್ನು ಖಡ್ಗವನ್ನಾಗಿಸಿ ಬೀಸುತ್ತಿದ್ದ ಪರಿ ಇಷ್ಟವಾಗಿತ್ತೇ ವಿನಹಾ ವೈಚಾರಿಕತೆಯನ್ನು ಮಾತ್ರ ಒಪ್ಪುವಂತೆ ಇರುತ್ತಿರಲಿಲ್ಲ .ಅವರ ಮೂಗಿನ ನೇರಕ್ಕೆ ಅವರ ವಾದ ಮಂಡಿಸುತ್ತಿದ್ದರು ,ಅವರ ವಿಚಾರವಾದಿತನವನ್ನು ಕೆಲವರು ಅಪ್ಪಿಕೊಂಡಿದ್ದಾರೆ ಸಾಕಷ್ಟು ಜನದೂಷಿಸುತ್ತಾರೆ .ಹೀಗಾಗಿಯೇ ಪರ ವಿರೋಧದ ಅಲೆಗಳಲ್ಲಿ ಕೊಂಚ ಪ್ರಚಲಿತವನ್ನೂ ಪಡೆದು ಕೊಂಡಿದ್ದರು .
ಅದೇನೋ ಹೇಗೋ ಗೊತ್ತಿಲ್ಲ.(06/09/2018) ಹಂತಕರು ಗುಂಡು ಹಾರಿಸಿಬಿಟ್ಟರು ಕ್ಷಣ ಮಾತ್ರದಲ್ಲಿ ಯಾವುದೇ ಕುರುಹುವಿಲ್ಲದೇ ನಿಗೂಢವಾಗಿ ನಡೆದು ಹೋಯಿತು ದಿಟ್ಟೆಯ ಹತ್ಯೆ !ಹಾಗೆ ನೋಡಿದ್ದರೆ ಹಿತೇಂದ್ರ ಪ್ರಸಾದ್ ಗೆ ಸಾಕಷ್ಟು ಬೆದರಿಕೆ ಕರೆ ಬಂದಿತ್ತು ,ವರದಿ ಪ್ರಕಟಿಸಿದರೆ ಹತ್ಯೆ ಮಾಡುತ್ತೇವೆ ಎಂಬ ವಚನವನ್ನು ಕೊಟ್ಟ ಕಹಾನಿಯನ್ನು ಎಳೆ- ಎಳೆ ಯಾಗಿ ಪ್ರಸಾದ್ ಪತ್ರಿಕೆಯಲ್ಲಿ ಹೇಳಿ ಕೊಂಡಿದ್ದರು ಕೂಡಾ ..ಅವರ ಕೊನೆಯ ಬರಹ ನನಗೆ ನನಪು ಇದ್ದ ಹಾಗೆ ನಾನು ಓದಿದ್ದು ಮಣಿಪಾಲ ತಲ್ಲೂರ್ ಬಾರ್ ನಲ್ಲಿ ನಡೆಯುವ ಲೈವ್ ಬ್ಯಾನ್ಡ್ ಬಗ್ಗೆ ಇದರ ಬಗ್ಗೆ ಸರದಿ ವರದಿಯನ್ನು ಬಿತ್ತರಿಸುತ್ತಿದ್ದರು . ಸಂಚಿಕೆ ಮೊದಲ ಕಂತಿನಲ್ಲಿ ಲೈವ್ ಬ್ಯಾಂಡ್ ನ ಪೂರ್ವಾಪರವನ್ನು ವಿವರಿಸಿದ್ದರು ಇನ್ನೊಂದಿಷ್ಟು ಇಂಟ್ರೆಸ್ಟಿಂಗ್ ಅಂಶವನ್ನು ಮುಂದಿನ ಸಂಚಿಕೆಗೆ ಮುಂದು ವರಿಸಿದ್ದರು .ಇನ್ನೇನು ಅದು ಅಚ್ಚಾಗುವ ಹಂತದಲ್ಲಿತ್ತು ಇದೆ ವಿಷಯಕ್ಕಾಗಿ ಆ ರಾತ್ರಿ ಖುದ್ದು ಲೈವ್ ಬ್ಯಾಂಡ್ ಗೆ ತೆರಳಿ ವಿಷಯ ಸಂಗ್ರಹಿಸುತ್ತಿದ್ದ ಸಂದರ್ಭ ಮಾರುಕಾಯುಧ ಗಳಿಂದ ಎಕಾಏಕಿ ಹಲ್ಲೆ ನಡೆಸಿ ಹಾಯ್ ಮಾರುತದ ಉಸಿರನ್ನು ನಿಲ್ಲಿಸಿದ್ದರು . ಇದೆಲ್ಲಾ ಇತಿಹಾಸ . ಇಂದಿನ ಈ ಘಟನೆ ಕೇಳಿ ಅಂದಿನ ಘಟನೆ ಮನಪಠಲಕ್ಕೆ ಬಂತು . ಹೌದು ಗೌರಿ ವಿಷಯವೂ ಕೂಡ ಶಾಕಿಂಗ್ ತಂದಿದೆ ಸೈದಾಂತಿಕ ವಾಗಿ ವಿರೋಧಿಗಳಿರುವುದು ಸಾಮಾನ್ಯ ಆದರೇ ಯಾವುದೇ ಬೆದರಿಕೆ ವಿಚಾರವನ್ನು ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ ಅನಿರೀಕ್ಷಿತವಾಗಿ ಘಟನೆ ನಡೆದಿದೆ . ಹತ್ಯೆ ಖಂಡನೀಯ ! ಒಂದೊಳ್ಳೆಯ ಪತ್ರಕರ್ತೆಯನ್ನು ಕಳೆದು ಕೊಂಡಿದ್ದೇವೆ ಎಂದು ಹೇಳಬಲ್ಲೆ ., ವಯಕ್ತಿಕವಾಗಿ ಅವರ ಸಾಹಿತ್ಯದ ಶೈಲಿಯನ್ನು ಮಾತ್ರ ಇಷ್ಟಪಟ್ಟಿದ್ದೆ .ಅವರ ಪ್ರಚೋದನಾ ಕಾರಿ ಬೀಷಣದ ಭಾಷಣ ಹಾಗೂ ಎಡಪಂತೀಯ ನಿಲವುಗಳನ್ನು ನಾನು ವಿರೋಧಿಸ್ತೆನೆ . ಅಂದ ಹಾಗೆ ನಾನು ಓದಿದ್ದ ಅವರ ಕೊನೆ ಮುಖ ಪುಟ ವರದಿ "ಚಂಡಾಲ ಭಟ್ಟನಿಗೆ ಇನ್ನೆಷ್ಟು ಬಲಿ? .ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಂತಕರ ಬಂಧನವಾಗಲಿ ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)






