ಇನ್ನೊಮ್ಮೆ ಉಡುಪಿ ಶ್ರೀ ಕ್ರಷ್ಣ ಮಠ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ . ಇಂದು ಹಾದಿ ಬೀದಿಯ ಸುದ್ದಿಗೆ ಗ್ರಾಸವಾಗಿದ್ದರ ವಿಚಾರ ಯಾವುದು ಎಂದರೆ ಶ್ರೀ ಕ್ರಷ್ಣ ಮಠದದ ಆವರಣದಲ್ಲಿ ಮುಸಲ್ಮಾರಿಗೆ ರಂಜಾನ್ ಹಬ್ಬದ ಪ್ರಯುಕ್ತ ಪೇಜಾವರ ಶ್ರೀಗಳು ಇಫ್ತಾರ್ ಕೂಟವನ್ನು ಆಯೋಜಿಸಿದ್ದು , ಹಾಗೂ ನಮಾಜ್ ಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರ ಸಲುವಾಗಿ . ತರುವಾಯ ರಾಜ್ಯಾದ್ಯಂತ ವಾದ ವಿವಾದಗಳ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ . ಇದೊಂದು ಸರ್ವಧರ್ಮ ಸಮನ್ವಯತೆ ಸಂಪಾದನೆಗೆ ಒಳ್ಳೆಯ ಕೊಂಡಿಯಾಗಿದೆ ಉತ್ತಮ ಕಾರ್ಯವನ್ನು ಸ್ವಾಮೀಜಿಗಳು ಕೈ ಗೊಂಡದ್ದು ಶ್ಲಾಘನೀಯ ಎಂದು ಪೇಜಾವರ ಶ್ರೀಗಳ ಬೆಂಬಲಕ್ಕೆ ಒಂದಷ್ಟು ಜನ ನಿಂತರೆ ಇನ್ನೊಂದಿಷ್ಟು ಜನ ಆಕ್ರೋಶದ ಅಭಿವ್ಯಕ್ತಿಯನ್ನೂ ಹೊರಹಾಕಿದ್ದಾರೆ . ಶ್ರೀ ರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಅಂತೂ ಈ ಘಟನೆಯ ಬಗ್ಗೆ ತೀವ್ರವಾದ ಖಂಡನೆ ಯನ್ನು ವ್ಯಕ್ತಪಡಿಸದ್ದಲ್ಲದೇ ,ರಾಜ್ಯಾದ್ಯಾ೦ತ ಪ್ರತಿಭಟನೆಯನ್ನೂ ನಡೆಸಿ ಕೊಟ್ಟರು . ಒಟ್ಟಾರೆ ನಾವು ಇಲ್ಲಿ ತಪ್ಪು ಒಪ್ಪುಗಳ ಪಟ್ಟಿ ಸಂಗ್ರಹಿಸುವುದಕ್ಕಿಂತ ಮೊದಲು ವಿಚಾರವನ್ನು ಮನಗಾಣುವುದಾದರೆ , ಶ್ರೀಮಠಕ್ಕೆ ಅಬ್ದುಲ್ ಹಾಜಿ ಯವರು ಪೂಜಾ ಕಾರ್ಯದ ದೀಪಕ್ಕೆ ಬೇಕಾಗುವ ಎಣ್ಣೆಯನ್ನು ಕೊಟ್ಟಿದ್ದಾರೆ .., ಹಾಗೂ ಮುಸ್ಲಿಂ ಭಾಂದವರು ಮಠದಲ್ಲಿ ಎರಡು ವರ್ಷಕ್ಕೊಮ್ಮೆ ನೆಡೆಯುವ ಜಗತ್ಪ್ರಸಿದ್ದ ಪರ್ಯಾಯ ಉತ್ಸವದಲ್ಲಿ ಹೊರೆಕಾಣಿಕೆ ಹಾಗೂ ನಿರಂತರ ಸಂಪರ್ಕವನ್ನು ಇಟ್ಟುಕೊಂಡು,ಸಹಾಯ ಹಸ್ತವನ್ನು ನೀಡುತ್ತಾ ಬಂದವರು . ಅವರ ಋಣ ತೀರಿಸಲ್ಲಿಕ್ಕೂ ಅಥವಾ ಅವರ ಬಲವಂತದ ಆಮಂತ್ರಣಕ್ಕೆ ಅತ್ತ ಧಾವಿಸಲಾಗದ ಸ್ಥಿತಿಗೂ ಏನೋ ಹೀಗೊಂದು ಕಾರ್ಯಕ್ರಮವನ್ನು ಆಯೋಸಿದ್ದರು ., ಮೂಲಗಳ ಪ್ರಕಾರ ಒಡನಾಟ , ಆತ್ಮೀಯತೆಯನ್ನು ಇಟ್ಟುಕೊಂಡ ಕೆಲವು ಮಸ್ಲಿಂ ಭಾ೦ದವರು ರಂಜಾನ್ ಹಬ್ಬದ ಆ ದಿನ ಸ್ವಾಮೀಜಿಗಳಿಗೆ ಆಹ್ವಾನಿಸಿದ್ದಾರಂತೆ “ನಿಮ್ಮ ಹಬ್ಬಕ್ಕೆ ಆಶೀರ್ವಾದ ನೀಡಲು ನಾನು ನೀವಿದ್ದಲ್ಲಿಗೆ ಬರಲು ತತ್ ಸಮಯದಲ್ಲಿ ಸಾಧ್ಯವಾಗುವುದಿಲ್ಲ ದಯಮಾಡಿ ಇಲ್ಲಿಗೆ ಬನ್ನಿ ಎಂದಾಲೋಚಿಸಿ ಮಠಕ್ಕೆ ಬರಹೇಳಿದ್ದರ೦ತೆ .. ಕೇವಲ ಆಶಿರ್ವಾದ ಹಾಗೂ ಹಬ್ಬಕ್ಕೆ ಶುಭ ಕೋರುವುದರ ಜೊತೆಗೆ ಇಲ್ಲಿಯ ವರೆಗಾಗಿ ಬಂದವರಿಗಾಗಿ ಮಠದಲ್ಲಿ ತಯಾರಿಸಲ್ಪಟ್ಟ ಲಘು ಉಪಹಾರವನ್ನು ನೀಡಲು ಮುಂದಾದಾಗ , ನಾವು ಯಾವುದೇ ಉಪಾಹಾರ ಸೇವಿಸುವ ಮೊದಲು ಉಪವಾಸ ಅಂತ್ಯದ ನಂತರ ಧರ್ಮದ ನೀತಿಯಂತೆ ನಮಾಜ್ (ಪ್ರಾರ್ಥನೆ ) ಮಾಡಿ ನಂತರ ಸೇವಿಸುತ್ತೇವೆ ಎಂಬ ಅವರುಗಳ ಇಚ್ಛೆಯ ಮೇರೇಗೆ ಮಠದ ಆವರಣದಲ್ಲಿ ಸಾರ್ವಜನಿಕರು ಬಂದು ತೆರಳುವ ಸ್ಥಳದಲ್ಲಿ ಸಂಪ್ರದಾಯ ಪದ್ದತಿಯಂತೆ ನಮಾಜ್ ಸಲ್ಲಿಸಿ ಉಪಹಾರವನ್ನು ಸೇವಿಸುತ್ತಾರೆ.ಇದು ಮುಂದೆ ಕ್ಷಣ ಮಾತ್ರದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಬಹಿರಂಗ ವಾಗುತ್ತದೆ ಶ್ರೀ ಕೃಷ್ಣಮಠದಲ್ಲಿ ಮುಸಲ್ಮಾನ ರಿಗೆ ಇಪ್ತಾರ್ ಕೂಟವನ್ನು ಸ್ವಾಮೀಜಿ ಯವರು ನಡೆಸಿ ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ಜಗತ್ ಜಾಹೀರಾತು ಮಾಡಿ ಬಿಡುತ್ತವೆ.. ನಂತರ ನಡೆಯಿತು ವಾದ ವಿವಾದಗಳ ಆರೋಪಗಳ ಸುರಿಮಳೆ !!
ಶ್ರೀಪಾದಂಗಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಯಿಸುವ ಯೋಗ್ಯತೆಯ ಆಳ್ತನ ಹಿರಿಯ ಜೀವ ಅವರಿಗೆ ಗೊತ್ತಿರುವಂತದ್ದೇ .. ಅವರಿಗೆ ಯಾರು ಯಾವುದೇ ತರನಾದ ಉಪದೇಶವನ್ನು ಮಾಡುವ ಹಾಗೂ ಅವರು ಮಾಡಿದ್ದೆ ಸರಿ ಅಲ್ಲ ಎಂದು ವಿಮರ್ಶಿಸುವ ಅವರ ವಿರುದ್ಧ ಪ್ರತಿಭಟನೆಗೆ ಇಳಿಯುವ ಹಕ್ಕು ಯಾರಿಗೂ ಇಲ್ಲ ಅದು ಸಮಂಜಸವೂ ಕೂಡಾ ಅಲ್ಲ . ಹಾಗಂತ ಇದರಲ್ಲಿ ನೋವಿನ ವಿಚಾರವೂ ಇಲ್ಲದಂತಿಲ್ಲ ಈ ಘಟನೆ ಯಿಂದಾಗಿ ಎರಡೂ ಸಮುದಾಯಗಳೂ ಸಹಾ ರೊಚ್ಚಿಗೆದ್ದು ತಳ್ಳಿ ಹಾಕುವಂತಿಲ್ಲ . ಮಠದಲ್ಲಿ ನಮಾಜ್ ಮಾಡಿದ್ದೂ ಶ್ರೀ ಪಾದರಿಂದ ಪ್ರಸಾದ ವನ್ನು ಸ್ವೀಕರಿಸಿದ್ದೂ ಇಸ್ಲಾಂ ಧರ್ಮ ಸಹಿಸುವುದಿಲ್ಲ ಇದು ಖಂಡನೀಯ ಎಂದು ಕೇವಲು ಮುಸ್ಲಿಮ್ ಸಂಘಟನೆಗಳ ಸಾಮಾಜಿಕ ತಾಣಗಳಲ್ಲಿ ಹೇಳಿ ಕೊಂಡಿವೆ . ಹಿಂದೂ ಧರ್ಮೀಯರೂ ಸಹಾ ಆಕ್ಷೇಪವನ್ನು ಹೊರಹಾಕಿದ್ದಾರೆ ಗೋವು ಭಕ್ಷಕರಿಗೆ ಆವರಣದೊಳಗೆ ಗೋ ಪಾಲಕ ಶ್ರೀ ಕೃಷ್ಣ ನ ಸಮುಖದಲ್ಲಿ ನಮಾಜ್ ಗೆ ಅವಕಾಶ ಮಾಡಿ ಕೊಟ್ಟಿದ್ದು ಸರಿ ಆಲ್ಲ ,ಮಸೀದಿಗಳಲ್ಲಿ ಹಿಂದೂ ಧರ್ಮದ ಆಚರಣೆಗೆ ಅವಕಾಶವನ್ನು ಅವರು ನೀಡುತ್ತಾರೆಯೇ ? ಎಂಬ ಪ್ರಶ್ನೆಗಳಿಗಳನ್ನೂ ಇಡುತ್ತಾರೆ ,ಒಟ್ಟಾರೆ ಸ್ವಾಮೀಜಿಗಳು ಋಣ ಸಂದಾಯಕ್ಕೂ ಅವರ ಮೇಲಿನ ಬಾ೦ದವ್ಯಕ್ಕೋ, , ಅಥವಾ ಕೋಮು ಸಾಮರಸ್ಯವನ್ನು ಹೋಗಲಾಡಿಸಲ್ಲಿಕ್ಕೂ ಹೀಗೊಂದು ಕಾರ್ಯಕ್ರವನ್ನು ಆಯೋಜಿಸಿದ್ದೂ ಒಂದೊಳ್ಳೆ ಭವಿಶ್ಯದ ಬೆಳೆವಣಿಗೆಗೆ , ಸಮಾಜದಲ್ಲಿ ಸರ್ವ ಧರ್ಮ ಸಮನ್ವಯತೆ ಗೆ ಸಹಕಾರವನ್ನು ನೀಡುತ್ತದೆ ಎಂದು ಯೋಚಿಸಿದರೆ ಇದರಿಂದ ಸಾಮರಸ್ಯವೇ ಉ೦ಟಾಗುತ್ತದೆ ವಿನಹಾ : ಸಮನ್ವಯತೆ ಕಾಣದು . ಶಾಂತಿಗೂಡಲ್ಲಿ ಆಶಾ೦ತಿಯೇ ಮೂಡುತ್ತದೆ ಹೊರತು ಎಣಿಸಿದ ಫಲಿತಾಂಶ ಮಾತ್ರ ದೊರಕುವುದು ಕಷ್ಟ ಸಾದ್ಯ ..ಏನೇ ಇರಲಿ
ಇದ್ದದ್ದು ಇದ್ದ ಹಾಗೆ ಇದ್ದರಷ್ಟೇ ಚೆಂದ ಎನ್ನಬಹುದೇನೋ ?!

