ಮಂಗಳವಾರ, ಜೂನ್ 20, 2017

‘ಪೋಲಿಸ್ ಪೇದೆಯಾಗಿ ತನ್ನ ಮಡದಿಯನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಅಂದಾದರೆ ಉಳಿದವರ ಗತಿ ಏನು?

ಒಬ್ಬ ಪೋಲಿಸ್ ಕಾನ್ಸ್ಟೇಬಲ್ ರ ಅಸಹಾಯಕತೆ,ವ್ಯಥೇಯ ನುಡಿ.
“ನನ್ನ ಹೆಂಡತಿಯ ರಕ್ಷಣೆಯನ್ನು ನನ್ನ ಕಣ್ಣ ಮುಂದೇನೆ ನಾನೊಬ್ಬ ಪೋಲಿಸ್ ಪೇದೆಯಾಗಿ ಪೋಲಿಸ್ ಪೇದೆ ಮಾಡಿಕೊಳ್ಳುವಲ್ಲಿ ಸಾದ್ಯವಾಗಲ್ಲಿಲ್ಲವೆಂದಾರೆ ಇನ್ನೂ ದೇಶ ರಕ್ಷಣೆಗೆ ಪಣ ತೊಡಲು ನನ್ನಿಂದ ಅಥವಾ ನನ್ನಂತಾ ಆರಕ್ಷಕ ಪಡೆಗೆ ಸಾದ್ಯವಾಗ ಬಲ್ಲದೇ ? ಇನ್ನು ಸಾಮಾನ್ಯ ನಾಗರಿಕರ ಕತೆ ಎಂತದ್ದು ?”ಎಂಬೀ ಅಸಹಾಯಕತೆ ಮಾತು ತನ್ನ ಹಿರಿಯ ಪೋಲಿಸ್ ಅಧಿಕಾರಿ ಜೊತೆ ಪೋನ್ ನಲ್ಲಿ ನಡೆಸಿದ ವೈರಲ್ ಸಂದೇಶವನ್ನು ಒಮ್ಮೆ ಆಲಿಸಿದರೆ ಎಂತಹ ಕಚಡಾ ರಾಜಕೀಯ ವ್ಯವಸ್ತೆ ಹಳ್ಳಿ- ಹಳ್ಳಿ ಗಲ್ಲಿ- ಗಲ್ಲಿ ಗಳಲ್ಲಿ ನಮ್ಮನ್ನು ಆಳುತ್ತಿದೆ ಎಂಬುದು ದಿಟವಾಗುತ್ತದೆ .
ಹೌದು ನಾ ಹೇಳ ಹೊರಟಿರುವ ವಿಷಯ ಬೇರೆಯಲ್ಲಿಯದ್ದೂ ಅಲ್ಲ , ಮೊನ್ನೆ ಮೊನ್ನೆ ನಮ್ಮ ಪರಿಸರದ ಘಟನೆ ಬಗ್ಗೆ ..ಉಡುಪಿ ಯಿಂದ ಅನತಿ ದೂರದಲ್ಲಿರುವ ಮಲ್ಪೆ ಪೋಲಿಸ್ ಥಾಣಾ ವ್ಯಾಪ್ತಿಗೆ ಒಳಪಡುವ ಒಂದು ಪ್ರದೇಶದಲ್ಲಿ ನಡೆದ ಘಟನೆ ... ಒಂತರ ವಿಚಿತ್ರ ,ಸಚಿತ್ರ ಥೇಟ್ ಸಿನಿಮಾ ಶೈಲಿ ...!!
ಮಲ್ಪೆಯ ಪೋಲಿಸ್ ಕಾನ್ಷ್ಟೇಬಲ್ ಒಬ್ಬರು ತಮ್ಮ ಮಡದಿಯ ಜೊತೆಗೆ ಬೈಕ್ ನಲ್ಲಿ ಆಸ್ಪತ್ರೆಗೆ ತೆರಳಿ ಮಡದಿಯ ಆರೋಗ್ಯ ಪರೀಕ್ಷಾ ಕಾರ್ಯ ಮುಗಿದ ಬಳಿಕ ಅಲ್ಲಿಂದ ತುಸು ದೂರದಲ್ಲಿರುವ ಅಂಗಡಿ ಒಂದರಲ್ಲಿ ತಮಗೆ ಅಗತ್ಯವಿರುವ ಸಾಮಾಗ್ರಿಯನ್ನು ಖರಿದಿಸುವುದರಲ್ಲಿ ಆ ಪೋಲಿಸ್ ಪೇದೆ ಮಗ್ನರಾಗಿರುತ್ತಾರೆ . ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆತನ ಪತ್ನಿಗೆ ಒಂದಿಬ್ಬರು ಕಂಠ ಪೂರ್ತಿ ಕುಡಿದು ಕಿರುಕುಳ ಕೊಡಲು ಪ್ರಾರಂಬಿಸುತ್ತಾರೆ . ಸಾಯ್ಲಿ ಎಂದು ಹಿಡಿಶಾಪ ಹಾಕಿ ಸುಮ್ಮನಾದ ಆಕೆ ಗಂಡನಲ್ಲಿ ಇದ್ಯಾವುದನ್ನೂ ಹೇಳದೇ ಇಬ್ಬರು ಬೈಕ್ ಏರಿ ಹೊರಡುತ್ತಾರೆ . ತಮ್ಮ ಮನಸ್ಸಿನ ವಾಂಚೆ ಯನ್ನು ಬಿಡದ ಆ ಕುಡುಕ ಕಾಮುಕರು , ಇವರ ಬೈಕ್ ನನ್ನು ಪೋಲೊ ಮಾಡುತ್ತಾರೆ . ಬೈಕ್ ನ್ನು ಹತ್ತಿರ-ಹತ್ತಿರ ತಂದು ಮತ್ತಷ್ಟು ಕಿರುಕುಳ ಕೊಡುವುದಕ್ಕೆ ಅಣಿ ಯಾಗುತ್ತಾರೆ , ಬೈಕ್ ನ ಹಿಂಬದಿ ಸವಾರ ಒಂದು ಕಲ್ಲನ್ನು ಎತ್ತಿ ಪೋಲಿಸ್ ಪೇದೆಯ ಹೆಂಡತಿ ಮೇಲೆ ಎಸೆಯುತ್ತಾನೋ ಆಗ ಕೋಪ ಗೊಂಡ ಮಹಿಳೆ ತನ್ನ ಪತಿಯಲ್ಲಿ ಎಲ್ಲಾವನ್ನೂ ಉರ್ಸುರುತ್ತಾಳೆ ,ಈ ಸಂದರ್ಭದಲ್ಲಿ ಯಾರೇ ಆದರೂ ಆ ಕೆಲಸವನ್ನು ಮಾಡಿಯೇ ತೀರುತ್ತಾರೆ ಕೋಪ ನೆತ್ತಿಗೆ ಏರದೆ ಇರದು .ಅಂತೆಯೇ ತಡಮಾಡದ ಪೋಲಿಸ್ ಪೇದೆ ಬೈಕ್ ಸೈಡ್ ಗೆ ಸರಿಸಿ , ಅವರಿಬ್ಬರಿಗೂ ಎರಡು ಕಪಾಳಕ್ಕೆ ಬಾರಿಸುತ್ತಾರೆ ...ಜನಜಂಗುಳಿ ಒಟ್ಟಾಗುತ್ತದೆ .. ಇಷ್ಟಕ್ಕೆ ಬಿಡ ಬೇಡಿ ಸರ್ ಅವರನ್ನು ಒದ್ದು ಒಳಗೆ ಹಾಕಿ ಎಂದು ನೆರದಿದ್ದವರ ಅಭಿಪ್ರಾಯದಂತೆ ಕೂಡಲೇ ಪೋಲಿಸ್ ಟಾಣೆಗೆ ಪೋನ್ ಹಾಯಿಸಿ ಅವರನ್ನು ತಾಣೆಗೆ ಕರೆದೊಯ್ಯುಲಾಗುತ್ತದೆ . . ಮಹಿಳೆಯ ದೂರಿನ ಅನ್ವಯ ದೂರನ್ನು ದಖಲಿಸಿಕೊಂಡು ಅಲ್ಲಿ ಇನ್ನೆರಡು ಬಿಸಿ ಬಸಿ ಹೋಳಿಗೆ ಕೊಟ್ಟು ಬುದ್ದಿವಾದ ಹೇಳಿ ಫಟಿಂಗ ರನ್ನು ಮನೆಗೆ ಅವರನ್ನು ಕಳಿಸಲಾಗುತ್ತದೆ .
ನಂತರ ನಡೆದಿದ್ದೇ ಹೈಡ್ರಾಮ !!!
ಮಹಿಳೆಯನ್ನು ಕಿಚಾಯಿಸಿ ಪಬ್ಲಿಕ್ ಗಳಿಂದ ಉಗಿಸಿ ಕೊಂಡು ಪೋಲಿಸ್ ಪೇದೆಯಿಂದ ಏಟು ತಿಂದ ಮಾಹಾನುಭಾವರು ಉಡುಪಿ ಶಾಸಕ ,ಮಂತ್ರಿ ಪ್ರಮೋದ್ ಮದ್ವ್ರರಾಜ್ ರವರ ಕಾರ್ಖಾನೆಯಲ್ಲಿ ಟ್ಯಾಕ್ಟರ್ ಚಾಲಕರಂತೆ . ಅಂದ ಮಾತ್ರಕ್ಕೆ ಸರಳವಾಗಿ ಅರ್ತೈಸಿ ಕೊಂಡು ಬಿಡಬಹುದು ಇವರ ಆಟೋಟೋಪಕ್ಕೆ ಹಿಂಬದಿ ಪ್ರೇರಣಾ ಶಕ್ತಿ ಇನ್ನೇನು ಬೇಕು ? ಚುನಾವಾಣ ಪ್ರಚಾರ ಮುಗಿಸಿ ನಿವಾಸಕ್ಕೆ ಮದ್ವರಾಜ್ ಬಂದು ಒಂದು ದಿನದ ಬಳಿಕ ನಡೆದ ವಿಷಯ ಅವರ ಕಿವಿಗೆ ಸೋಕುತ್ತದೆ .
ಮಹಿಳೆಗೆ ಆದ ಅನ್ಯಾಯದ ವಿರುದ್ದ ಕ್ರಮ ಕೈಗೊಳ್ಳ ಬೇಕಿದ್ದ ಮಾನ್ಯ ಸಚಿವರು,ತಮ್ಮ ಕೆಲಸ ಆಳುಗಳು ಮಾಡಿದ್ದೆ ಸರಿ ಎಂಬ ನಿಲುವಿಗೆ ಬದ್ದರಾಗುತ್ತಾರೆ , ಅವರ ರಕ್ಷಣೆ ನಿಲ್ಲುವುದು ಬಿಡಿ ,ಪೋಲಿಸ್ ಪೇದೆ ಮಾಡಿದ್ದು ಸರಿ ಅಲ್ಲ ಎಂದು ತನ್ನ ಪವರ್ ಬಳಸಿ ಪೇದೆಯನ್ನು ವರ್ಗಾವಣೆಗೆ ಮಾಡುವುದಕ್ಕೆ ಮು೦ದಾಗುತ್ತಾರೆ ..
ನೆಡೆದ ಘಟನೆಯು ಸ್ಥಳಿಯರಲ್ಲಿ ಯಾರದ್ದು ತಪ್ಪು ಸರಿ ಎಂಬ ಜಡ್ಜ್ಮೆಂಟ್ ಇದ್ದರೂ ,ಮಂತ್ರಿ ಪಟಾಲಂ ಕಡೆಯವರು ಜನರಿಗೆ ಮಂಕು ಬೂದಿ ಅರಚಿ ಇದರಲ್ಲಿ ಪೋಲಿಸ್ನದ್ದು ಪೂರ್ಣ ತಪ್ಪು ಎಂದು ತೋರಿಸೋಲ್ಕರ ಒಂದು ನಾಟಕವನ್ನು ಹೂಡುತ್ತದೆ .
ಎಂದಿಂತೆ ಅರಾಮಾಗಿ ಬೈಕ್ ನಲ್ಲಿ ಸುತ್ತಾಡಿ ಮಧ್ಯೆ ಹೀರಿ ಇತರರಿಗೆ ಕಿಚಾಯಿಸುವ ತಮ್ಮ ಹವ್ಯಾಸ ವನ್ನು ಒತ್ತೆಯಲ್ಲಿಟ್ಟು ಕೊ೦ ಡಿದ್ದ ಫಟಿಂಗರು ,ಒಂದು ದಿನದ ನಂತರ ಆಸ್ಪತ್ರೆಗೆ ದಾಖಲಾಗುತ್ತಾರೆ .. ಪೊಲೀಸರು ಹೊಡೆದದ ಏಟು ತೀವ್ರ ಸ್ವರೂಪ ತಾಳಿ ಸೇರಿಯಸ್ ಆಗಿದೆ ಎಂದು ಜೊತೆಗೆ ಪೋಲಿಸ್ ದೂರು ದಾಖಲಾಗುತ್ತದೆ . ..ಸಿನಿಯರ್ ಪೋಲಿಸ್ ಅಧಿಕಾರಿಯೊಬ್ಬರು ಈ ಪೇದೆಗೆ ಕರೆ ಮಾಡಿ ನೀನು 15 ದಿನದ ಮಟ್ಟಿಗೆ ರಜೆಗೆ ಊರಿಗೆ ತೆರಳು ಇಲ್ಲದಿದ್ದರೆ ನಿನಗೆ ಬೇರೆಡೆ ವರ್ಗಾವಣೆ ಮಾಡ ಬೇಕೆಂಬ ಒತ್ತಡ ವಿದೆ ಎಂಬ ಮಾತು ಕೇಳಿ ಆತನಿಗೆ ಒಮ್ಮೆಲೇ ಬೆಚ್ಚಿಬೀಳಿಸಿತ್ತಾದರೂ, ಇದು ಇದೇ ಸ್ವರೂಪ ತಾಳುತ್ತದೆ ಎಂಬ ಅರಿವು ಅವರಿಗೆ ಮೊದಲೇ ಮನಸಿನಲ್ಲಿ ಮನೆ ಮಾಡಿತ್ತು . ಏನು ಮಾಡೋಣ ಹೇಳಿ ಇಂತಹ ಹೇಸಿಗೆ ಪ್ರಜಾಪ್ರಬುತ್ವದಲ್ಲಿ ನಾವಿದ್ದೇವೆ ಎಂಬ ಕಡು ಸತ್ಯವನ್ನು ಬಗಲಲ್ಲಿ ಇಟ್ಟು ಕೊಳ್ಳಲೇ ಬೇಕು . ದುರ೦ತವಲ್ಲದೇ ಮತ್ತಿನ್ನೇನು ? ಒಬ್ಬ ಪೋಲಿಸ್ ಅಧಿಕಾರಿಗೆ ತನ್ನ ಹೆಂಡತಿಗೆ ರಕ್ಷಣೆ ಕೊಟ್ಟು ,ಅನ್ಯಾಯ ವಿರುದ್ದ ಹೋರಾಡಿ ನ್ಯಾಯ ಬದಿಗಿರಲಿ ಸ್ವತ: ತಾನೇ ಶಿಕ್ಷೆಯನ್ನು ಅನುಭವಿಸಬೇಕಾದ ಸ್ತಿತಿ ಬಂತೆಂದರೆ ಇನ್ನೂ ಸಾಮಾನ್ಯ ಜನರ ಗತಿ ಏನು ? ಮುಂದೆ ಒಂದು ದಿನ ತಮ್ಮತಮ್ಮ ಮನೆಯ ಹೆಣ್ಮಕ್ಕನ್ನು ಎತ್ತಾಕಿ ಕೊಂಡು ಹೋದರೂ ಅಚ್ಚರಿ ಇಲ್ಲ...! ಇಂತವರುಗಳಿಗೆ ಸಾಥ್ ನೀಡುವರಿಗೆ ಹಾಗೂ ಇದರಲ್ಲಿ ಬಾಗಿಯಾಗುವವರಿಗೆ ಆ ಕ್ಷಣದಲ್ಲಿ ಯಾವುದೇ ಶಿಕ್ಷೆ ನೀಡುವ ಸಿನಿಮಾಗಳಂತೆ ಒಬ್ಬ ನಾಯಕ ಬರಲು ಅಸಾದ್ಯವಾದರೂ ,ಮುಂದೊಂದು ದಿನ ಇವರುಗಳಿಗೂ ಈ ಪರಿಸ್ತಿತಿ ಬಾರದೇ ಇರದು ಪರಿಣಾಮ ಖಂಡಿತವಾಗಿಯೂ ಎದುರಿಸಬೇಕಾಗುತ್ತದೆ .. ಅಧಿಕಾರ ಹಣ ಯಾವುದೂ ಶಾಶ್ವತ ಅಲ್ಲ ಅಲ್ಲವೇ ?!.