ಭಾನುವಾರ, ಆಗಸ್ಟ್ 3, 2014

ಈಗೀಗ ಅತ್ಯಚಾರ ಬೆಳಕಿಗೆ ಬರಲಿಕ್ಕೆ ಕಾರಣ : ದಿಲ್ಲಿಯೆ ಫಲಶ್ರುತಿಯೇ ?!

ಹೌದು ಇತ್ತೀಚೆಗೆ ಎಲ್ಲಿ ನೋಡಿದರೂ ಅತ್ಯಚಾರದ್ದೇ ಸುದ್ದಿ.ಯಾವುದೇ ಟಿವಿ ನ್ಯೂಸ್ ಚಾನೆಲ್ ಆನ್ ಮಾಡಿದ್ದ್ರೂ, ರೇಫ್ ನ ಸ್ಚ್ರಿಪ್ಟ್ ತುಂಬಿ ತುಳುಕುತ್ತಿದೆ
... ಹೋಗುವ ಹಾದಿಯಲ್ಲಿ ,ಒಬ್ಬಂಟಿ ಮನೆಯಲ್ಲಿ, ಶಾಲೆಯ ಸಿಬ್ಬಂದಿಯಿಂದ , ವಾಹನದ ಚಾಲಕರಿಂದ, ಸಹೋದ್ಯೋಗಿಯಿಂದ, ಎಳೆಯ ಹಸುಳೆ ಎಂದು ಲೆಕ್ಕಿಸದೇ ಹೇಯ ಕ್ರತ್ಯವನ್ನು ಎಸಗುವ ಪರಿಯನ್ನು  ಈ ವರ್ಣಾನಾತ್ಮಕ ಘಟನೆಗಳು ಇತ್ತಿಚೆಗೆ ಮಾತ್ರ ನಡೆಯುತ್ತಿದೆಯೆ ಎಂದು ಮೂಗಿನ ಮೇಲೆ ಬೆರಳಿಟ್ಟು ಆಲೋಚಿಸುವುದು ತಪ್ಪು. ಇದು ಇಂದು ನಿನ್ನೆಯದಲ್ಲ.. ಪುರಾತನ ಕಾಲದಿಂದಲೂ ನಡೆದು ಬರುತ್ತಿರುವ ವಿಚಾರವೇ! ಅತ್ಯಚಾರಕ್ಕೆ ಒಳಗಾದವರು ಅತ್ಯಚಾರ ಎಸಗಿದವರ ಬೆದರಿಕೆಗೆ ಮುದುಡಿ ಕುಳಿತರೇ, ಇನ್ನು ಹೆಚ್ಚಿನವರು ಮರ್ಯಾದೆಗೆ ಅಂಜಿ ಭವಿಷ್ಯದ ಚಿಂತನೆಯ ಯೋಚನೆಯಲ್ಲಿ ಅದನ್ನು ಬಹಿರಂಗ ಪಡಿಸದೇ ಇದ್ದರಿಂದ ಅದು ಅಷ್ಟೊಂದು ಪ್ರಚಲಿತ ಪಡೆಯುತ್ತಿರಲಿಲ್ಲ ಎಲ್ಲೋ ಒಂದೋ ಎರಡೋ ಘಟನೆಗಳು  ಧೈರ್ಯ ವಂತ ರಿಂದ ಮಾತ್ರ ಮುಖ್ಯವಾಹಿನಿಗೆ ಬರುತ್ತಿತ್ತು. ಎಂದು ದಿಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ನಡೆದು ರಾಷ್ಟ್ರ ಅಂತರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿ ಕೊಂಡೀತೋ ಅಂದಿನಿಂದ ದೇಶದ ಮೂಲೆ ಮೂಲೆ ಗಳಲ್ಲೂ ಬಯಲು ಗೊಳ್ಳುವಂತೆ ಮಾಡೀತು. ಇದು ದಿಲ್ಲಿಯ ಫಲಶ್ರುತಿ ಎಂದರೂ ಅತೀಶಯೋಕ್ತಿ ಯಾಗಲಾರದು. ಏನೇ ಇರಲಿ  ಈ ಪ್ರಕರಣ ದಿಂದ ಅಂತರಂಗದ ವಿಚಾರ ಬಹಿರಂಗ ಒಳ್ಳೆದೇ ಯಾದರೂ, ಅತ್ಯಚಾರಿ ಕಾಮ ಪಿಪಾಸುಗಳಿಗೆ ಕಠಿಣ ಸಜೆ ಆಗಬೇಕು. ಶಿಕ್ಷೆ ಎಂದರೇ ಕೇವಲ ಮಾಮುಲಿ ನಂತಿರದೇ ಇನ್ನು ಮುಂದೆ ಆತ ಯಾರನ್ನು ಆ ಭಾವನೆಯಿಂದ ಕಾಣುವಂತಿರಬಾರದು, ಆತನನ್ನು ನೋಡಿ ಇನ್ನೊಬ್ಬನ್ನು ಸಹಾ ಅದರಿಂದ ದೂರ ಹೊಗುವಂತಿರಬೇಕು. ಅಂತಹ ಶಿಕ್ಷೆ ನಮ್ಮ ದೇಶದಲ್ಲಿ ಬರಬೇಕಾದದ್ದು ಜರೂರತ್ ಇದೆ.