ಶನಿವಾರ, ಡಿಸೆಂಬರ್ 28, 2013

ಎಂತೆಂತಾ ಬಿಸಿನೆಸ್ ಗಳಿವೆ ರೀ ?

ಬಿಸಿನೆಸ್ ಗಳಲ್ಲಿ ಎಷ್ಟೆಲ್ಲಾ ವಿಧಗಳಿವೆಯೋ  ಅರ್ಥವಾಗುತ್ತಿಲ್ಲ . ಅಗ್ಗದ ರೀತಿಯಲ್ಲಿ ಮೈ ಕೈ ಪೆಟ್ಟಾಗದೇ  ಕಷ್ಟ ಪಡದೇ  ದುಡ್ಡು ಮಾಡುವ ಮಂದಿಯನ್ನು ನಾವು ಹಲವಾರು ಸಂಧರ್ಭ ಗಳಲ್ಲಿ ಅರಿತಿದ್ದೇವೆ /ನೋಡ್ತಾತಾನೆ ಇದ್ದೇವೆ . ಕಣ್ಣಗೆ ಕಾಣದಂತೆ ಬೇಡಾ ಎಂದು,ಕಣ್ಣುಮುಚ್ಚಿ ಕುಳಿತರೂ ಸಹಾ ನಮ್ಮ ಕಣ್ಣಿಗೆ ರಾಚುತ್ತದೆ .. ಅವರವ -ಭಾವ -ಬಕುತಿಗೆ ತಕ್ಕಂತೆ ಬಿಸಿನೆಸ್ ಮಾಡ್ತಾರೆ ಬಿಡಿ ಆದರೆ ಅದರಿಂದ ಸಮಾಜಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಿದ್ದರೆ ಸಾಕು .. ಇತ್ತಿಚಿಗೆ ಮಾತ್ರ ತತ್ವ ಗಳು ಸಿದ್ದಾಂತದ ತಳಹದಿ ಡಾಟಿ ವಿವಹರಿಸುತ್ತಿರ್ವುದನ್ನು ನೋಡಿದರೆ ಮೂಗಿನ ಮೇಲೆ ಬೆರಳು ಇಟ್ಟು  ಕೊಳ್ಳುವಂತ ಸ್ತಿತಿ ಬಂದೊದಗಿದೆ (!)ಎಂಬ ವಿಚಾರ ಹಾಸ್ಯಾಸ್ಪದ ಅನ್ನಿಸಿದರೂ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗದಂತ ಭಯಾನಕ ವಾತವಾರಣ ಸರ್ಷ್ಟಿ ಯಾಗುತ್ತಿರವುದು  ವಾಸ್ತವಾರ್ಹ  . ಹೌದು ಕಣ್ರೀ ಇದು ಬುದ್ದಿವಂತರ ,ಸಭ್ಯತೆಗೆ ,ಸಂಸ್ಕ್ರತಿಗೆ ಹೆಸರಾದ ಕರಾವಳಿ ನಾಡಿನಲ್ಲಿ ನಡೆಯಿಸುತ್ತಿರುವ ಕೆಲವು ಅತಿ ರಥ -ಮಹಾರಥರ ಪ್ರಚಂಡ ದೂರಾಗಾಮಿ ಬುದ್ದಿವಂತಿಗೆ ಪ್ರತಿಫಲ ಕಾಯಕ ಅಂತ ಹೇಳಬಹುದೇನೋ.. ಹತ್ತು ಸಾರಿ ಕದ್ದ ಕಳ್ಳ ಒಂದು ಸಾತಿಯಾದರೂ ಸಿಕ್ಕಿ ಬೀಳಲೇ ಬೇಕಂತೆ . ಇದರಲ್ಲಿ ಎರಡು ವಿಚಿತ್ರ ಬಿಜಿನೆಸ್ ಇಲ್ಲಿದೆ ನೋಡಿ ಒಂದೇ ತಿಂಗಳಲ್ಲಿ ನಡೆದ ಎರಡು ಘಟನೆ ನಿಜಕ್ಕೂ ಮನ ತಲ್ಲಣಿಸುತ್ತಿದೆ .


 ನೋಡಲು ಸುರದ್ರೂಪಿ ಯುವಕ ಫೇಸ್ಬುಕ್ ನಲ್ಲಿ ಫೇಕ್ ಆಕೊಂಟ್  ಕ್ರಿಯೇಟ್ ಮಾಡಿ ಹೆಂಗಳೆಯರನ್ನು ಬುಟ್ಟಿಗೆ ಹಾಕಿ ಕೊಂಡು ಲವ್ ಎಂಬ ನಾಟಕದಲ್ಲಿ  ಲಾಡ್ಜ್ ನಲ್ಲಿ ರೂಂ ಮಾಡಿ ಅವರ ಆಶ್ಲೀಲ ಚಿತ್ರಗಳನ್ನು ಕ್ಲಿಕ್ಕಿಸಿ ಬ್ಲಾಕ್ ಮೇಲ್ ಮಾಡಿ ಹಣ ಒಡವೆ ಗಳನ್ನು ಲಪಟಾಯಿಸುವುದು  ಈತನ ಉದ್ಯೋಗ ಎಂದರೆ ಅದೇ ರೀ ಬಿಜಿನೆಸ್  ಆದರೆ ಇನ್ನೊಂದು ಇದಕ್ಕಿನಂತಲೂ  ಭಿನ್ನ , ರಸ್ತೆಯಲ್ಲಿ ಕಾಣ ಸಿಗುವ ಯುವತಿಯರನ್ನು ಕಿಡ್ನಾಫ್ ಮಾಡಿ ಅವರನ್ನು ಬಲವಂತವಾಗಿ ಲೈಂಗಿಕ ಕ್ರಿಯಗೆ ಒಳಪಡಿಸಿ ಅದನ್ನ ಸೆರೆಹಿಡಿದು ಬ್ಲಾಕ್ ಮಾಡಿ ದುಡ್ಡು ಮಾಡುವದರ ಜೊತೆಗೆ ಅದರ ಬಿಕರಿ ಯಿಂದಲೂ ಕೈ ತುಂಬಾ ರೊಕ್ಕ ಮಾಡ್ತಾ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡಿಯುವುದು ದೈನಂದಿನ ಕಾರ್ಯ . ಅಬ್ಬಾ !!! ಎಂಥಾ ವಿಪರ್ಯಾಸ ನೋಡಿ  ನಮ್ಮ ಸಮಾಜ ಎಷ್ಟು ಕುಲಗೆಟ್ಟು ಹೋಗಿದೆ ಅಂದರೆ ಈ ಎರಡು ಉದಾಹರಣೆ ಗಳೇ ಸಾಕು . ಏನೇ ಇರಲಿ ಇವರು ಪ್ರಸ್ತುತ ಪೋಲಿಸ್ ಬಲೆಯಲ್ಲಿ ಅತಿಥಿ ಯಾಗಿದ್ದರೂ, 'ಕೊಳ್ಳೆ ಹೊಡೆದ ಮೇಲೆ ಮೇಲೆ ಕೋಟೆ ಬಾಗಿಲು 'ಹಾಕಿ ಏನು ಪ್ರಯೋಜಾನ ? ಇನ್ನು ಅದೆಷ್ಟೋ ಇಂಥಹ ವಿಚಿತ್ರಕಾರಿ ಬಿಸಿನೆಸ್ಸು ನಮ್ಮ ತೆರೆ ಮರೆಯಲ್ಲಿ ನಡೆಯುತ್ತಿದೆಯೋ ಗೊತ್ತಿಲ್ಲ . ಪ್ರಸ್ತುತ ಬಂಧಿಸಲ್ಪಟ್ಟ  ಆರೋಪಿಗಳು ಪೋಲಿಸ್ ಠಾಣೆಯಲ್ಲಿ ರಾಗಿ ಮುದ್ದೆ ತಿನ್ನುತ್ತಾ ಸುಖವಾಗಿದ್ದಾರೆ ಇನ್ನಷ್ಟು ದಿನ ..ಮತ್ತೆ ಹೊರಗೆ ಬಂದು ಹಳೆ ಚಾಳಿ ಮುಂದುವರಿಸದೆ ಇರಲಾರದು . ಏನೆ ಇರಲಿ ಯಾರನ್ನು ನಂಬುವ ಸ್ಥಿತಿ ಯಲ್ಲಿ ಆಧುನಿಕ ಜಮಾನ ಇಲ್ಲ ನಮ್ಮ ಸೇಪ್ಟಿ /ಜಾಗ್ರತೆ ನಮ್ಮ ಜೊತೆಗೆ ಇದ್ದರೆ ಇಂತಹಾ ಬಿಸಿನೆಸ್ ಗೆ ಬ್ರೇಕ್  ಬೀಳಬಹುದು .

ಬುಧವಾರ, ನವೆಂಬರ್ 13, 2013

ಅನ್ನಭಾಗ್ಯ ಯೋಜನೆ ಫಲಾನುಭಾವಿಗಳು ಯಾರು ?


 ಈ ಹಿಂದೆ ಮೂರು ರೂ .. ಆರು ರೂ.. ಗೆ ದೊರಕುತ್ತಿದ್ದ ಅಕ್ಕಿ, ಕೆಲವಂದು ನ್ಯಾಯ ಬೆಲೆ ಅಂಗಡಿಯಲ್ಲಿನ ಅನ್ಯಾಯದ ಕೂಪದಲ್ಲಿ,ಬಡವರ ಸ್ವತ್ತು ಅಂತವರಿಗೆ ದೊರೆಯದೇ ಗುಳುಂ -ಗುಳುಂ  ಸ್ವಾಹಾ ತಂತ್ರಜ್ನರ ಪಾಲಾಗುತ್ತಿರುವ ವಾಸ್ತವ ಸ್ಥಿತಿಯಲ್ಲಿ ಈ ಯೋಜನೆ ಅಂತವರಿಗೆ ರೊಟ್ಟಿ ಜಾರಿ ತುಪ್ಪ ಕ್ಕೆಬಿದ್ದ ಹಾಗೆ ಆಗಿದೆ .  ಒಂದು ಗ್ರಾಮದಲ್ಲಿ  ಎಷ್ಟು ಪಡಿತರರು ಇದ್ದಾರೆ ಎಂಬ  ಪಟ್ಟಿ  ಇದ್ದೂ , ಅಷ್ಟೇ ಪ್ರಮಾಣದ ಮಾಲ್  ಗೊಡನ್ನಿಗೆ  ಬಂದು ಬಿದ್ದರೂ , ಬೇಗ  ಬಂದ ಒಂದಿಷ್ಟು ಫಲಾನುಭವಿಗಳಿಗೆ ಹಂಚಿ ''ನಮಗೆ ಬಂದಿದ್ದು ಇಷ್ಟೇ'' ಎಂದು ಅದೇ ರಾಗ ಅದೇ ಹಾಡು ನಂತೆ ಅನೂ ದಿನವೂ ತಮ್ಮ ಭಾವನೆಯನ್ನು ಹೊರ ಹಾಕಿ ಕೈ ತೊಳೆದು ಕೊಳ್ಳುತ್ತಾ ,ಏನೂ ಅರಿಯದ  ಗ್ರಾಮೀಣ ಪ್ರದೇಶ ಮುಗ್ದ ಜೀವಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕಣ್ಣಿನಲ್ಲಿ ರಕ್ತ ಇಲ್ಲದ  ಕಟುಕರಿಗೆ ಏನ್ ಹೇಳೋಣ ??? 

ಮಂಗಳವಾರ, ಅಕ್ಟೋಬರ್ 29, 2013

ಬೆಂಕಿ ಇಲ್ಲದೇ ಹೊಗೆಯಾಡದು ..

 ವರ್ಷಗಳ ನಂತರ ಉಜರೆ ಸೌಜನ್ಯ  ಪ್ರಕರಣ ಜೀವ ಪಡೆದು ಉತ್ಪ್ರೆಕ್ಶಾ ನಾಗಾಲೋಟದಲ್ಲಿ ಸಂಚರಿಸುತ್ತಿದೆ.ವಿಧ್ಯಾರ್ಥಿ ನಿ ಸೌಜನ್ಯಳ ಅತ್ಯಾಚಾರ ಕೊಲೆಗೆ ಸಂಬಂಧಪಟ್ಟಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಂಬಂದಿಕರೇ ಪ್ರಮುಖ ಕಾರಣ ಎಂದು ಬೊಟ್ಟು ಮಾಡಿ ತೋರಿಸಲಾಗುತ್ತಿದೆ . ಕೆಲವು ವ್ಯಕ್ತಿಗಳು ಮುಂಚುಣಿಗೆ ಬಂದು  ಹೋರಾಟಕ್ಕೆ ಇಳಿದು ಸೌಜನ್ಯಳ ವಿಷಯಗಳನ್ನು ಎತ್ತಿ ಇನ್ನೀತರ ವಿಚಾರ ವೈಚಾರಿಕತೆಯ ವಿರುದ್ಧ ಧ್ವನಿಯಾಗಿಸುತ್ತಾ ಆರೋಪದ ಮಳೆಯನ್ನು ಹರಿಸುತ್ತಿರುವುದನ್ನು ನೋಡುತ್ತಿದ್ದರೆ 'ಇಲ್ಲ' ಇನ್ನುವ ಮನೋಭಾವ ಸಾರಿಸಾರಿ ಮನದಲ್ಲಿ ನುಡಿಯುವುತ್ತಿದ್ದರೂ, ಎಲ್ಲೂ ಒಂದು ಕಡೆ  ಬೆಂಕಿ ಇಲ್ಲದೇ ಹೊಗೆಯಾಡದು ಎಂಬ ವಿಚಾರ ಪದೇ ಪದೇ ತಟ್ಟದೇ ಇರಲಾರದು
.
ಇದು ಕೇವಲ ಸೌಜನ್ಯಳ ಪ್ರಕರಣ ವನ್ನು ನ್ಯಾಯದ ಬಾಗಿಲಿಗೆ ತರುವ ಪ್ರಯತ್ನವಾಗಿರದೇ ಹಿಂದೆ ಅಲ್ಲಿ ನಡೆದು ಭೂಗತ ಗೊಂಡ ಕೊಲೆ , ಸುಲುಗೆ , ಅತ್ಯಾಚಾರ, ಕಾಣೆ ಮುಂತಾದ ಹತ್ತು ಹಲವು ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ವಾಗುವುತ್ತಿದೆ ಎಂದು ಮೆಲ್ನೊಟಕ್ಕೆ  ಹೋರಾಟ, ಸಭೆ - ಪ್ರತಿಭಟನೆಗಳಿಂದ ಸಾರಿ ಹೇಳುತ್ತಿದೆ. ನಿಜಕ್ಕೂ ಇದು ಸೌಗತಾರ್ಹವೂ ಕೂಡಾ ಹೌದು. ಡೆಲ್ಲಿಯ ಗ್ಯಾಂಗ್ ರೆಪ್ , ಹಾಗೂ ಮಣಿಪಾಲದ ಅತ್ಯಾಚಾರ ಪ್ರಕರಣದ ಆರೊಪಿಗಳನ್ನು ಬಂಧಿಸಲಾಗಿದೆ. ಆದರೆ ಸೌಜನ್ಯಳ ವಿಷಯಕ್ಕೆ ಮೀನಾಮೇಷ ಯಾಕೆ.. ಹಿಂದೆ ತಾಲ್ಲೊಕಿನಲ್ಲಿ  ನಡೆದ ಅದೇಷ್ಟೋ ಘಟನೆಗಳ ವಿಚಾರಣೆ ಮೂಲೆ ಸೇರಿರುವುದರ ಗುಟ್ಟೇನು ? ಪೋಲಿಸ್ ಇಲಾಖೆಗೂ ಸೇರಿದಂತೆ ಅಕ್ಕ-ಪಕ್ಕದಲ್ಲಿರುವವರಿಗೂ ಅಲ್ಲಿ ಎನು ನಡೆಯುತ್ತಿದೆ ..? ಯಾರ ಕೈವಾಡವಿದೆ . ಎಂಬುದು ಗೊತ್ತಿದ್ದರೂ ಯಾಕೆ ಇದು ಮುಖ್ಯವಾಹಿನಿಗೆ ಬರುತ್ತಿಲ್ಲ. ಇಂಥಹ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಎಲ್ಲೆಡೆ ಪಸರಿಸಲು ಬೇಕಾಗಿದ್ದು... ಇಷ್ಟೊಂದು ಧೀರ್ಘ ಸಮಯ.  ಮೊನ್ನೆ -ಮೊನ್ನೆಯಿಂದ ಮಾಧ್ಯಮಗಳ ಮೂಲಕ ಇಂಚು ಇಂಚಾಗಿ ಹರಿದು ಬಂದ ವಿಚಾರ ನಿಜಕ್ಕೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ. ಇದನ್ನೇಲ್ಲಾ ಗಮನಿಸುತ್ತಿದ್ದರೆ, ಎಲ್ಲಾ ಪ್ರಕರಣದ ಹಿಂದೆ ಬಲಾಡ್ಯರ ಬಲ ಪ್ರಯೋಗದ ಪ್ರಭಾವ  ಇಲ್ಲದೇ ಇರಲಾರದು.  ಎನೇ ಇರಲಿ ಯಾವುದೇ ಬೆದರಿಕೆ ,ಒತ್ತಡಕ್ಕೆ ಮಣಿಯದೇ ಜೀವದ ಹಂಗು ತೋರೆದು ಹೋರಾಟಕ್ಕೆ ನಿಂತ ತಿಮ್ಮರೋಡಿ ಮಹೇಶ ಶೆಟ್ಟಿ  ಸೇರಿದಂತೆ ಮತ್ತಿತ್ತರರ ಧೈರ್ಯ, ಸ್ಥೈರ್ಯವನ್ನು ಮೆಚ್ಚತಕ್ಕದ್ದೇ. ಒಟ್ಟಾರೆ ಘಟನೆಗೆ ಸಂಬಂದಿಸಿದಂತೆ ಇಲ್ಲಿ ಯವುದು ಸತ್ಯ- ಯಾವುದು ಮಿಥ್ಯ ಎಂಬುದು ಪ್ರಮುಖವಾಗಿ ಕಾಡುತ್ತಿದೆ. ನಿಸ್ಪಾಕ್ಶಪಾತ ತನಿಖೆಯಾದರೆ .ಉತ್ತರ ಸಿಗಬಹುದು ಪಾರದರ್ಶಕ ತನಿಖೆ ಸಾಧ್ಯವೇ.. ???  

ಬುಧವಾರ, ಆಗಸ್ಟ್ 21, 2013

ನಿಡ್ಡೊಡಿ ಉಳಿವಿಗೆ ಒಗ್ಗೂಡಿ




ಬಹು ಚರ್ಚೆಯಲ್ಲಿರುವ ಹಾಗೂ ಕರಾವಳಿಯ ನಾಡಿ -ಮಿಡಿತವನ್ನು ಎಚ್ಚರಿಸುತ್ತಿರುವ ವಿಚಾರ ಇದಾಗಿದೆ . ಹೌದು !ಮಂಗಳೂರು ಸಮೀಪದ ನಿಡ್ಡೊಡಿ ಎಂಬಲ್ಲಿ ಉಷ್ಣ ವಿದ್ಯುತ್  ಸ್ಥಾವರ ಸ್ಥಾಪನೆ ಆಗಲಿದೆ .ಇದರ ನೀಲನಕ್ಷೆ ಈಗಾಗಲೇ ತಯಾರು ಗೊಂಡಿದ್ದೂ , ಕಾಮಗಾರಿ ಪ್ರಾರಂಭವಾಗಲು ಕ್ಷಣ ,ಗಣನೆಯಲ್ಲಿದೆ . ಅರಗಿಸಿ ಕೊಳ್ಳಲಾಗದ ಈ ವಿಚಾರ ವನ್ನು ತಿಳಿದು ಸುತ್ತ -ಮುತ್ತಲಿನ ಸ್ಥಳಿಯರು ಕಿಡಿ ಕಾರುತ್ತಿದ್ದಾರೆ . ತಮ್ಮ ಎಕರೆ ಗಟ್ಟಲೇ ಕ್ರಷಿ ಭೂಮಿ ,ಹಚ್ಚ ಹಸುರಿನ ಸ್ವಚ್ಛ ಪರಿಸರ ನಾಶ ವಾಗುವುದರ ಜೊತೆಗೆ ಶಾಶ್ವತ ವಾಗಿ ಪ್ರದೇಶ ನಿಶ್ಯಬ್ದ ವಾಗುವ ಲಕ್ಷಣ ವನ್ನು ಮುಂದಾಗಿ ಆಲೋಚಿಸಿ ಎಲ್ಲಡೆ ಪ್ರಜ್ಞಾವಂತರ ರೋಷ-ಆವೇಶದ ಕಟ್ಟೆ ಒಡೆದಿದೆ . ಇತ್ತೀಚಿಗೆ ಸಮೀಕ್ಷೆ ಆಗಮಿಸಿದ ಉನ್ನತ ಅಧಿಕಾರಿಗಳನ್ನು ಚಪ್ಪಲಿ ಹಿಡಿಸೋಡಿಯೊಂದಿಗೆ ಸ್ವಾಗತಿಸಿ  ತರಾಟೆಗೆ ತೆಗೆದು ಕೊಂಡ ನಾಗರಿಕರು, ಹೋರಾಟದ ಕಿಚ್ಚನ್ನು ದಿನೇ ದಿನೇ ವಿಸ್ತರಿಸುತ್ತಿದ್ದಾರೆ . ಇದು ಸ್ವಾಗತವೂ ಕೂಡಾ ಹೌದು . ಆದರೆ 
ನಿಡ್ಡೊಡಿ ಯಲ್ಲಿ ಉಷ್ಣ ವಿಧ್ಯುತ್ ಸ್ಥಾವರ ರೆಡಿ ಆಗುತ್ತಾ ?! :
ಖಂಡಿತವಾಗಿಯೂ ಇದು ಇಂದಲ್ಲ ನಾಳೆ ಯಾದರೂ ಇದಕ್ಕೆ ಹಸಿರು ನಿಶಾನೆ ದೊರಕದೇ ಇರಲಾರದು . ಎಂಬ ಮಾತು ಪ್ರಚಲಿತದಲ್ಲಿದೆ ಕಾರಣ ಇಷ್ಟೇ.  ಕೇಂದ್ರ ಸರಕಾರದ ಕ್ರಪಾ ಪೋಷಿತ ಯೋಜನೆ ಇದಾಗಿರುವುದರಿಂದ ಜೊತೆಗೆ ಕರ್ನಾಟಕದಲ್ಲೂ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರ್ವುದರ ಜೊತೆಗೆ ಕರಾವಳಿಯಲ್ಲಿ ಮಂತ್ರಿ ಗಿರಿಗಳ ಪಾಲು ಬಹು ದೊಡ್ಡದಿದೆ . ಒಂದೆಡೆ ತಮ್ಮನ್ನು ಆರಸಿ, ಹಾರೈಸಿ ವಿಧಾನ ಸೌಧಕ್ಕೆ ಪ್ರವೇಶ ಕಲ್ಪಿಸಿದ ಮತದಾರ ಪ್ರಭುಗಳನ್ನೂ ಬಿಡುವಂತಿಲ್ಲ ಇನ್ನೊಂದೆಡೆ ಆಸನದ ಪದವಿಯನ್ನು ದಯಪಾಲಿಸಿದ ಸರಕಾರದ ತೀರ್ಪನ್ನು ತಿದ್ದುವಂತಿಲ್ಲದ ತ್ರಿಶಂಕು ಪರಿಸ್ಥಿತಿಯಲ್ಲಿ ಮಂತ್ರಿ ಮಹೋದಯರು ಕೊನೆಗೆ ತುಳಿಯುವ ಹಾದಿ ಸರ್ಕಾರದ ಮೆಟ್ಟಿಲನ್ನೇ . ಮತದಾರ ಹಂಗು ಈಗಿಲ್ಲ ಕಾರಣ ಪದವಿ ಗಟ್ಟಿಯಾಗಿದೆ  ೫ ವರ್ಷ ತೊಂದರೆ ಇಲ್ಲ ಮತದಾರರ ಎದುರು ಮೊಸಳೆ ಕಣ್ಣೀರಿಡುತ್ತಾ ಇತ್ತ ತಮ್ಮ ಬೇಳೆ ಬೇಯಿಸಿ ಕೊಳ್ಳುವವರನ್ನು ನಾವು ಕಾಣ  ಬಹುದು ಇದಕ್ಕೆ ತಾಜಾ ಉದಾಹರಣೆಯ೦ದರೆ ಯುಪಿಸಿಎಲ್.   ಪಡುಬಿದ್ರೆ ಸಮೀಪ ನಿರ್ಮಾಣ ಗೊಂಡ ನಾಗಾರ್ಜುನ ಉಷ್ಣ ವಿಧ್ಯುತ್ ಸ್ಥಾವರ ವೇ ಸಾಕ್ಷಿ ನುಡಿಯುತ್ತಿದೆ . ಮೂರು ವರ್ಷಗಳ ಹಿಂದೆ ಇದೇ ತರಹನಾದ ಹೋರಾಟ ಚಳುವಳಿ ನಡೆದಿದ್ದು !!ನಂತರ ವಾಸ್ತವದ ವಿಚಾರವನ್ನು ಪರಸ್ತುತ ಪಡಿಸುವ ಅಗತ್ಯವೇ ಇಲ್ಲ. ಅದೇ ದಿಕ್ಕಿನಲ್ಲಿ ಇದು  ಸಾಗ ಬಹುದೇ  ಗೊತ್ತಿಲ್ಲಾ ಕಾಲವೇ ಉತ್ತರ ಹೇಳಬೇಕು
ನಿಡ್ಡೊಡಿ ನಾಗರ್ಜುನ ಕ್ಕಿಂತ ಮೂರು ಪಟ್ಟು ದೊಡ್ಡದು !;
ಆಸಲಿಗೆ ಯೋಜಿಸಲ್ಪಟ್ಟ ನಿಡ್ಡೊಡಿ ಉಷ್ಣ ವಿಧ್ಯುತ್ ಸ್ಥಾವರ ಯುಪಿಸಿಯೇಲ್ ಕ್ಕಿಂತ ಮೂರು ಪಟ್ಟು ದೊಡ್ಡದು . ಇದರಿಂದ ಹೊರಬರುವ ಹೋಗೆ , ರಾಸಾಯನಿಕ ಕಲ್ಮಶ ಸೇರಿದಂತೆ ಪರಿಸರ ಮಾರಕಕ್ಕೆ ಪೂರಕವಾದ ಅಂಶಗಳು ಸಹಾ ಸಾಕಷ್ಟು ಬಿನ್ನವಾಗಿದೆ. ನಾಗಾರ್ಜುನ ಸಾಗರ ಕೇವಲ ಒಂದು ಗ್ರಾಮಕ್ಕೆ ಕುಂದು ತರುವಂತಿದ್ದರೆ ಇದು ಮೂರು ಗ್ರಾಮಕ್ಕೆ ಕಂಟಕ ಪ್ರಾಯವಾಗಲಿದೆ . ಅದೂ ಅಲ್ಲದೇ ಇದು ಬಹಳ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವದರಿಂದ ಇದರ ಬಿಸಿ ಇನ್ನಷ್ಟು ವಿಸ್ತಾರ ಕಾಣುತ್ತದೆ ಎಂಬದು ತಜ್ಞರ ಅಭಿಪ್ರಾಯ . ಇಷ್ಟೆಲ್ಲಾ ಉಪದ್ರವಕಾರಿತನವನ್ನು ಹೊಂದಿರಿರುವ ಉಷ್ಣ ವಿಧ್ಯುತ್ ಸ್ಥಾವರದ ಸ್ಥಾಪನೆ ಇಲ್ಲಿ ಅವಶ್ಯವಿದೆಯೇ ಎಂಬ ಪ್ರಶ್ನೆ ಕಾಡದೇ ಇರದು ಇದಕ್ಕೆ ಒಂದನ್ನು  ಪಡಿಬೇಕಿದ್ದರೆ ಇನ್ನೊಂದನ್ನು ಕಳೆದು ಕೊಳ್ಳ ಬೇಕು ಎಂಬ ಸಿದ್ದ  ಉತ್ತರವಿರುವದು ಸರಿಯೇ ಆದರೂ ಇಲ್ಲಿಗದು ಖಂಡಿತ ವಾಗಿಯೂ ಅನ್ವಯಿಸುದಿಲ್ಲ ಕರಾವಳಿ ಯಲ್ಲಿ ಈಗಾಗಲೇ ಹಲವಾರು ಜಲವಿದ್ಯುತ್ ಕೇಂದ್ರ ಹಾಗೂ ಉಷ್ಣ ವಿದ್ಯುತ್ ಸ್ಥಾವರ ಇರುವದರಿಂದ ಕರಾವಳಿ ಪ್ರದೇಶಕ್ಕೆ ಖಂಡಿತವಾಗಿಯೂ ವಿದ್ಯುತ್ ಅಭಾವವಿಲ್ಲಾ . ಇದು ಇನ್ನ್ಯಲ್ಲಿಗೋ ಬೇಕಾಗಿರ್ವುದರಿಂದ ಇಲ್ಲಿ  ಸ್ಥಾವರವನ್ನು ನಿರ್ಮಿಸಲು ಮುಂದಾಗಿದ್ದಾರೆ . ಎಲ್ಲಿ ವಿದ್ಯುತ್ ಅಗತ್ಯವೋ ಅಲ್ಲಿ ನಿರ್ಮಾಣ ಕಾಣಲಿ ಎಂಬುದು ನಿಡ್ಡೊಡಿ ಉಳಿವಿನ ಹೋರಾಟ ಗಾರರ ಬಲ ವಾದ ಕೂಗಾಗಿದೆ . ನಿಜಕ್ಕೂ ಈ ಮಾತು ವಾಸ್ತವರ್ಹವೂ ಕೂಡ ಹೌದು . ನಿಡ್ಡೊಡಿ ಬಗ್ಗೆ  ಯಾರೂ ನಿರ್ಲಕ್ಷೆ ವಹಿಸ ಬಾರದು ನಿಡ್ಡೊಡಿ ಪರಿಸರ ಉಳಿಸಿಕೊಳ್ಳಬೇಕು ಪ್ರಯತ್ನ ಪಟ್ಟು ನಿದ್ದೋಡಿ ಯಲ್ಲಾಗುವ ಸ್ಥಾವರವನ್ನು  ಬೇರೆಡೆಯಲ್ಲಿ ನಿರ್ಮಿಸಲು ಒತ್ತಡ ತರುವಲ್ಲಿ ಸರ್ವರೂ ಒಗ್ಗೂಡ ಬೇಕಾಗಿದೆ . 

ಮಂಗಳವಾರ, ಜುಲೈ 16, 2013

ಎಂದೋ ನಡೆಯಬೇಕಿತ್ತು ?!

 ಇದು ಎಂದೋ  ನಡೆಯಬೇಕಾಗಿತ್ತು ಅಂತೂ ಈಗ ಕಾಲ ಕೂಡಿ ಬಂದಿದೆಯೇನೊ ಎನ್ನಬಹುದು  ಸಂಸ್ಕ್ರತಿ -ಸಭ್ಯತೆಗೆ ಹೆಸರಾದ ಕರಾವಳಿ ಜಿಲ್ಲೆಯಲ್ಲಿ ಒಂದು  ಕ್ರಷ್ಣನ ನಾಡು ಉಡುಪಿ . ಮಣಿಪಾಲ್ ವಿಶ್ವವಿಧ್ಯಾನಿಲಯ ಜಗತ್ಪ್ರಸಿದ್ದ. ರಾಜ್ಯದ ಇತರ ಜಿಲ್ಲೆಗ ಳಿಂದ ಹಾಗೂ ದೇಶದ ಇತರ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ವಿಧ್ಯಾರ್ಜನೆಗೆ ಮಣಿಪಾಲ್ ತಾಂತ್ರಿಕ ಮತ್ತು ವೈದ್ಯಕೀಯ ವಿಧ್ಯಾಲಯನ್ನು ಆಶ್ರಯಿಸಿಕೊಂಡಿರುವವರ ಸಂಖ್ಯೆ ಬಲು ದೊಡ್ಡದು.  

'ಮಣಿಪಾಲ್ ಒಂದು ಮಿನಿ ಅಮೇರಿಕಾ '?! : ವಾಸ್ತವಕ್ಕೆ ಮಣಿಪಾಲನ್ನು ಒಂದಿರುಳಿನಲ್ಲಿ ಬೆಲೆ ಕೊಟ್ಟು ಆಲೋಚಿಸಿದರೇ ನಮ್ಮ ಮನ:ಪಟಲದಲ್ಲಿ ಸದ್ದಿಲ್ಲದೇ ಮಣಿಪಾಲ್ ಎಂಬುದು ಮಿನಿ ಅಮೇರಿಕಾ ಎಂಬ ಕಲ್ಪನೆ ಮೂಡಿ ಮರೆಯಾಗದೇ ಇರದು .ಕಾರಣ , ಪಾಶ್ಚತ್ಯ ಸಂಸ್ಕ್ರತಿಯ ಜೊತೆಗೆ ಅದರ ಅಪ್ಪಳಿಕೆಯ ಪ್ರಭಾವವನ್ನು ಹೊಂದಿರುವ ,ಅದಕ್ಕೆ ಮಾರು ಹೋಗುವ ಉಳ್ಳವರ ಪಾಲಿ ನೊಂದಿಗೆ ಮಣಿಪಾಲ್ ಯುನಿವರ್ಸಿಟಿ ಹತ್ತಿರದ ಸಂಬಂಧವನ್ನು ಹೊಂದಿರುವುದರಿಂದ ಅವರುಗಳ ಭಾಷೆ ,ವೇಷ - ಭೂಷಣ ,ತಿಂಡಿ - ತೀರ್ಥ ಎಲ್ಲಾವೂ ಪರಕೀಯ ರೀತಿ -ನೀತಿಯನ್ನು ಅಳವಡಿಸಿ ಕೊಂಡಿದ ಜೊತೆಗೆ ಮಣಿಪಾಲ್ ಒಂದು ಪುಟ್ಟ ಪ್ರಾಂತ್ಯವಾದರೂ ಮುಗಿಲೆತ್ತರಕ್ಕೆ ಪಸರಿಸುತ್ತಿರುವ ಕಟ್ಟಡಗಳು,ಕಾಂಗ್ರೇಟ್  ಕಾಡುನ್ನು ತನ್ನ ತೆಕ್ಕೆಗೆ ಹಾಕಿ ಕೊಳ್ಳುತ್ತಿದೆ , ತುಂಡುಡುಗೆ ಉಟ್ಟು , ಹೆಗಲ ಮೇಲೆ ಕೈ ಹಾಕಿ ಕೊಂಡು ಹೊತ್ತು -ಗೊತ್ತಿಲ್ಲದೇ ಎಲ್ಲೇಂದರಲ್ಲಿ ಅಲೆದಾಡುತ್ತಿರುವ ಜಂಟಿ ,ಒಂಟಿ ನಡುಗೆಯ ವಿದ್ಯಾಮಾನದ ಲ್ಲಿರುವ ಮಣಿಪಾಲ್ ಒಂದು ಮಿನಿ ಅಮೇರಿಕ ಎಂಬ ಭಾವನೆ ಸದ್ದಿಲ್ಲದೇ ಮೊಳಕೆ ಒಡೆಯುತ್ತದೆ . ಇಂತಿಪ್ಪ ಪರಿಸ್ತಿತಿಯಲ್ಲಿ ಅಮೇರಿಕಾದಲ್ಲಿ ಚಾಲ್ತಿ ಯಲ್ಲಿರುವ ಪದ್ಧತಿ ನಮ್ಮಲಿ ಇಲ್ಲದಿರುವದರಿಂದ ಮೊನ್ನೆ ಈ ಅತ್ಯಾಚಾರ ಪ್ರಕರಣ ದಾಖಲಾಗಿರಬಹುದು . ಅಷ್ಟಕ್ಕೂ ವಾಸ್ತವದ ಸಂಗತಿ ಯನ್ನು ಗಮನಿಸುತ್ತಿದ್ದರೆ  ನಡೆದ ಘಟನೆಯೆನೋ ಅಷ್ಟೋಂದು ಮಹತ್ವ ಪೂರ್ಣಾ ವಾದುದ್ದಲ್ಲ. ಹಲವಾರು ದಶಕಗಳ ಇತಿಹಾಸವನ್ನು ಹೊಂದಿರುವ ಈ  ಯುನಿವರ್ಸಿಟಿ ವಿಧ್ಯಾರ್ಥಿಗಳ ನಡವಳಿಕೆಯಿಂದ ಎಂದೋ ಇದು ಅನುರಣಿಸಬೇಕಿತ್ತು.  ಆದರೆ ಮೇಲೆ ತಿಳಿಸಿದಂತೆ ಸಭ್ಯತೆ -ಸಂಸ್ಕರ್ತಿಗೆ ಹೆಸರಾದ  ಬುದ್ದಿವಂತರ ನಾಡಾದುದರಿಂದ  ಮೊನ್ನೆ -ಮೊನ್ನೆ ಜರುಗಿದೆ ಅಷ್ಟೇ.
ಅಷ್ಟಕ್ಕೂ ಅತ್ಯಾಚರಿಗಳದ್ದೇ ಮಹಾನ್ ತಪ್ಪು ಎಂದೇ ಬಿಂಬಿಸಲಾಗುತ್ತಿದೆಯಾದರೂ , ಎರಡು ಕೈ ತಟ್ಟಿದರೆ ಮಾತ್ರ ಚಪ್ಪಾಳೆ ಎಂಬ ಕಿಂಚಿತ್ ಅರಿವು ಮೂಡಬಾರದೇಕೆ ? ಆಕರ್ಷಣೆ / ಆಸ್ಪದ ವಿಲ್ಲದೇ ಯಾವುದೇ ಅತ್ಯಾಚಾರ ಪ್ರಕರಣ ದಾಖಲಾಗಲು ಸಾಧ್ಯವಿಲ್ಲ. ತಪ್ಪು ಎರಡು ಕಡೆಯಿಂದಲೂ ಇದೆ. ಇನ್ನು ಸಂಕ ಮುರಿದಲ್ಲೆ ಸ್ನಾನ ಮಾಡಲು ಬಯಸುವ ಕೆಲವು ಕಾಮಾಂಧರು  ಹಿಡಿದಿಡಲು ಬಹಳ ಕಷ್ಟ. ಮೊನ್ನೆ ಘಟನೆಯ ಬಗ್ಗೆ ಹೇಳ ಬೇಕಂದರೆ ಒಂಬ್ಬಂಟಿಯಾಗಿ ಸಾಗುವ ಅವಶ್ಯಕತೆ ಆ ವಿಧ್ಯಾರ್ಥಿ ನೀಗೆ ಇತ್ತೆ? ಇದನ್ನೆ ಅಸ್ತ್ರವಾಗಿ ಕಾಮ ಪಿಪಾಸುಗಳು ಬಳಸಿ ಕೊಂಡಿದ್ದರು. ದೆಹಲಿಯಲ್ಲಿ ನಡೆದ ಘಟನೆಯೂ ಸಹಾ ಇದಕ್ಕಿಂತ ತೀರ ಭಿನ್ನವಾಗಿರಲಿಲ್ಲ. ಎರಡು ಘಟನೆಗಳೂ ಒಂದೇ ರೀತಿಯದ್ದವು. ಎನೇ ಯಾಗಲಿ ಗಾಂಧೀಜಿ ಕಂಡ ಕನಸು ,ಕನಸ್ಸೇ ಹೊರತು ನನಸಾಗುವುದಿಲ್ಲ. ನಮ್ಮ ತನ ,ನಮ್ಮ ಜಾಗ್ರತೆ ನಮ್ಮಲ್ಲಿದ್ದರೇ ಇಂಥಹ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಬಹುದು ಇಲ್ಲದಿದ್ದರೆ ಇದು ನಿಂತ ನೀರಲ್ಲ.