ಸೋಮವಾರ, ಆಗಸ್ಟ್ 29, 2011

ಕತ್ತಲೆ ಬೆಳಕಿನ ಸಂಜೀವಿನಿ : ನಮ್ಮೂರ ವಾರಾಹಿ ಭೂ ಗರ್ಭ ವಿದ್ಯುದಾಗಾರ

ಕತ್ತಲೆ ಬೆಳಕಿನ ಸಂಜೀವಿನಿ : ನಮ್ಮೂರ ವಾರಾಹಿ ಭೂ ಗರ್ಭ ವಿದ್ಯುದಾಗಾರ
ಕರ್ನಾಟಕ ರಾಜ್ಯದ ಮೊಟ್ಟ-ಮೊದಲ  ಭೂ- ಗರ್ಭ ವಿದ್ಯುದಾಗಾರ (undergrond powerhouse ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ .ಸರ್ .ಎಂ .ವಿಶ್ವೇಶರಯ್ಯ ನವರ ದಿವ್ಯ ದ್ರಸ್ಟಿಯ ಕ್ರಪಕಟಾಕ್ಷದಿಂದ, ಪಿಕ್- ಆಪ್ ಡ್ಯಾಂ ಮತ್ತು ಮಾಣಿ ಡ್ಯಾಂ ನಿಂದ ವಾರಾಹಿ ನದಿಯಾಗಿ ನೀರನ್ನು ಹಾಹಿಸಿ  ಸುಮಾರು 5 .08  ದಶಲಕ್ಷ ಘನ ಮೀ .ಗಾತ್ರ ದ ಬಂಡೆಯನ್ನು ಕೊರಯಿಸಿ, 6 .9 ಕಿ.ಮೀ. ಸುರಂಗ ಮಾರ್ಗದ ಹೊಂದಿರುವ ಈ ವಿದ್ಯುದಾಗಾರ ನಮ್ಮೂರ ಹೆಮ್ಮೆಯ ಕೀರ್ತಿ ಪ್ರಕಾಶತೆಗೆ, ಹಿಡಿದ ಕೈಗನ್ನಡಿ ...
ಭೂ -ಗರ್ಭ ಜಲವಿದ್ಯುದಾಗರದ ಸ್ವಾಗತ ಹೊರ ನಾಮಫಲಕ
ವಾರಾಹಿ ನದಿ : ವಾರಾಹಿ ನದಿ ಯು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಆಗುಂಬೆಯ  ಸಮೀಪ ಇರುವ ಹೆಬ್ಬಾಗಿಲು ಎಂಬಲ್ಲಿ ಸಮುದ್ರ ಮಟ್ಟದಿಂದ ಸುಮಾರು 730 ಮೀ . ಎತ್ತರದಲ್ಲಿ ಉಗಮಿಸಿ, ಕುಂದಾಪುರ ದ ಬಳಿ ಅರಬ್ಬಿಸಮುದ್ರ ವನ್ನು ಸೇರುತ್ತದೆ .ವಾರಾಹಿಯು ಅರಬ್ಬಿಸಮುದ್ರ ಕ್ಕೆ ಸೇರುವ ಮೊದಲು ರಾಜ್ಯದ ಅನೇಕ ಮನೆಗಳಿಗೆ ಬೆಳಕಾಗಿ, ಕೈಗಾರಿಕೆಗಳಿಗೆ ಪೂರಕ ಶಕ್ತಿ ಯಾಗಿ ನಿಲ್ಲುತ್ತಾಳೆ .
ವಾರಾಹಿ ಯೋಜನೆ ಯ ಮೊದಲ ಹಂತ ವು 3 ಅಣೆಕಟ್ಟುಗಳನ್ನು ಹೊಂದಿದ್ದು,ಒಂದು ಆಣೆಕಟ್ಟು ವಿದ್ಯುದಾಗಾರ ಮತ್ತು ಒಂದು ಭೂ ಗರ್ಭ ವಿದ್ಯುದಗಾರವನ್ನು ಹೊಂದಿದೆ 
1 ) ಮಾಣಿ ಆಣೆಕಟ್ಟು : ಹೊಸನಗರ ತಾಲೂಕು,ಶಿವಮೊಗ್ಗ ಜಿಲ್ಲೆಯ ಮಾಣಿ ಎಂಬ ಹಳ್ಳಿಯ ಹತ್ಹಿರವಿದ್ದೂ ,ಇದರ ಎತ್ತರ 5 .9  ಮೀ.ಮತ್ತು ಉದ್ದ 585 ಮೀ. ಜಲಾಶಯದ ಪೂರ್ಣ ಮಟ್ಟ 594 .36 ಮೀ. ಮಾಣಿ ಅಣೆಕಟ್ಟಿಗೆ ಎಡದಂಡೆ ಯಲ್ಲಿ 9 ಹಾಗೂ ಬಲ ದಂಡೆಯಲ್ಲಿ 3 ಮಣ್ಣಿನ ಪಲ್ಲಣ ಕಟ್ಟೆ(saddledam ) ಗಳನ್ನೂ ನಿರ್ಮಿಸಲಾಗಿದೆ .
2 )ಪಿಕ್ ಆಪ್ ಡ್ಯಾಮ್: ಮಾಣಿ ಅಣೆಕಟ್ಟಿನ ಕೆಳ ಹಂತದಲ್ಲಿ ಕುಂಚಿಕಲ್ಲು  ಅಭಿ ಜಲಪಾತ ದ ನಿರ್ಮಾಣದ ಹಂತ ದಲ್ಲಿದ್ದೂ, ಇದರ ಎತ್ತರ 37 .60 ಮೀ .ಮತ್ತು ಉದ್ದ 244 ಮೀ .ಈ ಜಲಾಶಯದ ನೀರಿನ ಮಟ್ಟ EL 563 .88 ಮೀ . ಈ ಜಲಾಶಯಕ್ಕೆ ಆಧಾರವಾಗಿ ಬಲ ಪಾರ್ಶ್ವ ದಲ್ಲಿ ಮೂರು ಮಣ್ಣಿನ ಪಲ್ಲಣ ಕಟ್ಟೆ ಗಳನ್ನೂನಿರ್ಮಿಸಲಾಗಿದೆ .
         ಮಾಣಿ ಡ್ಯಾಮ್ ಮತ್ತು ವಿದ್ಯುದಾಗರದ  
3 ) ಹುಲಿಕಲ್ ಫೋರ್ಬೆ ಆಣೆಕಟ್ಟು : ವಾರಾಹಿ ನದಿಗೆ ಸೇರುವ ಹುಲಿಕಲ್ ಹೊಳೆಗೆ ಹುಲಿಕಲ್ಲಿನ ನಿರ್ಮಿಸಲಗಿದ್ದೂ,40 ಮೀ. ಎತ್ತರ ,422 ಮೀ .ಉದ್ದದ್ದಾಗಿದೆ. ಈ ಜಲಾಶಯದ ಪೂರ್ಣ ಮಟ್ಟ EL 563 .88 ಮೀ .ಮಾಣಿ ಆಣೆಕಟ್ಟು ,ವಿದ್ಯುದಾಗಾರ ದಿಂದ ಉತ್ಪಾದಿಸಲಾಗುವ ವಿದ್ಯುತನ್ನು ಸಾಗಣಿ ತಂತಿಜಾಲದ  ಮೂಲಕ  ಶಿವಮೊಗ್ಗ -ಮಂಗಳೂರು ಸಾಗಣಿ ತಂತಿ ಜಾಲಕ್ಕೆ ಸೇರಿಸಲಾಗಿದೆ ..
ಭೂ-ಗರ್ಭ ವಿದ್ಯುದಾಗಾರ : ಸುಮಾರು 5 .08 ದಶಲಕ್ಷ ಘನ ಮೀ. ಗಾತ್ರದ ಬಂಡೆಯನ್ನು ಕೊರೆದು ,6 .9 ಕೀ. ಮೀ . ಸುರಂಗ ಮಾರ್ಗ ,1 ,60 ,000 ಮೆಟ್ರಿಕ್ ಟನ್ ಸಿಮೆಂಟ್ ,26 ,000 ಮೆಟ್ರಿಕ್ ಟನ್ ಉಕ್ಕಿನ ಬಳಕೆ ಇಂದ ನಿರ್ಮಾಣವಾಗಿದೆ .335 ಕೋಟಿ ರೂ. ವೆಚ್ಚದ 115 ಮೆಗಾವ್ಯಾಟ್ ನ 2 ಘಟಕ ನಿರ್ಮಾಣವನ್ನು , 1970 ರಲ್ಲಿ ಆರಂಭಿಸಿ ,1989 -90 ಕ್ಕೆ ಪೂರ್ಣ ಗೊಳಿಸಿ 11 -05 -1990 ರಂದು ಅಂದಿನ ಮುಖ್ಯ ಮಂತ್ರಿ ಯಾಗಿದ್ದ ,ಶ್ರೀ ವೀರೇಂದ್ರ ಪಾಟೀಲ್ ರವರ ನೇತ್ರುತ್ವದಲ್ಲಿ ಉದ್ಗಾಟನೆ ಗೊಂಡಿತು ..
ಭೂ -ಗರ್ಭ ಜಲವಿದ್ಯುದಾಗರದ ಒಳ ನೋಟ
ಎರಡೆನೇ ಹಂತದ ಯೋಜನೆ : 2007 ರಿಂದ 2010 ರ ಕಾಲಾವಧಿ ಯಲ್ಲಿ 286 .06 ಕೋಟಿರೂ. ವೆಚ್ಚದ 115 *2 ಮೆಗಾವ್ಯಾಟ್  ನ 2 ನೆ ಘಟಕ ವನ್ನು ಸ್ಥಾಪಿಸಲಾಗಿದ್ದು ,ಇತ್ತಿಚೆಗೆ ಅಂದರೆ 10 -01 -2010 ರಂದು ಮಾಜಿ ಮುಖ್ಯ ಮಂತ್ರಿ ಯದ ಶ್ರೀ ಯಡಿಯೂರಪ್ಪ ನವರಿಂದ ಉದ್ಗಾಟನೆ ಗೊಂಡಿತು
ಇಲ್ಲಿಂದ ಹೊರ ಹಾಕುವ ನೀರನ್ನು 4 ಮೀ. ಎತ್ತರದ ಡ್ಯಾಮ್ನಿಂದ ಅಡ್ಡಗಟ್ಟಿ 2 .6 ಎತ್ತರದ ಸುರಂಗ ಮಾರ್ಗದ ಮೂಲಕ ಹರಸಿ  ಉತ್ಪಾದನೆ ಯನ್ನು ಖಾಸಗಿ ಕಂಪನಿಯಾದ ' ಸಂಡೂರ್ ಪವರ್ ಕಂಪನಿ ಯು ನಿರ್ವಹಿಸುತಿದ್ದೂ,30 ವರ್ಷಗಳ ಕಾಲಾವಧಿಯ ನಂತರ ಸರ್ಕಾರಕ್ಕೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ .ಅಲ್ಲಿಂದ ಹೊರಬಿಡುವ ನೀರನ್ನು ತದನಂತರ ಈ ನೀರನ್ನು ಸಿದ್ದಾಪುರ ದ ಬಳಿ ಇರುವ ಜಲಾಶಯದಲ್ಲಿ ಶೇಖರಿಸಿ ಈ ನೀರನ್ನು ನೀರಾವರಿಗೆ ಉಪಯೋಗಿಸಲಾಗುತಿದೆ..
ಭೂ -ಗರ್ಭ ಜಲವಿದ್ಯುದಾಗರದ ಸ್ವಾಗತ ಹೊರ ಗೋಪುರ
ರಾಜ್ಯ ದಲ್ಲಿ ಹಲವಾರು ಶಾಕೊತ್ಪನ್ನ ಜಲ ವಿದ್ಯುತ್ ಆಗರಗಳಿದ್ದೂ,ಸತತ ಸರದಿ ಪ್ರಕಾರ ಮೂರು ಜಲ ವಿದ್ಯುತ್ ಆಗರ  ಅದರಲ್ಲೂ ಭೂ-ಗರ್ಭ ಜಲವಿದ್ಯುತ್ ಆಗರ ಇದು  ರಾಜ್ಯದಲ್ಲಿಯೇ ಪ್ರ -ಪ್ರಥಮವಾಗಿದೆ ..ದಿನ -ನಿತ್ಯ ಹಲವರು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರದೇಶ ವನ್ನು ಎಲ್ಲರೂ ನೋದಬೇಕದುದ್ದೆ .. ಇದರ ಅಂದ ವನ್ನು ನೋಡಲು ಬಹು ಚೆಂದ ..ಪ್ರವಾಸಿಗರು ಕೇವಲ ಕಣ್ಣಿನಲ್ಲಿಯೇ ತಂಪು ಮಾಡಬೇಕೆ ವಿನಹ ಛಾಯಾ -ಚಿತ್ರ ಕ್ಕೆ ಅವಕಾಶ ಇಲ್ಲ ..........
                                                                              
                                                                                                                           * ಶಿವಕುಮಾರ್




 

 


ಈ ಹಾಡು ಚನ್ನಾಗಿದೆ , ನೀವು ಒಂದ್ಸಲ ಕೇಳಿ

ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ನೀನೆ ಹೇಳು
ಇಂದು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು .. ಹೇಳು ನೀನು
ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಗಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ನೀನೆ ಹೇಳು
ನನ್ನ ಎದೆಯ ಸಣ್ಣ ತೆರೆಯ ದಾರವಾಹಿ ನಿನ್ನ ನೆನಪು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಹುಸಿರು ಹಾರಿ ಹೋಗುವ ಆಗೇ ಬಿಗಿದು ತಬ್ಬಿ ಕೊಳ್ಳು ನೀನು
ಮತ್ತೆ ಮತ್ತೆ ನಿನ್ನು ಹುಸಿರು ನೀಡುತ ಹುಳಿಸು ನನ್ನನು
ದಾರಿಯಲ್ಲಿ ಬೊಕ್ಕೆ ಇಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ನೀನೆ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು .. ಹೇಳು ನೀನು

ಶುಕ್ರವಾರ, ಆಗಸ್ಟ್ 26, 2011

ನನ್ನ ಸ್ನೇಹಿತನಿಗೆ ಮನಸ್ಸು ಏನೇನೂ ಹೇಳಿತು ನೋಡೋಣ ಬನ್ನಿ ..

net
ಮನಸ್ಸು ಕೇಳಿತು, ನೀನು ಯಾರು ಎಂದು ?
ನಾನು ಹೇಳಿದೆ, ಅದು ನಾನೆ ಎಂದು..
ಮನಸ್ಸು ಕೇಳಿತು, ನಾನು ಯಾರು ಎಂದು ?
ನಾನು ಹೇಳಿದೆ, ಅದು ನೀನೆ ಎಂದು..
ಮನಸ್ಸು ಕೇಳಿತು, ನಿನ್ನ ಸ್ನೇಹಿತರು ಯಾರು ಎಂದು ?

ನಾನು ಹೇಳಿದೆ, ಒಳ್ಳೆಯ ಮನಸ್ಸು ಇರುವವರು ಎಂದು..
ಮನಸ್ಸು ಕೇಳಿತು, ನನ್ನ ಸ್ನೇಹ ಮಾಡುತ್ತಿಯ ಎಂದು....
ನಾನು ಹೇಳಿದೆ, ಒಳ್ಳೆಯ ಮನಸ್ಸಿದ್ದರೆ ಸರಿ ಎಂದು....
ಮನಸ್ಸು ಹೇಳಿತು, ಮನಸ್ಸುಗಳ ಮಾತೇ ಮಧುರ....
ನಾನು ಕೇಳಿದೆ, ಮಧುರವಾದ ಮಾತುಗಳನ್ನು....
ಮಾತನಾಡುವವರು ಯಾರಿದ್ದಾರೆ ಇಲ್ಲಿ ಎಂದು....
ಮನಸ್ಸು ಹೇಳಿತು, ಒಳ್ಳೆಯ ಮನಸ್ಸಿರುವವರು....
ಹುಡುಕಿದರೆ ಖಂಡಿತವಾಗಿಯೂ ಸಿಗುತ್ತಾರೆ ಎಂದು..
ನಾನು ಈಗ ಒಳ್ಳೆಯ ಮನಸ್ಸಿರುವವರನ್ನು....
ಹುಡುಕುತಿದ್ದೇನೆ. ನಿಮಗೆ ನನ್ನೊಡನೆ ಮತ್ತು....
ನನ್ನ ಮನಸ್ಸಿನೊಡನೆ ಮಾತನಾಡುವ ಮನಸ್ಸು..
ಇದ್ದರೆ ನನ್ನ ಸ್ನೇಹ ಮಾಡಿ. ಮನಸ್ಸಿನ ಮಧುರ..
ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನನ್ನೊಡನೆ..
ಮತ್ತು ನನ್ನ ಮನಸ್ಸಿನೊಡನೆ ಮಾತನಾಡಿ. ನನ್ನ ..
ಮಧುರ ಮನಸ್ಸಿನ ಸ್ನೇಹ ಮಾಡಿ. ಮನಸ್ಸನ್ನು ಗೆದ್ದು..
ಮನಸ್ಸಿನಲ್ಲಿ ಮನೆ ಮಾಡಿ ಎಂದು ನಿಮ್ಮ ಮನಸ್ಸನ್ನು..
ಕೇಳುವ ಒಂದು ಒಳ್ಳೆಯ ಮನಸ್ಸಿನ  ನಾನು..
ನನ್ನ ಮನಸ್ಸಿನ್ನ ಸ್ನೇಹ ಮಾಡುವ ಮನಸ್ಸು ಯಾರಿಗಿದೆ ?
ಒಳ್ಳೆಯ ಮನಸ್ಸಿದ್ದರೆ ಸ್ನೇಹ ಮಾಡಿ. ಇಲ್ಲವಾದರೆ ಮರೆತುಬಿಡಿ
.
ಮನಸ್ಸಿನೊಡನೆ ಸ್ನೇಹ ಮಾಡಿ .
---------------------------------------------

                                                                       -  ಸಂಗ್ರಹ 

ಈ ಕವನ ನಂಗಿಷ್ಟ ಆಯಿತು ......

 ಕಂಡ ಮನದ ಮಾತಿಗೆ ! ಮೌನದಲೇ ಒಪ್ಪಿಗೆ !
ಅರಿತುಕೊಂಡ ಮನ ! ಸೋತಿದೆ ನಿನ್ನ ಸ್ನೇಹದ ಪ್ರೀತಿಗೆ !
ಇಷ್ಟಪಟ್ಟು ಕಂಡ ಕನಸದು ! ಸ್ನೇಹವೆಂಬ ದೀವಿಗೆ !
ಬೆಳಗಲಿ ಇಬ್ಬರ ಮನವ ! ನಿರ್ಮಲ ಸ್ನೇಹದ ರೀತಿಗೆ !
ಬದುಕು ಒಂದೇ ! ಭರವಸೆ ಬೇಕು !
ಆದರೆ ಹೃದಯ ವೆರಡು ಬೆಳಗಬೇಕು !
ಸ್ನೇಹದ ಹೊಸ ಕಾವ್ಯವ ಬರೆಯಬೇಕು !
ಹೊಸ ರೀತಿಯಲಿ ಸ್ನೇಹದ ಲೋಕ ಕಟ್ಟಬೇಕು !
ನಾನು ಹೆಚ್ಚು , ನೀನು ಹೆಚ್ಚು ಎಂಬುದೆಲ್ಲ ಮುಖ್ಯವಲ್ಲ !
ನಿರ್ಮಲ ಮನದ ಸ್ನೇಹ ಇದ್ದರೆ ಚಿಂತೆಯಿಲ್ಲ !
ನೀನು ನಾನು ಒಂದೇ ಇಲ್ಲಿ ಸ್ನೇಹದ ಲೋಕದಿ !
                                                                       
ತೊಳೆದು ಹಾಕುವ ದುಃಖ ಮನಸಿನ ಬೇಗುದಿ !
                           ಕಟ್ಟಿಕೊಂಡರೆ ಕನಸಾಗುತ್ತದೆ ಸ್ನೇಹ ! ಇಬ್ಬರ ನಡುವಿನಲ್ಲಿ !
                                                              ಹಚ್ಚಿಕೊಂಡರೆ ಬದುಕಾಗುತ್ತದೆ ! ಇಬ್ಬರ ಹೃದಯದಲ್ಲಿ !
                                                                  ಬೆಳಗುತಿರಲಿ ! ಅರಳುತಿರಲಿ ಸ್ನೇಹದ ಸುಮಗಳು !
                                                                 ಬಾಡದಿರಲಿ !ಕಾಡದಿರಲಿ ! ಸ್ನೇಹದ ಭಾವಗಳು !
                                                    ಒಪ್ಪಿಕೊಂಡು , ಅಪ್ಪಿಕೊಂಡರೆ ಎಂತಹ ಸುಂದರ ಬಾಳು !
                                                         ನಗುತಿರಲಿ ಸ್ನೇಹದಲಿ ! ಇಬ್ಬರ ಹೃದಯಗಳು !
                                                             ಬದುಕು ಕರೆದ ಹಾಗೆ ಹೋಗೋಣ ಇಬ್ಬರು !
                                                  ಸಂದಿಸಬೇಕಲ್ಲವೇ ! ಎಂದಾದರೂ ಒಂದು ದಿನ ಒಬ್ಬರನ್ನೊಬ್ಬರು

                                                                                                  - ಸಂಗ್ರಹಿಸಿದ್ದು