ಶನಿವಾರ, ಜುಲೈ 30, 2016

ಸಾವಿನಲ್ಲೂ ವಿಕ್ರತ ಆನಂದ ಪಡುವ ಮನಸ್ಸು ಯಾಕ್ರೀ ?!

ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ನಿನ್ನೆ ಮಧ್ಯಾಹ್ನ ವಿಧಿವಶರಾಗಿದ್ದರು ಅನೇಕ ಮಂದಿ ಅವರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಅದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ರಾಕೇಶ್ ಅವರ ಸಾವಿನಲ್ಲಿ ವಿಕೃತವಾದ ಆನಂದವನ್ನು ಪಡೆದುಕೊಳ್ಳುತ್ತಿದ್ದಾರೆ.
ಕೆಲವು ವಿಕೃತ ಜನತೆ ಜನರ ಶಾಪದಿಂದ ಹೀಗಾಗಿದೆ. ಕೊನೆಗೂ ಸಿದ್ದರಾಮಯ್ಯ ಅವರ ಪುತ್ರ ನಿಧನ ಎನ್ನುವ ಸಂದೇಶವನ್ನು ಒಳಗೊಂಡಿರುವ ವಿಧ -ವಿಧ ವಾದ ಚಿತ್ರ ಸಂದೇಶವನ್ನು ಕ್ರೆಯೆಟ್ ನಾಡಿ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಹಂಚಿಕೊಂಡು ಸಾವಿನ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ನಮ್ಮ ಶತ್ರವಾದರು ಆತನ ಅಥವಾ ಆತನ ಸಂಬಂಧಿಗಳ ಸಾವಿಗೆ ಯಾರಾದರು ಸಂತಾಪ ಪಡಬೇಕು .. ಕನ್ನಡದಲ್ಲಿ ದಿನಪ್ರತಿ ಪ್ರಯೋಗ ವಾಗುವ ಗಾದೆ ಮಾತೇ ಇದೆ ಸಾವು ನೋವು ಗಳನ್ನೂ ಒಳಗೊಂಡ ಘಟನೆ ನಡೆದಾದ ಸಂಬಂದ ಪಟ್ಟವರು ಯಷ್ಟೇ ಶತ್ರು ಗಳಾದರೂ..ಸಾಮನ್ಯವಾಗಿಯೇ ಇನ್ನೊಬ್ಬರ ಜೊತೆ ಹಂಚಿ ಕೊಳ್ಳುತ್ತಾರೆ .
*’’ನಮ್ಮ ಶತ್ರುಗಳಿಗೂ ಇಂಥ ಪರಿಸ್ತಿತಿ ಬರಬಾರದು* ‘’ಎಂದು . ಆದ್ರೆ ನಿನ್ನೆಯ ವಿಚಾರ ಮಾತ್ರ ಬೇಸರವನ್ನು ಉಂಟು ಮಾಡುತ್ತವೆ ..*ಉರಿಯುತ್ತಿರುವ ಬೆಂಕಿಗೆ ತುಪ್ಪ* ಹಾಕಿದ ಹಾಗೆ ಸಾವಿನ ಕುರಿತು ನೂರಾರು ಕಥೆಕಟ್ಟತ್ತಿದ್ದಾರೆ . ಹಾಸ್ಯ ಮಾಡಲಾಗುತ್ತಿದೆ . ಸಾವಿನ ಕುರಿತು ಲೇವಡಿ ಮಾಡುವ ದುಷ್ಟ ಮನಸ್ಸುಗಳು ಕಂಡುಬರುತ್ತಿದೆ ಇದು ನಿಜಕ್ಕೂ ಖಂಡನೀಯ .ಸಿದ್ದರಾಮಯ್ಯನ ಕೆಲವು ವಿರೋಧಿ ನೀತಿ... ದಬ್ಬಾಳಿಕೆಯ ಆಡಳಿತ ನಾವು ವಿರೋಧಿಸುತ್ತೇವೆ, ವಿರೋಧಿಸಬೇಕು ಹೊರತು...ಅಮಾಯಕ ಅವರ ಪುತ್ರನ ಸಾವಿಗೆ ಸಂತೋಷ ಪಡುವ ಕೀಳು ಮನೋಭಾವನೆ ನಮಗೆ ಶೋಭೆ ತರುವ೦ತದ್ದಲ್ಲ .ಸಾವಿಲ್ಲದ ಮನೆ ಎಲ್ಲಿಯಾದರೂ ಇದಿಯೇ.?ಒಬ್ಬರು ಮನೆಯಲ್ಲಿ ಸತ್ತರೇ ಮಾತ್ರ ಅದರ ನೋವು ಗೊತ್ತಾಗಬೇಕಾ?.ಯಾರೇ ಸತ್ತರು ಸಾಂತ್ವನ ಹೇಳೋದು ಮನುಷ್ಯನಾದವನಿಗೆ ಜನ್ಮದತ್ತವಾಗಿರುತ್ತದೆ .
ಗಾಂಧೀ ಸತ್ತಾಗ ಈಡೀ ಜಗತ್ತೇ ಕಣ್ಣೀರು ಹಾಕಲಿಲ್ಲವಾ ?ಡಿ.ಕೆ.ರವಿ ಸತ್ತಾಗ ತನ್ನ ಮನೆ ಮಗ ಸತ್ತಂತೆ ಈಡೀ ಕರ್ನಾಟಕ ಭಾವಿಸಲಿಲ್ಲವೇ ..ದೇವರಿಗೆ ಎಲ್ಲರೂ ಒಂದೇ .ಕಣ್ಣೀರಿಗಗೂ ಬೆಲೆ ಇದೆ. *ಕಾಗೆ ಕುಳಿತುಕೊಳ್ಳವುದಕ್ಕ್ಕೂ ಟೊಂಗೆ ಮುರಿಯೋದಕ್ಕೂ ಸರಿ ಹೋಯ್ತು*ಎಂಬ ಲೋಕನುಡಿಯಂತೆ ಅದಕ್ಕೂ-ಇದಕ್ಕೂ ತಳಕು ಹಾಕಿ ವಿಲಕ್ಷಣ ಚರ್ಚೆ ಮಾಡುವುದು ಸರಿಯಲ್ಲ .ಮರೆಯಾಗದಿರಲಿ ಮಾನವೀಯತೆ ರಾಕೇಶ್ ಸಿದ್ದರಾಮಯ್ಯನವರ ನಿಧನ ನಿಜಕ್ಕೂ ದುರದೃಷ್ಟಕರ .ಅಗಲಿದ ರಾಕೇಶ್ ಸಿದ್ದರಾಮಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ. ಸಿದ್ದರಾಮಯ್ಯನವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ.. ಕೊನೆಯದಾಗಿ ಒಂದೇ ಒಂದು ಮಾತು *ಅನಿಷ್ಟಕ್ಕೆಲ್ಲಾ ಶನೀಶ್ವರ ನೇ ಕಾರಣನಲ್ಲ* !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ